ದಿನಾಂಕ: 03-08-2016 ರಂದು 8-30 ಪಿ.ಎಂ.ಕ್ಕೆ. ಮುನಿರಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಪಿರ್ಯಾದಿದಾರರಿಂದ ಹೇಳಿಕೆ ಪಿರ್ಯಾದಿಯನ್ನು ಪಡೆದುಕೊಂಡಿದ್ದು ದಿನಾಂಕ: 03-08-2016 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಮೃತ ದ್ಯಾಮಪ ತಂದೆ ದುರುಗಪ್ಪ ಆದೋನಿ ವಯ: 25 ವರ್ಷ ಸಾ: ಕುಟಗನಹಳ್ಳಿ ಇತನು ಕಾಸನಕಂಡಿ ಸೀಮಾದಲ್ಲಿರುವ ಶರಣಬಸವೇಶ್ವರ ಮೃನಿಂಗ್ ಕಂಪನಿಯಲ್ಲಿ ಕೆಲಸ ಮಾಡುವ ಕಾಲಕ್ಕೆ ಕೃಷರ ಬೆಲ್ಟಗೆ ಸಿಕ್ಕಿ ಮೃತಪಟ್ಟಿದ್ದು ಇರುತ್ತದೆ. ಈ ಘಟೆನಯು ಸದರಿ ಕಂಪನಿಯ ಮಾಲೀಕರು ಕೃಷರನಲ್ಲಿ ಯಾವುದೇ ಸುರಕ್ಷಿತ ಸಲಕರಣೆಗಳನ್ನು ಅಳವಡಿಸದೇ ಇದ್ದುದರಿಂದ ಈ ಘಟನೆಯು ಜರುಗಿರುತ್ತದೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 219/2016
ಕಲಂ: 78(3) Karnataka Police Act.
ದಿನಾಂಕ: 03-08-2016 ರಂದು ಸಂಜೆ 6-15 ಗಂಟೆಗೆ ಮಾನ್ಯ ಪಿ.ಎಸ್.ಐ
ಸಾಹೇಬರು ಕುಷ್ಟಗಿ ಪೊಲೀಸ್ ಠಾಣೆ ರವರು ಹಾಜರುಪಡಿಸಿದ ವರದಿ, ಪಂಚನಾಮೆ ಸಾರಾಂಶವೆನೆಂದರೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ
ಜೂಜಾಟ ನಡೆದಿದೆ ಅಂತಾ ಮಾಹಿತಿ ಮೇರೆಗೆ ಹೋಗಿದ್ದು ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ
ಹೆಚ್.ಸಿ-108 ಪಿ.ಸಿ-109,117,161,24,393 ಮತ್ತು ಸರಕಾರಿ ಜೀಪ್ ಚಾಲಕ
ಎ.ಪಿ.ಸಿ-38 ಶಿವಕುಮಾರ ಎಲ್ಲರೂ ಹೋಗಿ ಕುಷ್ಗಗಿ
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ದೂರದಲ್ಲಿ ನಿಂತು ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ
ವ್ಯಕ್ತಿ ಜನರಿಂದ ಹಣ ಪಡೆಯುತ್ತಾ ಮಟಕಾ ಜೂಜಾಟದಲ್ಲಿ ತೊಡಗಿ ಮಟಕಾ ಚೀಟಿಗಳನ್ನು
ಬರೆದುಕೊಡುತ್ತಿದ್ದನು. ಆಗ ನಾವು ಒಮ್ಮಲೇ ಎಲ್ಲರೂ ರೇಡ ಮಾಡಲು ಪೊಲೀಸರನ್ನು ನೋಡಿ ಮಟಕಾ
ಬರೆಯಿಸುತ್ತಿದ್ದ ಜನ ಓಡಿ ಹೋಗಿದ್ದು,
ಮಟಕಾ ಬರೆಯುದ್ದವನು ಸಹ ಓಡಿ ಹೋಗಲು ಪ್ರಯತ್ನಿಸುತ್ತಿದ್ದಾಗ ಸದರಿಯವನ್ನು ಹಿಡಿದು
ವಿಚಾರಿಸಿದಾಗ ಹೆಸರು ಆನಂದ
ತಂದೆ ಭೀಮರಾಜ ಮಾನ್ವಿ ವಯ:
19 ವರ್ಷ, ಜಾ: ವಾಲ್ಮೀಕಿ ಉ: ಕೂಲಿ ಕೆಲಸ ಸಾ: ಇಂದಿರಾ ನಗರ ಕುಷ್ಟಗಿ ಅಂತಾ ತಿಳಿಸಿದ್ದು
ಸದರಿಯವನು ಜನರಿಂದ ಹಣ ಪಡೆದು 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಮಟ್ಕಾ ಜೂಜಾಟದಲ್ಲಿ
ತೊಡಗಿದ್ದನ್ನು ಒಪ್ಪಿಕೊಂಡನು. ಸದರಿಯವನನ್ನು ಅಂಗ ಜಡತಿ ಮಾಡಿದಾಗ ಮಟಕಾ ಜೂಜಾಟದ ಹಣ 3800=00 ರೂಪಾಯಿ ನಗದು ಹಣ, ಒಂದು ಬಾಲ್ ಪೆನ್ನು ಹಾಗೂ
ಒಂದು ಮಟ್ಕಾ ಬರೆದ ಪಟ್ಟಿ ಹಾಗೂ
ಲೆನೋವಾ ಮೋಬೈಲ್ ಅಂ.ಕಿ.800-00 ರೂ ಇವುಗಳನ್ನು ಜಪ್ತ ಪಡಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡೆನು.
3] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 172/2016
ಕಲಂ: 78(3) Karnatka Police Act.
ದಿನಾಂಕಃ- 3-8-2016 ರಾತ್ರಿ 8-15 ಗಂಟೆಯ ಸುಮಾರಿಗೆ ಪಿ.ಎಸ್.ಐ
ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ
ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ದಿನಾಂಕ 03-08-2016 ರಂದು ಸಾಯಂಕಾಲ 6-30 ಗಂಟೆಯ ಸುಮಾರಿಗೆ
ಸಿದ್ದಾಪೂರ ಗ್ರಾಮದಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತನ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು
ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಇತನು ಸಿಕ್ಕಿಬಿದ್ದಿದ್ದು ಆರೋಪಿ
ನಂ-2 ಓಡಿ ಹೊಗಿದ್ದು ಸಿಕ್ಕಿಬಿದ್ದ ಚಂದ್ರಯ್ಯ ತಂದಿ ಪಂಪಯ್ಯ ಹಿರೇಮಠ ವಯಾ-
40 ವರ್ಷ
ಜಾ-
ಜಂಗಮ – ಕಿರಾಣಿ ಅಂಗಡಿ
ವಾರ್ಡ ನಂ-1 ಸಿದ್ದಾಪೂರ ಸಿಕ್ಕಿಬಿದ್ದ ಆರೋಪಿತನಿಂದ ರೂ. 550=00 ಗಳನ್ನು ಜಪ್ತ ಮಾಡಿಕೊಂಡು ಪಂಚನಾಮೆ ಮುಗಿಸಿಕೊಂಡು
ಇರುತ್ತದೆ ಓಡಿ ಹೊದಬನ ಬಗ್ಗೆ ವಿಚಾರಿಸಲಾಗಿ ಬಸವರಾಜ ಚಿಕ್ಕನಗೌಡರ್ ವಯಾ- 40 ಜಾ-
ಲಿಂಗಾಯತ ಸಾ- ಸಿದ್ದಾಪೂರ ಅಂತಾ ಗೊತ್ತಾಗಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
0 comments:
Post a Comment