ಫಿರ್ಯಾದಿ ಗಂಗಮ್ಮ ಗಂಡ ಬುದ್ದೆಪ್ಪ ತಾಯಿ ಮತ್ತು ಇತರರು ಸೇರಿಕೊಂಡು
ಶ್ರೀ ಜ್ಯೋತಿ ಗುಂಪು ಮಾಡಿಕೊಂಡಿದ್ದು ಸದರಿ ಗುಂಪಿನಿಂದ ಶ್ರೀ ಮಂಜುನಾಥ ಗ್ರಾಮೀಣಾಭೀವೃದ್ದಿ ಸಂಸ್ಥೆಯಲ್ಲಿ
ಆರೋಪಿತಳಾದ ಶಾಂತಮ್ಮ ಗಂಡ ಯಮುನಪ್ಪ ಇವಳು 50,000-00 ರೂ. ಹಣವನ್ನು ಸಾಲ ಪಡೆದುಕೊಂಡಿದ್ದು,
ಸುಮಾರು 05 ವಾರಗಳಿಂದ ಸದರಿ ಸಾಲದ ಹಣವನ್ನು ಮರು ಪಾವತಿ ಮಾಡಿರುವುದಿಲ್ಲ. ದಿನಾಂಕ:
14-09-2016 ರಂದು ಬೆಳಗ್ಗೆ 8-00 ಗಂಟೆ ಸುಮಾರಿಗೆ ಫಿರ್ಯಾದಿದಾರರ ಮನೆಯ ಹತ್ತಿರ ಸದರಿ ಗುಂಪಿನವರು
ಇದ್ದಾಗ ಆರೋಪಿ ಶಾಂತಮ್ಮ ಛಲುವಾದಿ ಇವಳು ಬಂದಿದ್ದನ್ನು ನೋಡಿದ ಸದರಿ ಗುಂಪಿನವರು ಶಾಂತಮ್ಮಳಿಗೆ ನೀನು
5 ವಾರದಿಂದ ಲೋನ್ ಹಣವನ್ನು ಕಟ್ಟುತ್ತಿಲ್ಲ ಈ ರೀತಿ ಮಾಡಿದರೆ ಹೇಗೆ ನಾವು ಬೇರೆಯವರಿಗೆ ಹೇಗೆ ಲೋನ್
ಕೊಡಬೇಕು ಅಂತಾ ಕೇಳಿದ್ದಕ್ಕೆ ಆರೋಪಿತಳು ಈಗ ನನ್ನ ಹತ್ತಿರ ಹಣ ಇಲ್ಲಾ ಇದ್ದಾಗ ಕಟ್ಟುತ್ತೇನೆ ಅಂತಾ
ಅಂದಿದಕ್ಕೆ ಫಿರ್ಯಾದಿದಾರಳ ತಾಯಿ ಶಿವಮ್ಮ ಇವಳು ನಾನು ನಿನ್ನಂತೆ ಲೋನ್ ಪಡೆದಿದ್ದು ಪ್ರತಿವಾರ ಕಟ್ಟುತ್ತಿಲ್ಲವೇ
ಅದರಂತೆ ನೀನು ಕಟ್ಟಬೇಕು ಅಂತಾ ಅಂದಿದ್ದಕ್ಕೆ ಎನಲೇ ಬೋಸುಡಿ ಸೂಳೆ ಅದನ್ನು ನೀನೇನು ಕೇಳುತ್ತೀಯಾ
ನಾನು ಕಟ್ಟಲ್ಲ ನೋಡು ಏನ್ ಮಾಡತ್ತೀಯಾ ಮಾಡು ಅಂತಾ ಕೂದಲು ಹಿಡಿದು ಎಳೆದಾಡಿತ್ತಿದ್ದನ್ನು ನೋಡಿ ಫಿರ್ಯಾದಿಯು
ತಮ್ಮ ತಾಯಿಯನ್ನು ಬಿಡಿಸಿಕೊಳ್ಳಲು ಹೋದಾಗ ಆರೋಪಿ ಶಾಂತಮ್ಮಳು ಫಿರ್ಯಾದಿಗೆ ಎನಲೇ ಸೂಳೇ ನಿಮ್ಮ ತಾಯಿಯನ್ನು
ಬಿಡಿಸಿಕೊಳ್ಳಲು ಬಂದಿಯಾ ನಿನ್ನ ಜೀವ ಸಹೀತ ಬಿಡಲ್ಲಾ ಅಂತಾ ಕೂದಲು ಹಿಡಿದು ಎಳೆದಾಡಿ ಹೊಟ್ಟಗೆ ಕೈಯಿಂದ
ಹೋಡೆಬಡೆ ಮಾಡಿದಳು ಆಗ ಅಲ್ಲಿಗೆ ಬಂದ ಆರೋಪಿತಳ ಮಕ್ಕಳಾದ ಸಂತೋಷ, ವೀರೇಶ ಇವರು ಬಂದವರೆ ಫಿರ್ಯಾದಿಗೆ
ಎನಲೇ ಸೂಳೇ ನಮ್ಮ ತಾಯಿಯ ಹತ್ತಿರ ಜಗಳ ಮಾಡುತ್ತೀಯ ಅಂತಾ ಮೈ ಕೈ ಮುಟ್ಟಿ ಎಳೆದಾಡಿ ಕೈ ಯಿಂದ ಹೊಡೆ
ಬಡೆ ಮಾಡಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
Our Commitment For Safe And Secure Society
This post is in Kannada language.
Visit to our new website which is launched on 15-02-2018 www.koppalpolice.in & www.koppalpolice.in/kan
Thursday, September 15, 2016
Subscribe to:
Post Comments (Atom)
0 comments:
Post a Comment