Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, October 20, 2016

1] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 297/2016 ಕಲಂ: 78(3) Karnataka Police Act.
ದಿನಾಂಕ:- 19-10-2016 ರಂದು ಉಡಮಕಲ್ ಗ್ರಾಮದ ಶರಣಬಸವೇಶ‍್ವರ ಗುಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ಜೂಜಾಟದ ನಡೆಯುತ್ತಿದೆ ಅಂತಾ ಖಚಿತವಾದ ಭಾತ್ಮಿ ಬಂದ ಮೇರೆಗೆ ಹೋಗಿ ದಾಳಿ ಮಾಡಲಾಗಿ ತನ್ನ ಹೆಸರು ಹನಮಂತ ತಂ/ ನಿಂಗಪ್ಪ ಮುಕರ್ತನಾಳ. ವಯಾ 35 ಜಾ. ನಾಯಕ ಉ. ಕೂಲಿ ಕೆಲಸ ಸಾ. ಉಡಮಕಲ್ ತಾ. ಗಂಗಾವತಿ. ಅಂತಾ ತಿಳಿಸಿದ್ದು, ಅವನ ಹತ್ತಿರ ಮಟಕಾ ಜೂಜಾಟದ ನಗದು ಹಣ ರೂ. 690/- ರೂಪಾಯಿ, ಒಂದು ಮಟಕಾ ಪಟ್ಟಿ, ಒಂದು ಬಾಲ ಪೆನ್ನು ದೊರೆತಿದ್ದು ಈ ಬಗ್ಗೆ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 298/2016 ಕಲಂ: 279, 338 ಐ.ಪಿ.ಸಿ.

ಶಾರದಮ್ಮ ಗಂ/ ಅಯ್ಯಪ್ಪ ಕಮ್ಮಾರ ಸಾ. ವೆಂಕಟಗಿರಿ ಇವರು ನೀಡಿದ ಹೇಳಿಕೆ ಫಿರ್ಯಾದಿ ಹಾಜರ ಪಡಿಸಿದ್ದು ಸಾರಾಂಶವೆನಂದರೆ. ದಿನಾಂಕ. 16-10-2016 ರಂದು 05-00 ಪಿ.ಎಂಕ್ಕೆ. ಫಿರ್ಯಾದಿದಾರರ ಮಗ ಮಂಜುನಾಥ ಇವನು ಕೆಸರಟ್ಟಿಗೆ ಹೋಗಿದ್ದು ಅಲ್ಲಿ ತನ್ನ ಗೆಳೆಯನ ಮೋಟಾರ ಸೈಕಲ್ ನಂ. ಕೆ.ಎ.02/ಈ.ಎಫ್.7906 ಇದನ್ನು ಕೆಸರಟ್ಟಿಯಲ್ಲಿ ಗಂಗಾವತಿ ಕನಕಗಿರಿ ರಸ್ತೆಯ ಮೇಲೆ ಅತಿವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಸ್ಕಿಡ್ ಮಾಡಿಕೊಂಡು ಬಿದ್ದು ಅಪಘಾತ ಮಾಡಿಕೊಂಡಿದ್ದರಿಂದ ಮಂಜುನಾಥನ ತಲೆಗೆ ಒಳಪೆಟ್ಟು ಬಿದ್ದು ಮೂರ್ಚೆ ಹೋಗಿದ್ದು, ಹೆಚ್ಚಿನ ಚಿಕಿತ್ಸೆ ಕುರಿತು ಎಸ್.ಡಿ.ಎಂ. ಆಸ್ಪತ್ರೆಯಲ್ಲಿ ಕರೆದುಕೊಂಡು ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008