ಫಿರ್ಯಾದಿದಾರರು ಮತ್ತು ಅವರ ಸಂಬಂಧಿಕರಾದ ನಾಗರಾಜ ಇಬ್ಬರೂ ಕೂಡಿ
ತಮ್ಮ ಗ್ರಾಮದ ಮುಕ್ತುಂಸಾಬ ರವರ ಟಂ ಟಂ ನಂ: ಕೆ.ಎ-37/ಎ-2534
ನೇದ್ದನ್ನು ತೆಗೆದುಕೊಂಡು ನಾಗರಾಜರವರ ದೊಡ್ಡಪ್ಪನಾದ ಘನವಂತಪ್ಪ ಇವರ
ಹೊಲದಲ್ಲಿ ದಿನಾಂಕ. 17-08-2016 ರಂದು ಬುಧವಾರ ದಿವಸ ರಾತ್ರಿ 10-00 ಗಂಟೆ ಸುಮಾರಿಗೆ ಬುತ್ತಿ ಕಟ್ಟಿಕೊಂಡು ಟಂ ಟಂ ವಾಹನ ನಂ. ಕೆ.ಎ.37/ಎ-2534 ನೇದ್ದನ್ನು ತೆಗೆದುಕೊಂಡು ತೋಟದ ಹೊಲಕ್ಕೆ ಹೋಗಿ ಅಲ್ಲಿ ಬುತ್ತಿಯ ಊಟ
ಮಾಡಿ ರಾತ್ರಿ 11-00 ಗಂಟೆ ಸುಮಾರಿಗೆ ಹೊಲದಲ್ಲಿಯೇ ಮಲಗಿದೆವು. ಸ್ವಲ್ಪ ಹೊತ್ತಿನ ನಂತರ ನಾನು ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ನಮ್ಮ ಮೇಲಿನ ಯಾವುದೋ
ದ್ವೇಷದಿಂದ ನನ್ನನ್ನು ಮತ್ತು ನಾಗರಾಜನನ್ನು ಕೊಲೆ ಮಾಡುವ ಉದ್ದೇಶದಿಂದ ನಾವು ಹೊಲದಲ್ಲಿ
ಮಲಗಿದ್ದಾಗ ಯಾವುದೋ ಆಯುಧಗಳಿಂದ ಎಕಕಾಲಕ್ಕೆ ನನಗೆ ಮತ್ತು ನಾಗರಾಜನಿಗೆ ಹೊಡೆದು ಕೊಲೆ ಮಾಡಲು
ಪ್ರಯತ್ನಿಸಿದ್ದು, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Thursday, August 18, 2016
Subscribe to:
Post Comments (Atom)
0 comments:
Post a Comment