Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, September 13, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 269/2016 ಕಲಂ: 87 Karnataka Police Act.
ದಿನಾಂಕ:- 12-09-2016 ರಂದು ರಾತ್ರಿ  ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪುರ ಗ್ರಾಮ ವಾಲ್ಮೀಖಿ ಸಮುದಾಯ ಭವನದ  ಮುಂದುಗಡೆ ಲೈಟಿನ ಬೆಳಕಿನ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಅಂದಾರ ಬಾಹರ್ ಎಂಬ ಅದೃಷ್ಟದ ಇಸ್ಪೀಟ್ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ  ದಾಳಿಮಾಡಿದಾಗ ಪಿ.ಎಸ್.ಐ. ಪ್ರಕಾಶ ಮಾಳಿ ಹಾಗೂ ಸಿಬ್ಬಂದಿ ಮತ್ತು ಪಂಚರು ಕೂಡು ದಾಳಿ ಮಾಡಿದಾಗ (1) ವೆಂಕಟೇಶ ತಂದೆ ರೇಣುಕಪ್ಪ , ಕಲಿಕೇರಿ ವಯಸ್ಸು 23 ವರ್ಷ, ಜಾತಿ: ನಾಯಕ ಉ:ವಿದ್ಯಾಭ್ಯಾಸ ಸಾ:ಮಲ್ಲಾಪರ (2) ಯಂಕಪ್ಪ ತಂದೆ ಮಲ್ಲಪ್ಪ  ಅಡ್ಡಗಾಲ ವಯಸ್ಸು 22 ವರ್ಷ, ಜಾತಿ: ಕುರಬರ, ಉ:ಕೂಲಿ ಕೆಲಸ, ಸಾ:ಮಲ್ಲಾಪುರ (3) ದೇವಪ್ಪ ತಂದೆ ಪಂಪಣ್ಣ, ವಯಸ್ಸು 26 ವರ್ಷ, ಜಾತಿ: ಗೊಲ್ಲರ, ಉ: ಕೂಲಿಕೆಲಸ ಸಾ: ಸಾ:ಮಲ್ಲಾಪುರ (4) ಯಂಕಣ್ಣ ತಂದೆ ಕನಕಪ್ಪ ವಯಸ್ಸು 23 ವರ್ಷ, ಜಾತಿ: ಗೊಲ್ಲರ್, ಉ:ಕೂಲಿಕೆಲಸ, ಸಾ: ಸಾ:ಮಲ್ಲಾಪುರ  (5) ರಮೇಶ @ ರಾಮಲಿಂಗಪ್ಪ  ತಂದೆ ಮಲ್ಲಪ್ಪ , ವಯಸ್ಸು 26 ವರ್ಷ, ಜಾತಿ: ಕುರಬರ , ಉ: ಡ್ರೈವರ , ಸಾ: ಸಾ:ಮಲ್ಲಾಪುರ ಇವರು ಸಿಕ್ಕಿದ್ದು ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 5040/- ರೂಪಾಯಿ, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಬರಕಾ ಸಿಕ್ಕಿದ್ದು,  ನಂತರ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 154/2016 ಕಲಂ: 78(3) Karnataka Police Act.
ದಿನಾಂಕ 12-09-2016 ರಂದು ರಾತ್ರಿ 8-00 ಗಂಟೆಗೆ ಹುಲಿಹೈದರ ಗ್ರಾಮದ ಹೊರ ವಲಯದ ಗುಡದೂರ ಕ್ರಾಸ್ದ ಸಾರ್ವಜನಿಕ ಸ್ಥಳದಲ್ಲಿ ಭೋಗೇಶ ತಂದೆ ರಾಯಪ್ಪ ಆದಾಪುರ, ವಯಾ 38 ವರ್ಷ ಜಾತಿ ಕುರುಬರು ಉ: ಒಕ್ಕಲುತನ ಸಾ: ಹೇರೂರು ಇತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟ ಅಂತಾ ಕೂಗುತ್ತಾ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಶ್ರೀ ಕಾಳಿಕೃಷ್ಣ ಸಿ.ಪಿ.ಐ. ಗಂಗಾವತಿ ಗ್ರಾಮೀಣ ವೃತ್ತ ಹಾಗೂ ಸಿಬ್ಬಂದಿ ಮತ್ತು ಪಂಚರು ಹೋಗಿ ದಾಳಿ ಮಾಡಿ ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 22000=00, ಒಂದು ಲಾವ್ ಕಂಪನಿಯ ಮೊಬೈಲ್ ಸಿಕ್ಕಿದ್ದು, ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ.
3] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ: 83/2016 ಕಲಂ: 143, 147, 323, 354, 504, 506, 109 ಸಹಿತ 149 ಐ.ಪಿ.ಸಿ ಮತ್ತು 3(1), (10) ಎಸ್.ಸಿ/ಎಸ್.ಟಿ ಕಾಯ್ದೆ 1989  
ಫಿರ್ಯಧಿ ಶ್ರೀ ರಾಜಶ್ರೀ ತಂದೆ ಹನಮಂತಪ್ಪ ಸಾಲಿ ವಯಾ: 20 ವರ್ಷ ಜಾ: ಹಿಂದೂ ವಡ್ಡರ ಉ: ವಿಧ್ಯಾರ್ಥಿ ಸಾ: ಹನಮಸಾಗರ ತಾ: ಕುಷ್ಟಗಿ ಹಾಗೂ ಅತ್ತೆ ಗಂಗಮ್ಮ ಮತ್ತು ಅಕ್ಕ ಪದ್ಮಶ್ರೀ ಇವರು ಮತ್ತು ಹನಮಸಾಗರ ಗ್ರಾಮ ಪಂಚಾಯತಿರವರಿಗೆ ಹನಮಸಾಗರ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಅಂಗಡಿ ವಿಷಯವಾಗಿ ಈಗ್ಗೆ ಒಂದು ವರ್ಷದಿಂದ ವೈಮನಸ್ಸು ಇರುತ್ತದೆ. ದಿನಾಂಕ: 08-09-2016 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರು ಹಳೇ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಆರೋಪಿತರೆಲ್ಲರೂ ಸೇರಿ ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಹೊಡ ಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ..
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 78(3) Karnataka Police Act.
ದಿನಾಂಕ: 12-09-2016 ರಂದು ರಾತ್ರಿ 8-00 ಗಂಟೆಗೆ ಹೂಸೂರು ಸೋಂಪೂರು ಗ್ರಾಮದಲ್ಲಿ ಬರುವ ಶ್ರೀ ದುರ್ಗಮ್ಮ ದೇವಸ್ಥಾನ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಬಸರಡ್ಡಿ ತಂದೆ ವೀರುಪಾಕ್ಷಪ್ಪ ಅಂತ್ತೂರು ವಯ: 60 ವರ್ಷ ಜಾತಿ: ರಡ್ಡಿ ಸಾ: ಹೂಸೂರು ಸೋಂಪೂರು ಇತನು 01 ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತಾ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ ನಂಬರಗಳನ್ನು ಬರೆದುಕೊಡುತಿದ್ದ್ದಾಗ ಪಿ.ಎಸ್.ಐ ರವರು ಸಿಬ್ಬಂದಿ ದಾಳಿ ನಗದು ಹಣ 1,510/- ರೂಪಾಯಿ. ಹಾಗೂ ಮಟಕಾ ಜೂಜಾಟದ ಸಾಮಾಗ್ರ್ರಿಗಳಾದ ಒಂದು ಓ.ಸಿ. ಮಟಕಾ ನಂಬರ ಬರೆದ ಹಾಳೆ, ಒಂದು ಬಾಲ ಪೆನ್ನು ಅಂ.ಕಿ. ಇಲ್ಲ ನೇದ್ದವುಗಳನ್ನು. ತಾಬಾಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ

0 comments:

 
Will Smith Visitors
Since 01/02/2008