ದಿನಾಂಕ:- 15-09-2016 ರಂದು ಸಾಯಂಕಾಲ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪಟ್ಟಣ ಗ್ರಾಮದ ಬಸವಣ್ಣ
ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ
ಬಂದಿದ್ದು, ಶ್ರೀ ಪ್ರಕಾಶ. ಎಲ್. ಮಾಳಿ, ಪಿ.ಎಸ್.ಐ. ಸಿಬ್ಬಂದಿಯವರಾದ ಪಿ.ಸಿ. ನಂ: 361, 301, ಎ.ಪಿ.ಸಿ. 77 ಕನಕಪ್ಪ ಹಾಗೂ ಇಬ್ಬರು ಪಂಚರು ಕೂಡಿಕೊಂಡು ಹೋಗಿ ನೋಡಲಾಗಿ ನಮಗೆ ಮಾಹಿತಿ ಇದ್ದ ಪ್ರಕಾರ
ಬಸವಣ್ಣ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರು ಸೇರಿದ್ದು, ಅವರಲ್ಲಿ ಒಬ್ಬ ವ್ಯಕ್ತಿಯು ಕುಳಿತುಕೊಂಡು ಜನರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ, ಅದೃಷ್ಟದ ಮಟಕಾ ನಂಬರ್ಗಳಿಗೆ ಹಣವನ್ನು ಪಣಕ್ಕೆ ಹಚ್ಚಿರಿ ಅಂತಾ ಕೂಗುತ್ತಾ ಜನರನ್ನು ಕರೆದು, ಅವರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಗಳ ಮೇಲೆ ಪಣಕ್ಕೆ ಹಚ್ಚಿಸಿಕೊಂಡು ಅವರಿಗೆ
ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಪಟ್ಟಿಯನ್ನು ಬರೆದುಕೊಳ್ಳುತ್ತಾ ಅದೃಷ್ಠದ ಮಟಕಾ ಜೂಜಾಟದಲ್ಲಿ ತೊಡಗಿದ್ದು, ಆಗ ಸಮಯ ಸಂಜೆ 5:30 ಗಂಟೆಯಾಗಿದ್ದು ಕೂಡಲೇ ಅವರ
ಮೇಲೆ ದಾಳಿ ಮಾಡಲಾಗಿ ಮಟಕಾ ಪಟ್ಟಿ ಬರೆಯುತ್ತಿದ್ದವನು ಸಿಕ್ಕಿ ಬಿದ್ದಿದ್ದು, ಉಳಿದ ಜನರು ಅಲ್ಲಿಂದ ಓಡಿ ಹೋದರು. ವಿಚಾರಿಸಲಾಗಿ ಮಟಕಾ ಪಟ್ಟಿ ಬರೆದುಕೊಳ್ಳುತ್ತಿದ್ದವನು
ತನ್ನ ಹೆಸರು ಗಣೇಶ ತಂದೆ ಮಾಲಪ್ಪ, ವಯಸ್ಸು 42 ವರ್ಷ, ಜಾತಿ: ನೇಕಾರ ಸಾ: ಬಸವಣ್ಣ ಕಟ್ಟೆ, ಬಸಾಪಟ್ಟಣ. ತಾ: ಗಂಗಾವತಿ. ಅಂತಾ ತಿಳಿಸಿದ್ದು, ಅವನ ಬಲಗಾಲು ಅಂಗವಿಕಲತೆ ಇರುತ್ತದೆೆ. ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 1,810/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ್ಪೆನ್ನು ದೊರೆತಿದ್ದು ಇದೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 214/2016 ಕಲಂ: 279, 304(ಎ) ಐ.ಪಿ.ಸಿ.
ಮತ್ತು 187 ಐ.ಎಂ.ವಿ. ಕಾಯ್ದೆ:.
ಫಿರ್ಯಾದಿದಾರರಾದ ಶ್ರೀ ಬಸವರಾಜ ತಂದೆ ಹನುಮಂತಪ್ಪ ಛತ್ರ ವಯ 28 ವರ್ಷ ಸಾ. ಚನ್ನಳ್ಳೀ ಕ್ರಾಸ್ ಕಾರಟಗಿ ತಾ.ಗಂಗಾವತಿ ರವರು ಫಿರ್ಯಾದಿಯನ್ನು ಕೊಟ್ಟಿದ್ದು, ನನ್ನಂತೆಯೆ ನಮ್ಮ ಡಾಭಾದಲ್ಲಿ ಬಾಬು ಮತ್ತು ವಿನಯ ಇವರು ಕೂಡ ಕೆಲಸ ಮಾಡಿಕೊಂಡು ಇರುತ್ತಾರೆ. ನಿನ್ನೆ ದಿವಸ ದಿ:14-09-16 ರಂದು ಮದ್ಯ ರಾತ್ರಿ ಮಳೆ ಜೋರಾಗಿ ಬರುತ್ತಿರುವುದರಿಂದ ನಮ್ಮ ಡಾಬಾದಲ್ಲಿ ಮಳೆ ನೀರು ಬಂದಿದ್ದರಿಂದ ನೀರನ್ನು ನಾನು ಮತ್ತು ಬಾಬು, ವಿನಯ ಕೂಡಿಕೊಂಡು ಹೊರ ಹಾಕುತ್ತಿದ್ದಾಗ ದಿನಾಂಕ 15-09-2016 ರಂದು ಬೆಳಗಿನ 2-00 ಗಂಟೆಯ ಸುಮಾರಿಗೆ ಕಾರಟಗಿಯಿಂದ ಸಿಂದನೂರ ಕಡೆಗೆ ಹೋಗುತ್ತಿದ್ದ ಯಾವುದೋ ಒಂದು ಮೋಟಾರ್ ಸೈಕಲ್ ನವರು ನಮ್ಮ ಡಾಬಾ ಹತ್ತಿರ ಬಂದು ಹಿಂದೆ ರಸ್ತೆಯ ಮೇಲೆ ಯಾವುದೋ ಮಹಿಳೆಗೆ ಯಾವುದೋ ಒಂದು ವಾಹನ ಅಪಘಾತಪಡಿಸಿದ್ದರಿಂದ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿ ಹೋಗಿದ್ದು, ನಂತರ ನಾನು ಮತ್ತು ವಿನಯ, ಬಾಬು ಕೂಡಿಕೊಂಡು ಕಾರಟಗಿ-ಸಿಂಧನೂರ ರಸ್ತೆ ಮೇಲೆ ನೋಡುತ್ತಾ ಬಂದಾಗ ಕಾರಟಗಿಯ ಭಗವಂತಪ್ಪ ಇವರ ಗದ್ದೆಯ ಹತ್ತಿರ ರಸ್ತೆ ಮೇಲೆ ಮೃತಪಟ್ಟ ಮಹಿಳೆಯ ಶವವಿತ್ತು ನೋಡಲಾಗಿ ಸದರಿ ಮಹಿಳೆಯು ಯಾವುದೋ ಕಾರಣಕ್ಕೆ ರಸ್ತೆ ಎಡಬದಿಗೆ ನಡೆದುಕೊಂಡು ಹೋರಟಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಹಿಳೆಗೆ ಅಪಘಾತಪಡಿಸಿ ವಾಹನ ನಿಲ್ಲಿಸದೇ ಹಾಗಯೇ ಹೋಗಿದ್ದರಿಂದ ಸದರಿ ಮಹಿಳೆಯ ತಲೆಗೆ ಗಂಭೀರವಾದ ಗಾಯವಾಗಿ ಬುರುಡೆ ಹೊರಗಡೆ ಕಿತ್ತು ಬಂದು ತಲೆಯ ಮಿದುಳು ಸಮೇತ ಮಾಸ ಹೊರಗೆ ಬಂದು, ಕೈಕಾಳುಗಳಿಗೆ ತೆರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಅದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 103/2016 ಕಲಂ: 279, 337, 338 ಐ.ಪಿ.ಸಿ.
ಮತ್ತು 187 ಐ.ಎಂ.ವಿ:.
ಫಿರ್ಯಾದಿ ಬಕ್ರೀದ್ ಹಬ್ಬದ ಪ್ರಯುಕ್ತ ಕುಕನೂರಿನ ತನ್ನ ತಮ್ಮನ ಮನೆಗೆ ಬಂದಿದ್ದು ಇಂದು ವಾಪಾಸ್ಸು
ತಮ್ಮೂರಿಗೆ ಹೋಗುವ ಸಲುವಾಗಿ ತಾನು ಕುಕನೂರ ಬಸನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಾಗ ಬಸ್
ಬರುವದು ತಡವಾಗಿದ್ದರಿಂದ ಕೊಪ್ಪಳ ಕಡೆಗೆ ಹೊರಟ ಕ್ರೋಸರ್ ವಾಹನದಲ್ಲಿ ತಾನು ಹತ್ತಿ ಕುಳಿತಾಗ ತನ್ನಂತೆ
ಇತರರು ಸಹ ಕೊಪ್ಪಳಕ್ಕೆ ಹೋಗಲು ವಾಹನದಲ್ಲಿ ಕುಳಿತಿದ್ದರು. ಕುಕನೂರಿನಿಂದ ಸಂಜೆ 6.40 ಕ್ಕೆ ಹೊರಟ
ಟ್ರ್ಯಾಕ್ಸ್ ನ್ನು 7.10 ಪಿ.ಎಂ. ಸುಮಾರಿಗೆ ಭಾನಾಪೂರ ಸಮೀಪ ಅದರ ಚಾಲಕ ಅತೀವೇಗವಾಗಿ ಹಾಗೂ ತನ್ನ
ಎದುರಿಗೆ ಬರುವ ವಾಹನವನ್ನು ಲೆಕ್ಕಿಸದೇ ಅಲಕ್ಷ್ಯತನದಿಂದ ನಡೆಸುತ್ತಾ ಹೊರಟಾಗ ಅದೇ ವೇಳೆಗೆ ಭಾನಾಪೂರ
ಕಡೆಯಿಂದ ಒಂದು ಟ್ರ್ಯಾಕ್ಟರ್ ನ್ನು ಅದರ ಚಾಲಕ ಕೂಡ ಅತೀವೇಗವಾಗಿ ಮತ್ತು ತನ್ನ ಎದುರಿಗೆ ಬರುವ ವಾಹನವನ್ನು
ಲೆಕ್ಕಿಸದೇ ಹಾಗೇಯೇ ನಡೆಸುತ್ತಾ ಬಂದು ಒಮ್ಮೇಲೇ ಮುಂದೆ ಬಂದು ಕಟ್ ಮಾಡಿದ್ದರಿಂದ ತಾನು ಕುಳಿತ ಟ್ರ್ಯಾಕ್ಸ್
ಚಾಲಕ ಟ್ರ್ಯಾಕ್ಟರ್ ನ ಟ್ರ್ಯಾಲಿಗೆ ಟಕ್ಕರು ಕೊಟ್ಟು ಅಪಘಾತ ಮಾಡಿದ್ದು ಇದೆ. ಇದರಿಂದ ಟ್ರ್ಯಾಕ್ಸ
ಪಲ್ಟಿಯಾಗಿ ಬಿದ್ದು ತನಗೆ ಎಡಗೈ ಬುಜಕ್ಕೆ ಭಾರಿ ಒಳಪೆಟ್ಟಾಗಿ, ಎಡಗೈ ಮುಂಗೈ ಹತ್ತಿರ, ಮೊಣಕೈ ಹತ್ತಿರ,
ಎಡಹಣೆ ಮೇಲೆ ತೆರಚಿದ ಗಾಯವಾಗಿದ್ದು ಇದೆ. ನನ್ನಂತೆಯೇ ಟ್ರ್ಯಾಕ್ಸ್ ನಲ್ಲಿ ಕುಳಿತು ಹೊರಟ ಇತರ ಇಬ್ಬರಿಗೂ
ಸಹ ತಲೆಗೆ ರಕ್ತಗಾಯವಾಗಿದ್ದು ಇದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment