Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, September 19, 2016

1] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 193/2016 ಕಲಂ: 279, 338 & 304(ಎ) ಐ.ಪಿ.ಸಿ:.

ದಿನಾಂಕ:17.09.2016 ರಂದು ರಾತ್ರಿ 9-05 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪರಶುರಾಮ ಇವರ ಆರೈಕೆಯಲ್ಲಿದ್ದ ಸಂಬಂಧಿಕ ಮುದಿಯಪ್ಪ ಚಲುವಾದಿ ಸಾ: ತಳಕಲ್. ಇವರ ಹೇಳಿಕೆ ಫಿರ್ಯಾದಿಯನ್ನು ರಾತ್ರಿ 10-00 ಗಂಟೆಗೆ ಪಡೆದುಕೊಂಡಿದ್ದು ಸಾರಾಂಶವೇನೆಂದರೇ, ದಿ:17-09-16 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ತಮ್ಮ ಪರಶುರಾಮ ತಂದೆ ಸಿದ್ದಪ್ಪ ದೊಡ್ಡಮನಿ. ಕೊಪ್ಪಳ ನಗರಸಭೆ ಪೌರಕಾರ್ಮಿಕ, ಸಾ: ತಳಕಲ್ ಇತನು ಕೊಪ್ಪಳ ಕಡೆಯಿಂದ ತಳಕಲ್ ಕಡೆಗೆ ತನ್ನ ಮೋಟಾರ ಸೈಕಲ್ ನಂ; ಕೆಎ-37/ಯು-3553 ನೇದ್ದನ್ನು ಓಡಿಸಿಕೊಂಡು ಕೊಪ್ಪಳ-ಗದಗ ಎನ್.ಹೆಚ್-63 ರಸ್ತೆಯ ಗುಳಗಣ್ಣವರ ಕಾಲೇಜ ಸಮೀಪದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಎದುರುಗಡೆ ಅಂದರೆ ಗದಗ ಕಡೆಯಿಂದ ಬಂದ ಕಾರ್ ನಂ: ಟಿ.ಎನ್-05/ಎ.ಎಮ್-8466 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಢು ಬಂದವನೇ ಪರಶುರಾಮ ಇವರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದರಿಂದ ಮೋಟಾರ ಸೈಕಲ್ ಸವಾರ ಪರಶುರಾಮನಿಗೆ ಭಾರಿ ರಕ್ತಗಾಯಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಕಾರ್ ಚಾಲಕ ರುದ್ರವಿಘ್ನೇಶ್ವರ ಸಾ: ಅಮಾಂಜಿಕೇರಿ ಚನೈ [ಟಿ.ಎನ್] ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮುಂತಾಗಿ ಸಲ್ಲಿಸಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ. ನಂತರ ದಿನಾಂಕ 18-09-2016 ರಂದು ರಾತ್ರಿ 11-45 ಗಂಟೆಗೆ ಗಾಯಾಳು ಪರಶುರಾಮ ತಂದೆ ಸಿದ್ದಪ್ಪ ದೊಡ್ಡಮನಿ ಇವರು ಧಾರವಾಡ ಎಸ.ಡಿ.ಎಮ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮ್ರತ ಪಟ್ಟಿದ್ದು ಇರುತ್ತದೆ.

0 comments:

 
Will Smith Visitors
Since 01/02/2008