Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, September 30, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 225/2016 ಕಲಂ: 78(3) Karnataka Police Act.:
ದಿನಾಂಕ 29-09-2016 ರಂದು ರಾತ್ರಿ 7-15 ಗಂಟೆಯ ಸುಮಾರಿಗೆ ಆರೋಪಿತರಾದ 1) ಶರಣಪ್ಪ ತಂದಿ ಬಸಪ್ಪ ಬಂಡಿ ಸಾ. ಕಾರಟಗಿ 2) ಏಸುಬಾಬು ತಂದಿ ಸತ್ಯನಾರಾಯಣ ಸಾ. ಚಳ್ಳೂರು  ಕ್ಯಾಂಪ್ ಇವರು ಕಾರಟಗಿಯ ಎಮ್.ಕೆ ರೈಸ್ ಮಿಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ್ಗೆ ಪಿ.ಎಸ್. ಶ್ರೀ. ವೀರಾ ರೆಡ್ಡಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಮಾಡಿ ಹಿಡಿದುಕೊಂಡು  ಆರೋಪಿತರ ಕಡೆಯಿಂದ ನಗದು ಹಣ ರೂ.2460=00 ಗಳನ್ನು ಮತ್ತು ಮಟ್ಕಾ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.                         
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 226/2016 ಕಲಂ: 78(3) Karnataka Police Act.:
ದಿನಾಂಕ 29-09-2016 ರಂದು ರಾತ್ರಿ 8-45 ಗಂಟೆಯ ಸುಮಾರಿಗೆ ಬೂದುಗುಂಪಾ ಗ್ರಾಮದ ಈಶ್ವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿ ವೀರೇಶಪ್ಪ ತಂದೆ ವೀರಭದ್ರಪ್ಪ ಪಲ್ಲೇದ ವಯ 50 ವರ್ಷ ಜಾತಿ ಲಿಂಗಾಯತ ಉ. ಒಕ್ಕಲುತನ ಸಾ. ಬೂದುಗುಂಪಾ ತಾ. ಗಂಗಾವತಿ ಈತನ ಮೇಲೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ  ಆರೋಪಿತನ ನಗದು ಹಣ ರೂ.2830=00 ಗಳನ್ನು ಮತ್ತು  ಮಟ್ಕಾ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.   
3] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 287/2016 ಕಲಂ: 87 Karnataka Police Act.:
ದಿನಾಂಕ:- 29-09-2016 ರಂದು ಸಂಜೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗಾಪೂರು ಗ್ರಾಮ ಸೀಮಾದ ಕಣಿವೆ ಆಂಜನೇಯ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ.  ಮತ್ತು  ಸಿಬ್ಬಂದಿಯವರಾದ ಸಿಪಿಸಿ- 118, 97, 110, 358, 120, 323, ಹೆಚ್.ಸಿ. 156 ಎ.ಪಿ.ಸಿ. 77  ಮತ್ತು ಇಬ್ಬರು ಪಂಚರನ್ನು ಕೂಡಿಕೊಂಡು ಸಾಯಿನಗರ ಗ್ರಾಮಕ್ಕೆ ಹೋಗಿ ನಮಗೆ ಮಾಹಿತಿ ಇದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು ನೋಡಲು ಸಂಗಾಪೂರು ಸೀಮಾದ ಕಣಿವೆ ಆಂಜನೇಯ ಗುಡಿಯ ಹತ್ತಿರ ದೇವಸ್ಥಾನದ ಬೆಳಕಿನ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 6 ಜನರು ಸಿಕ್ಕಿಬಿದ್ದಿದ್ದು. ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 16,030-00 ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.ರುತ್ತದೆ.
4] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 68/2016 ಕಲಂ: 32, 34 Karnataka Excise Act.

ದಿನಾಂಕ: 29-09-2016 ರಂದು ಸಾಯಂಕಾಲ 4:30 ಗಂಟೆ ಸುಮಾರಿಗೆ ಗಾಣದಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮದ್ಯದ ಟೆಟ್ರಾಪ್ಯಾಕ್ಗಳನ್ನು ತನ್ನ ಸ್ವಾದಿನದಲ್ಲಿ ಇಟ್ಟುಕೊಂಡು ಅವುಗಳನ್ನು ಮಾರಾಟ ಮಾಡುತ್ತಿದ್ದಾಗ ಪಿ.ಎಸ್. ಬೇವೂರ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 90 ಎಂ.ಎಲ್ನ ಅಳತೆಯುಳ್ಳ HAYWARDSCHEERS WHISKY  ಎಂಬ ಲೇಬಲುಳ್ಳ ಒಟ್ಟು 54 ಮದ್ಯದ ಟೆಟ್ರಾಪ್ಯಾಕ್ಗಳ ||ಕಿ||  1433/- ರೂ ಕಿಮ್ಮತ್ತಿನ ಮದ್ಯದ ಟೆಟ್ರಾಪ್ಯಾಕ್ಗಳನ್ನು ಮತ್ತು ನಗದು ಹಣ 450 ರೂಪಾಯಿಗಳನ್ನು ಜಪ್ತ್ ಮಾಡಿಕೊಂಡು ಬಂದಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008