Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, September 18, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 161/2016 ಕಲಂ: 302, 201 ಐ.ಪಿ.ಸಿ:.
ದಿನಾಂಕ 15-09-2016 ರಂದು ಆರೋಪಿತರು ಫಿರ್ಯಾದುದಾರ ಮಗನಾದ ರಂಗಪ್ಪ ಬಡಿಗೇರ ಈತನಿಗೆ ಸಿಸಿ ರಸ್ತೆ ಕಾಮಗಾರಿ ಕೆಲಸಕ್ಕೆ ಹಿಟ್ನಾಳ ಗ್ರಾಮಕ್ಕೆ ಕರೆದುಕೊಂಡು ಹೋಗಿ ಬೆಳಗಿನ ಸಮಯದಲ್ಲಿ ಕೆಲಸ ಮಾಡಿದ ನಂತರ ಆರೋಪಿತರು ಹಿಂದಿನ ಹಳೆಯ ದ್ವೇಷದಿಂದ ಕೊಲೆ ಮಾಡಿ, ಅಗಳಕೇರಾ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಬಿಸಾಕಿದ್ದು ಇರುತ್ತದೆ. ಸದರಿ ರಂಗಪ್ಪ ಬಡಿಗೇರ ಈತನ ಕೊಲೆಯ ಸತ್ಯಾಸತ್ಯತೆ ಪತ್ತೆ ಮಾಡಿ ನ್ಯಾಯ ದೊರಕಿಸಬೇಕೆಂದು ಮುಂತಾಗಿ ಲಿಖಿತ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿದ್ದು  ಇರುತ್ತದೆ.    
2] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 85/2016 ಕಲಂ: 324.354.504.506 ಸಹಿತ 34 ಐ.ಪಿ.ಸಿ:.
ಪಿರ್ಯಾದಿರಾರರು ಕಟ್ಟಿಗೆ ಕಡೆಯಲು ಅರೋಪಿ ಸಿದ್ದಪ್ಪನ ಹತ್ತಿರ ಕೊಡ್ಲಿ ಕೇಳಿ ತೆಗೆದುಕೊಂಡಿದ್ದು, ಕೊಡ್ಲಿಯನ್ನು ಕಳೆದುಕೊಂಡಿದ್ದು ನಂತರ ಬೇರೆ ಕೊಡ್ಲಿಯನ್ನು ಕೊಡಲು ಹೋದರೆ ಪಿರ್ಯಾದಿಯ ಸಂಗಡ ಸಿದ್ದಪ್ಪ ಮತ್ತು ಆತನ ಹೆಂಡತಿ ಇಬ್ಬರು ಸೇರಿಕೊಂಡು ಬಾಯಿ ಮಾಡಿಕೊಂಡು ಸಿಟ್ಟಾಗಿದ್ದರು. ದಿನಾಂಕ 16/09/2016 ರಂದು ಮುಂಜಾನೆ ಮಂಜವ್ವಳು ಪಿರ್ಯಾದಿಯ ಮನೆಯ ಹತ್ತಿರ ಬಂದು ಬಾಯಿ ಮಾಡಿದ್ದು ಪಿರ್ಯಾದಿಯು ಕೆಲಸ ಮುಗಿಸಿಕೊಂಡು ವಾಪಸು ಮನೆಗೆ ರಾತ್ರಿ 8-00 ಗಂಟೆಗೆ ಬಂದು ಮಂಜವ್ವಳ್ಳಿಗೆ ಯಾಕ ಒದರಾಡಿತ್ತಿರಿ ನಿಮಗೆ ಹೊಸ ಕೊಡ್ಲಿ ಕೊಡಿಸುತ್ತೀವಿ ಅಂತಾ ಪಿರ್ಯಾದಿಯ ಅಂಗಳದಲ್ಲಿ ಹೇಳುವಷ್ಟರಲ್ಲಿ ಸಿದ್ದಪ್ಪ ಮತ್ತು ಗಿಡ್ಡಪ್ಪ ತಂದೆ ಫಕೀರಪ್ಪ ಭಂಡಾರಿ ಹಾಗೂ ಶರಣಪ್ಪ ತಂದೆ ಕನಕಪ್ಪ ಭಂಡಾರಿ ರವರು ಎಲ್ಲರೂ ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಕೊಂಡು ಬಂದು ಅದೇನು ಕೊಡ್ಲಿ ಕೊಡಸುತ್ತಿದಿ ಮಗನೇ ನಿನಗೆ ಸರಿಯಾಗಿ ಕೊಟ್ರೇ ತಾನಾಗೇ ಬರುತ್ತೆ ಅಂತಾ ಪಿರ್ಯಾದಿಯ ಎಡಗೈ ಮೋಣಕೈಗೆ ಸಿದ್ದಪ್ಪ ಕಟ್ಟಿಗೆಯಿಂದ ಹೊಡೆದು ಮೂಖಪೆಟ್ಟು ಮಾಡಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
3] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 86/2016 ಕಲಂ: 143, 147, 148, 504, 323, 324 ಸಹಿತ 149 ಐ.ಪಿ.ಸಿ

ಪಿರ್ಯಾದಿರಾರ ಮನೆಯ ಹತ್ತಿರ ಆರೋಪಿತರೆಲ್ಲಾ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗಡೆಗಳನ್ನು ಹಿಡಿದುಕೊಂಡು ಬಂದು ನಿಮಗೆ ಕೊಡ್ಲಿಬೇಕಾ, ನಿಮಗೆ ಯಾವ ಕೊಡ್ಲಿ ಇಲ್ಲಾ ಏನು ಇಲ್ಲಾ. ಅಂತಾ ಅವಾಚ್ಯ ಬೈದಾಡಿ, ಫಿರ್ಯಾದಿಗೆ ಹಾಗೂ ಫಿರ್ಯಾದಿ ಗಂಡನಿಗೆ ಎಲ್ಲರೂ ಕೈಯಿಂದ ಹೊಡೆ, ಬಡೆ ಮಾಡಿದ್ದು. ಕನಕಪ್ಪ ಈತನು ಕಟ್ಟಿಗೆ ಯಿಂದ  ಫಿರ್ಯಾದಿಯ ಬಲಗೈ ರೆಟ್ಟೆಗೆ ಹೊಡೆದು ಮೂಖ ಪೆಟ್ಟು ಮಾಡಿದನು. ಭೀಮಪ್ಪನು ಫಿರ್ಯಾಧಿ ಗಂಡನಿಗೆ ಬಲ ತಲೆಗೆ ಹೊಡೆದು ಒಳ ಪೆಟ್ಟು ಮಾಡಿದ್ದು. ಹನಮವ್ವ ಈಕೆಯು ಫಿರ್ಯಾದಿಯ ಹೊಟ್ಟೆಗೆ ಒದ್ದು ಒಳ ಪೆಟ್ಟು ಮಾಡಿದಳು, ಆಗ ಫಿರ್ಯಾದಿಯ ಮೈದುನರು ಹಾಗೂ ಹನಮಪ್ಪ, ಶರಣಪ್ಪ ರವರು ಜಗಳವನ್ನು ಬಿಡಿಸಿ ಕಳಿಸಿದ್ದು ಇರುತ್ತದೆ. . ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008