1]
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 275/2016 ಕಲಂ: 498(ಎ), 323, 324, 354, 506 ಸಹಿತ 34 ಐ.ಪಿ.ಸಿ:.
ದಿನಾಂಕ:- 30-08-2012 ರಂದು ಫಿರ್ಯಾದಿ ದೂರನ್ನು ಶ್ರೀಮತಿ ಯಾಸ್ಮೀನ್
ಮದುವೆಯು ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಜಿ. ಅಬ್ದುಲ್ ಲತೀಫ್ ತಂದೆ ರೆಹಮತ್ ಸಾಬ, ವಯಸ್ಸು
28 ವರ್ಷ ಇವರೊಂದಿಗೆ ಆಗಿದ್ದು, ಮದುವೆಯ ಸಮಯದಲ್ಲಿ ರೂ. 50,000-00 ಹಾಗೂ 100 ಗ್ರಾಂ. ಬಂಗಾರವನ್ನು
ಆರೋಪಿ ಜಿ. ಅಬ್ದುಲ್ ಲತೀಫ್ ಹಾಗೂ ಅವರ ಮನೆಯವರು ವರದಕ್ಷಿಣೆಯಾಗಿ ಪಡೆದುಕೊಂಡಿದ್ದು, ಮದುವೆಯಾದ
ಒಂದೂವರೆ ವರ್ಷದವರೆಗೆ ಫಿರ್ಯಾದಿದಾರರು ಗಂಡನ ಮನೆಯಲ್ಲಿ ಅವರೊಂದಿಗೆ ಅನ್ಯೋನ್ಯವಾಗಿ ಜೀವನ ನಡೆಯಿಸಿದ್ದು,
ಆದರೆ ನಂತರದ ದಿನಗಳಲ್ಲಿ ಗಂಡನ ಮನೆಯಲ್ಲಿ ಫಿರ್ಯಾದಿದಾರರ ಗಂಡ ಹಾಗೂ ಮನೆಯವರಾದ (1) ಜಿ. ಅಬ್ದುಲ್
ಲತೀಫ್ ತಂದೆ ರೆಹಮತ್ ಸಾಬ, (2) ರೆಹಮತ್ ಸಾಬ ತಂದೆ ಶೇಖ್ ಸಾಬ, 65 ವರ್ಷ (3) ಶಕನ್ ಬೀ ಗಂಡ ರೆಹಮತ್
ಸಾಬ, 58 ವರ್ಷ (4) ವಲಿಬಾಷಾ ತಂದೆ ಶೇಖ್ ಸಾಬ, 60 ವರ್ಷ (5) ದಾದಾ ಪೀರ್ ತಂದೆ ರೆಹಮತ್ ಸಾಬ,
44 ವರ್ಷ (6) ರಫೀಕ್ ತಂದೆ ರೆಹಮತಸಾಬ, 41 ವರ್ಷ ಎಲ್ಲರೂ ಸಾ: ಮೋಕಾ ತಾ: ಜಿ: ಬಳ್ಳಾರಿ ಇವರುಗಳು
ಕೂಡಿಕೊಂಡು ಫಿರ್ಯಾದಿದಾರಳಿಗೆ ತವರುಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆಯಾಗಿ ರೂ.
2,00,000-00 ಗಳನ್ನು ತರುವಂತೆ ಅವಳಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ಅಲ್ಲದೇ
ಇದರ ಮಧ್ಯೆ ಮೋಟಾರ ಬೈಕ್ ಖರೀದಿಸಲು ಸಹ 20,000-00 ರೂ.ಗಳನ್ನು ಫಿರ್ಯಾದಿದಾರರ ತಂದೆಯಿಂದ ಆರೋಪಿತರು
ಪಡೆದುಕೊಂಡಿದ್ದು, ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬರಬೇಕೆಂದು ಹೊಡಿ-ಬಡಿ ಮಾಡುವುದು, ಅವಾಚ್ಯವಾಗಿ
ಬೈಯ್ಯುವುದು ಮತ್ತು ಊಟಕ್ಕೆ ಸರಿಯಾಗಿ ನೀಡದೇ ವಿಪರೀತ ಹಿಂಸೆಯನ್ನು ನೀಡಿ ಕೊನೆಯದಾಗಿ ದಿನಾಂಕ:-08-12-2014
ರಂದು ಹೊಡಿ-ಬಡಿ ಮಾಡಿ ಗಂಡನ ಮನೆಯಿಂದ ತವರುಮನೆಗೆ ಕಳುಹಿಸಿರುತ್ತಾರೆ. ನಂತರ ಹಿರಿಯರು ಅನೇಕ
ಬಾರಿ ಮೋಕಾಗೆ ಹೋಗಿ ಪಂಚಾಯತಿಗಳನ್ನು ಮಾಡಲಾಗಿ ಆರೋಪಿತರು ಫಿರ್ಯಾದಿದಾರಳನ್ನು ಕರೆದುಕೊಳ್ಳದೇ ವರದಕ್ಷಿಣೆಗಾಗಿ
ಬೇಡಿಕೆ ಇಟ್ಟಿರುತ್ತಾರೆ. ಅಲ್ಲದೇ ಆರೋಪಿ ಗ್ಯಾರವಿ ಕಾರ್ಯಕ್ರಮಕ್ಕೆಂದು ಬಂದಾಗ ಹಾಗೂ ನಂತರ
20-08-2015 ರಂದು ಚಿಕ್ಕಜಂತಕಲ್ ಗ್ರಾಮಕ್ಕೆ ಬಂದಾಗ ಪುನ: ವರದಕ್ಷಿಣೆಗಾಗಿ ಜಗಳ ಮಾಡಿ ಹೋಗಿರುತ್ತಾರೆ.
ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 216/2016 ಕಲಂ: 323, 341, 381, 447, 417, 418, 418, 420, 466, 467, 468,
504, 506 ಐ.ಪಿ.ಸಿ:.
ಪಿರ್ಯಾದಿದಾರಾದ ವಿರೇಶ ತಂದಿ ದಿ. ವಿರಣ್ಣ ಜೀರ್ ವಯಾ-35ವರ್ಷ ಉದ್ಯೋಗ- ಒಕ್ಕಲುತನ ಸಾ. ಮಾರ್ಡ ನಂ 6 ಶರಣಬಸವೇಶ್ವರ ದೇವಸ್ಥಾನದ ಹಿಂದುಗಡೆ, ಕಾರಟಗಿ ರವರಿಗೆ ಸಂಬಂದಿಸಿಧ ಜಮೀನು ಸರ್ವೆ ನಂ 415/2 ನೆದ್ದರಲ್ಲಿಯ ಸದ್ಯ ಪಿರ್ಯಾದಿದಾರರ ಹೆಸರಿನಲ್ಲಿರುವ 00-11 ಗುಂಟೆ ಜಮೀನಿಗೆ ಸಂಬಂದಿಸಿದಂತೆ ಆರೋಪಿ ನಂ 1 ಶ್ರೀ ವಿಠ್ಠಲರಾವ್ ತಂದೆ ಮಾದವಚಾರ್ಯ ಕೊಳ್ಳಿ, ವಯಾ-49 ವರ್ಷ ಉ- ಒಕ್ಕಲುತನ 2) ಶ್ರೀಮತಿ ರಮಾಬಾಯಿ @ ರಾಧಾಬಾಯಿ ಗಂಡ ಕೃಷ್ಣಾಚಾರ ವಯಾ-75 ವರ್ಷ ಉ-ಒಕ್ಕಲುತನ ಸಾ. ಕಾರಟಗಿ ಹಾ.ವ ಕಂಪ್ಲಿ ತಾ. ಹೊಸಪೇಟ 3) ಆರ್. ಕೃಷ್ಣಸಿಂಗ್ ತಂದಿ ವೆಂಕಟಸಿಂಗ್ ಸಾ. ಕಾರಟಗಿ ತಾ. ಗಂಗಾವತಿ 4) ರಾಮರಾವ್ ಕುಲಕುರ್ಣಿ ಸಾ. ಕಾರಟಗಿ ತಾ. ಗಂಗಾವತಿ ಸಾ. ಕಾರಟಗಿರವರ ಕೂಡಿಕೊಂಡು ಆರೋಪಿ ನಂ 1 ರವರಿಗೆ ಆರೋಪಿ ನಂ 2 ರವರು ಜಿ.ಪಿ.ಎ ಕೊಟ್ಟಂತೆ ಸುಳ್ಳು ಜಿ.ಪಿ.ಎ ಸೃಷ್ಟಿ ಮಾಡಿದ್ದು ಅಲ್ಲದೇ ಈ ಮೋದಲು ಬೇರೆ ಆಸ್ತಿಗಳಿಗೆ ಆರೋಪಿ ನಂ 1 ರವರಿಗೆ ಆರೋಪಿ ನಂ 2 ರವರು ಕೊಟ್ಟಿದ್ದ ಜಿ.ಪಿ.ಎ ದಾಖಲಾತಿಯನ್ನು ತಿದ್ದುಪಡಿ ಮಾಡಿ ಪಿರ್ಯಾದಿದಾರರ ಜಮೀನು ಸರ್ವೆ ನಂ 415/2
ನೆದ್ದರಲ್ಲಿಯ 00-11 ಗುಂಟೆ ಜಮೀನಿಗೆ ಸಂಬಂದಿಸಿದಂತೆ ಆರೋಪಿ ನಂ 1 ಈತನು ತಕರಾರು ಮಾಡಿ 03-08-2016 ರಂದು ಬೆಳಿಗ್ಗೆ
11-00 ಗಂಟೆಗೆ ಪಿರ್ಯಾದಿದಾರರ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಅಶ್ಲೀಲವಾಗಿ ಬೈದು ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment