ದಿನಾಂಕಃ-05-08-2015 ರಂದು ರಾತ್ರಿ
7-45 ಗಂಟೆಯ ಸುಮಾರಿಗೆ ಹಗೇದಾಳ ಗ್ರಾಮದಲ್ಲಿಯ ತೊಂಡಿಹಾಳ ರಸ್ತೆಯ
ಪಕ್ಕದಲ್ಲಿ ತಗಡಿನ ಶೆಡ್ ನಲ್ಲಿ ಆರೋಪಿತರಾದ 1) ಪರಸುರಾಮ ತಂದಿ ಮಲ್ಲಲಪ್ಪ ಹರಿಜನ ವಯಾ-21 ವರ್ಷ
ಸಾ. ಹಗೇದಾಳ 2) ನಾಗಪ್ಪ ತಂದಿ ಯಮನಪ್ಪ ಬೇವಿನಾಳ ವಯಾ-20 ವರ್ಷ ಸಾ. ಹಗೇದಾಳ ಮತ್ತು 3) ಪಂಪಾಪತಿ
ತಂದಿ ವೀರುಪಣ್ಣ ಕುಂಬಾರ ಸಾ. ಹಗೇದಾಳ ರವರು ಅನಧಿಕೃತವಾಗಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು
ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ್ಗೆ ಮಾನ್ಯ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಹಾಜರಿದ್ದ
ಪಂಚರ ಸಮಕ್ಷಮದಲ್ಲಿ ದಾಳಿ ಮಾಡಲು ಆರೋಪಿ ನಂ 3 ಈತನು ಓಡಿ ಹೋಗಿದ್ದು ಆರೋಪಿ 1 ಮತ್ತು 2 ರವರು ಸಿಕ್ಕಿ
ಬಿದ್ದಿದ್ದು ಸಿಕ್ಕಿಬಿದ್ದವರ ಕಡೆಯಿಂದ 43 ಓರಿಜಿನಲ್ ಚೈಯಿಸ್ ಮದ್ಯದ ಬಾಟಲಿಗಳು, 6 ಓಲ್ಡ್ ಟವರಿನ್
ಮದ್ಯದ ಬಾಟಲಿಗಳು ಒಟ್ಟು ಅಂ.ಕಿ 2681=00 ಬೆಲೆಬಾಳುವುಗಳನ್ನು ಮತ್ತು ನಗದು ಹಣ ರೂ.200=00 ಗಳನ್ನು
ಜಪ್ತ ಮಾಡಿಕೊಂಡು ಪಂಚನಾಮೆ ಕೈಗೊಂಡು ಠಾಣೆಗೆ ಬಂದು ನೀಡಿದ ವರದಿ ಮತ್ತು ಪಂಚನಾಮೆಯ ಮೇಲಿಂದ ಠಾಣೆಯಲ್ಲಿ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 94/2016 ಕಲಂ: 78(3) Karnataka Police Act:.
ಇಂದು ದಿನಾಂಕ: 05-08-2016 ರಂದು ರಾತ್ರಿ 8:30 ಗಂಟೆಗೆ ಪಿ.ಎಸ್.ಐ.
ತಾವರಗೇರಾ ಪೊಲೀಸ್ ಠಾಣೆರವರು ಗಣಕೀಕೃತ ವರದಿ, ದಾಳಿ ಪಂಚನಾಮೆ,ಮುದ್ದೇಮಾಲು ಸಿಕ್ಕಿಬಿದ್ದ ಒಬ್ಬ
ಆರೋಪಿಯನ್ನು ಹಾಜರಪಡಿಸಿದ್ದು, ವರದಿಯಲ್ಲಿ ಸಾಸಿವೆಹಾಳ ಗ್ರಾಮದ ಬಸರಿ ಕಟ್ಟೆಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟ್ಕಾ ಜೂಜಾಟವನ್ನು ಆಡುತ್ತಿದ್ದು, ಆ ಕಾಲಕ್ಕೆ ಅಧಿಕಾರಿಯವರು ಹಾಗೂ ಸಿಬ್ಬಂದಿಯವರು
ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ ರೂ. 750-00, ಜಪ್ತ ಮಾಡಿಕೊಂಡಿದ್ದು, ಸಿಕ್ಕಿಬಿದ್ದ ಒಬ್ಬ
ಆರೋಪಿ ತ್ರಿಲೋಚನಾ ತಂದೆ ದೊಡ್ಡಪ್ಪ ಮೇಟಿ ಸಾ:ಸಾಸಿವೆಹಾಳ ಹಾಗೂ ಮಟ್ಕಾ ಪಟ್ಟಿಯನ್ನು ತೆಗೆದುಕೊಳ್ಳುವ
ಹನಮಗೌಡ ಪಾಟೀಲ ಸಾ: ಗುಂಜಾಳ್ಳಿ ತಾ:ಸಿಂಧನೂರ ರವರ ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು
ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment