ದಿನಾಂಕ: 08-08-2016 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಆರೋಪಿತನು ಹಿರೇಮ್ಯಾಗೇರಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಜನರಿಂದ ಮೋಬೈಲಿನಲ್ಲಿ ಎಸ್.ಎಂ.ಎಸ್.
ಮೂಲಕ ಓ.ಸಿ ಮಟ್ಕಾ ನಂಬರಗಳನ್ನು ಸ್ವೀಕರಿಸುತ್ತಿದ್ದವನ ಮೇಲೆ ಪಿ.ಎಸ್.ಐ. ಯಲಬುರ್ಗಾರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಸದರಿ ಆರೋಪಿತನಿಂದ
ಮಟಕಾ ಜೂಜಾಟದ ನಗದು ಹಣ 750/-ರೂ. ಹಾಗೂ ಓ.ಸಿ ಮಟ್ಕಾ ನಂಬರ್ ಬರೆದ ಚೀಟಿ & 01 ಬಾಲ ಪೆನ್ ಗಳೊಂದಿಗೆ
ಸಿಕ್ಕಿಬಿದ್ದಿದ್ದು
ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 223/2016 ಕಲಂ: 78(3) Karnataka Police
Act.
ದಿನಾಂಕ:- 08-08-2016 ರಂದು ಸಂಜೆ ಗಂಗಾವತಿ
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಆರ್ಹಾಳ ಗ್ರಾಮದಲ್ಲಿ ಮಸೀದಿಯ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು, ಮಾನ್ಯ ಡಿ.ಎಸ್.ಪಿ. ಗಂಗಾವತಿ ಮತ್ತು ಸಿ.ಪಿ.ಐ.ಗಂಗಾವತಿ (ಗ್ರಾ) ವೃತ್ತರವರ ಮಾರ್ಗದರ್ಶನದ
ಮೇರೆಗೆ ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಸಿ. 361, 323 ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ನೇದ್ದರಲ್ಲಿ ಠಾಣೆಯಿಂದ ಸಂಜೆ 5:00
ಗಂಟೆಗೆ ಹೊರಟು ಆರಾಳ ಗ್ರಾಮದ ಊರ ಮುಂದೆ ಜೀಪನ್ನು
ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ ಮಸೀದಿಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು
ಕುಳಿತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ
ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು
ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಕೂಡಲೇ ಅವರ ಮೇಲೆ ದಾಳಿ
ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು
ತನ್ನ ಹೆಸರು ಸಿದ್ದನಗೌಡ ತಂದೆ ವೀರನಗೌಡ ಪೊಲೀಸ್ ಪಾಟೀಲ್, ವಯಸ್ಸು 37 ವರ್ಷ, ಜಾತಿ: ಲಿಂಗಾಯತ ಉ: ಹೋಟಲ್ ಸಾ: ಹನುಮಂತ ದೇವರ ಗುಡಿಯ ಹತ್ತಿರ, ಆರ್ಹಾಳ. ತಾ: ಗಂಗಾವತಿ ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ
ನಗದು ಹಣ ರೂ. 310/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
3] ಪೊಲೀಸ್ ಠಾಣೆ ಗುನ್ನೆ ನಂ: 65/2016
ಕಲಂ: 498(ಎ), 323, 109, 324, 504, 307, 506, ಸಹಿತ 34 ಐ.ಪಿ.ಸಿ:.
ಫಿರ್ಯಾದಿದಾರಳು ಈಗ್ಗೆ 10-12 ವರ್ಷಗಳ ಹಿಂದೆ ಆರೋಪಿ ಈರಪ್ಪ ತಂದೆ ರಾಮಚಂದ್ರಪ್ಪ ಜವಳಿ ರವರ
ಸಂಗಡ ಕುಷ್ಟಗಿಯ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲ, ಮದುವೆಯಾಗಿದ್ದು ಇರುತ್ತದೆ. ನಂತರ 7-8 ವರ್ಷ
ಚೆನ್ನಾಗಿ ಸುಖ ಸಂಸಾರ ನಡೆಸಿದ್ದು, ನಂತರ ಆರೋಪಿ ಈರಪ್ಪನು ತನ್ನ ತಂದೆ ರಾಮಚಂದ್ರಪ್ಪ, ತಾಯಿ ಶರಣಮ್ಮ
ಮತ್ತು ತಂಗಿ ಅನುಸೂಯಾ ರವರ ಪ್ರಚೋದನೆಯಿಂದ ರೋಪಿ ಈರಪ್ಪನು ಫಿರ್ಯಾದಿಗೆ ನಿಮ್ಮ ಮನೆಯಿಂದ
50,000/- ರೂಪಾಯಿ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಹೊಡೆ, ಬಡೆ ಮಾಡುವದು, ಮಾಡುತ್ತಾ ಬಂದಿದ್ದು;
ಈಗ್ಗೆ 1 ವರ್ಷದ ಹಿಂದಿನಿಂದ ಆರೋಪಿ ಈರಪ್ಪನು ತನ್ನ ತಂದೆ ತಾಯಿ, ತಂಗಿಯ ಮಾತು ಕೇಳಿಕೊಂಡು ತಾನು
ಇನ್ನೊಂದು ಮದುವೇ ಮಾಡಿಕೊಳ್ಳುತ್ತೇನೆ. ನೀನು ಸಹಿ ಕೊಡು ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದದ್ದು
ಇರುತ್ತದೆ. ನಂತರ ಇಂದು ದಿನಾಂಕ: 08-08-2016 ರಂದು ಮದ್ಯಾಹ್ನ 12-00 ಗಂಟೆಯ ಸುಮಾರಿಗೆ ಫಿರ್ಯಾಧಿ
ತನ್ನ ಗಂಡ ಈರಪ್ಪನ ಮನೆಯಲ್ಲಿದ್ದಾಗ, ಆರೋಪಿತರೆಲ್ಲಾ
ಮನೆಯಲ್ಲಿದ್ದಾಗ ಆರೋಪಿ ಈರಪ್ಪನು ಫಿರ್ಯಾದಿಗೆ ಲೇ ಸೂಳೆ ವರದಕ್ಷಣೆ ಹಣ ತೆಗೆದುಕೊಂಡು ಬಾ ನೀನು ನಮ್ಮ
ಮನೆಯಲ್ಲಿ ಇರಬೇಡ .ನಿನ್ನ ಮುಗಿಸಿ ಒನ್ನೊಂದು ಮದುವೆ ಮಾಡಿಕೊಳ್ಳುತ್ತೇನೆ. ಅಂತಾ ಅವಾಚ್ಯವಾಗಿ ಬೈದಾಡುತ್ತಾ. ಫಿರ್ಯಾದಿಯ ಕೈ ಹಿಡಿದು
ಎಳೆದಾಡಿ ಕೈ ತಿರುವಿದ್ದು. ಫಿರ್ಯಾದಿಯ ಅತ್ತೆ ಶರಣಮ್ಮ ಮತ್ತು ನಾದನಿ ಅನುಸುಯಾ ರವರು ಫಿರ್ಯಾದಿಯ
ತಲೇ ಕೂದಲು ಹಿಡಿದು ಎಳೆದಾಡಿದ್ದು. ಫಿರ್ಯಾದಿಯ ಮಾವ ರಾಮಚಂದ್ರಪ್ಪ ಫಿರ್ಯಾದಿಗೆ ಕಾಲಿನಿಂದ ಒದ್ದಿದ್ದು.
ಫಿರ್ಯಾದಿಯ ಗಂಡ ಫಿರ್ಯಾದಿಯನ್ನು ಕೊಲೇ ಮಾಡುವ ಉದ್ದೇಶದಿಂದ ಮನೆಯಲ್ಲಿಯ ಕೊಡಲಿಯಿಂದ ಫಿರ್ಯಾದಿಗೆ
ನಾಲ್ಕು ಬಾರಿ ಹೊಡೆಯಲು ಬಂದಾಗ ಫಿರ್ಯಾದಿ ತಪ್ಪಿಸಿಕೊಂಡಾಗ ಸದರಿ ಕೊಡಲಿ ಏಟು ಬಾಗಿಲಿಗೆ ಬಡಿದು ಬಾಗಿಲು
ಹೊಡೆದು ಹೋಗಿರುತ್ತದೆ.
0 comments:
Post a Comment