Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 7, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 95/2016 ಕಲಂ: 120 (ಬಿ), 115, 506, 307 ಸಹಿತ 149 ಐ.ಪಿ.ಸಿ.
ದಿನಾಂಕ: 06-10-2016 ರಂದು ರಾತ್ರಿ 8:40 ಗಂಟೆಗೆ ಫಿರ್ಯಾದಿ ಶ್ರೀ ಭರಮಪ್ಪ ತಂದೆ ಶಿವಲಿಂಗಪ್ಪ ನಗರ ವಯ: 47 ವರ್ಷ ಜಾ: ಕುರುಬರ ಉ: ಒಕ್ಕಲುತನ ಸಾ: ಹಟ್ಟಿ ತಾ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಗಣಕೀಕರಣ ಮಾಡಿಸಿದ ದೂರನ್ನು ಹಾಜರಪಡಿಸಿದ್ದು ಅದರ ಸಾರಾಂಶ ವೇನಂದರೆ, ಆರೋಪಿತರಾದ ಮಲ್ಲಯ್ಯ ತಂದಿ ಕೊಟ್ರಯ್ಯ, ಹಿರೇಮಠ ಹಾಗೂ ಇತರರು ಸೇರಿಕೊಂಡು ಫಿರ್ಯಾದಿಯ ರಾಜಕೀಯದ ಏಳಿಗೆಯನ್ನು ಸಹಿಸದೇ ವಿನಾಕಾರಣ ದ್ವೇಷ ಸಾಧಿಸುತ್ತ ಬಂದು ಗ್ರಾಮದಲ್ಲಿ ಪಂಚಾಯತ ಮಟ್ಟದ ಅಭಿವೃದ್ದಿ ಕಾಮಗಾರಿಗಳನ್ನು ಮಾಡುವ ಕಾಲಕ್ಕೆ ವಿನಕಾರಣ ತಂಟೆ ತಕರಾರು ಮಾಡುತ್ತ, ಜಗಳ ತೆಗೆಯುತ್ತ ಜೀವದ ಬೆದರಿಕೆ ಹಾಕುತ್ತ ಬಂದಿದ್ದಲ್ಲದೆ, ಜೀವ ಸಹಿತ ಮುಗಿಸಲು ಹೊಂಚು ಹಾಕಿ ಫಿರ್ಯಾದಿ ಸುಪಾರಿ ಕೊಟ್ಟು ಕೊಲೆ ಮಾಡಿಸಲು ಜನರನ್ನು ಸಹ ಗೊತ್ತುಮಾಡಿ ನಂತರ ಅವರಿಗೆ ಮನೆ ತೋರಿಸಿದ್ದು ಇರುತ್ತದೆ. ಕಾರಣ ನನ್ನ ಕೊಲೆಗೆ ಸಂಚು ಮಾಡಿದ ಮಲ್ಲಯ್ಯ ತಂದಿ ಕೊಟ್ರಯ್ಯ ಹಿರೇಮಠ ಹಾಗೂ ಅವನ ಮನೆಯವರಾದ ಇತರ 10 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 157/2016 ಕಲಂ: 78(3) Karnataka Police Act.
ಶ್ರೀ ಶರಣಪ್ಪ ಎ.ಎಸ್.ಐ ಕನಕಗಿರಿ ಪೊಲೀಸ್ ಠಾಣೆರವರು ದಿನಾಂಕ 06-10-2016 ರಂದು ಸಂಜೆ 7-5 ಗಂಟೆಯ ಸುಮಾರಿಗೆ ಸೋಮಸಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹತ್ತಿರ ಇರುವ ರಸ್ತೆಯ ಪಕ್ಕದಲ್ಲಿ ಫೂಲ್ ಮೇಲೆ ಸಾರ್ವಜನಿಕ ಸ್ಥಳದಲ್ಲಿ  ಆರೋಪಿ ಬಸವರಾಜಪ್ಪ ತಂದೆ ಬಸಪ್ಪ ಹೊಸಮನಿ ಈತನು ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಗೆ 1 ರೂಪಾಯಿಗೆ 80 ರೂಪಾಯಿ ಬರುತ್ತದೇ ಬನ್ನೀ ನಸೀಬ ಜೂಜಾಟ ಅಂತಾ ಕೂಗುತ್ತಾ ಸಾರ್ವಜನಿಕರನ್ನು ಬರ ಮಾಡಿಕೊಂಡು ಅವರಿಂದ ಹಣ ಪಡೆದು ಅವರಿಗೆ ಓ.ಸಿ. ನಂಬರಗಳನ್ನು ಬರೆದು ಕೊಡುತ್ತಿದ್ದಾಗ ಪಂಚರೊಂದಿಗೆ ದಾಳಿ ಮಾಡಲು ಆರೋಪಿತನಿಂದ 01 ಮಟಕಾ ಬರೆದ ಪಟ್ಟಿ, 1 ಬಾಲ್ ಪೆನ್ನು ನಗದು ಹಣ ರೂ. 650=00, ಸಿಕ್ಕಿದ್ದು ಈ ಬಗ್ಗೆ ರಾತ್ರಿ 7-15 ಗಂಟೆಯಿಂದ 8-00 ಗಂಟೆಯವರೆಗೆ ಅಲ್ಲಿಯೇ ಇದ್ದ ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಮಾಡಿಕೊಂಡು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಗೊಂಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 112/2016 ಕಲಂ: 143,147,148,504, 109, 323,324, 354, 341,355, 506, 307 ಸಹಿತ 149 ಐಪಿಸಿ .
ದಿನಾಂಕ:-06/10/2016 ರಂದು 9-10 ಪಿ.ಎಂ.ಕ್ಕೆ ಫಿರ್ಯಾದಿ ರೇಖಾ ಗಂಡ ದೇವಪ್ಪ ಸೋಬಾನದ, ವಯಾ 28 ವರ್ಷ, ಜಾ: ಗಾಣಿಗೇರ, ಉ: ಮನೆಕೆಲಸ, ಸಾ: ಕಿಲ್ಲೇದ ಓಣಿ ಕುಕನೂರ, ತಾ:ಯಲಬುರ್ಗಾ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ್ದ ದೂರಿನ ಸಾರಾಂಶವೇನೆಂದರೆ, ದಿನಾಂಕ:06-10-2016 ರಂದು ಸಂಜೆ 5.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತಮ್ಮ ಪ್ಲಾಟ್ ನೋಡುತ್ತಾ ರಸ್ತೆಯ ಮೇಲೆ ನಿಂತಿದ್ದಾಗ ಅವಾಚ್ಯವಾಗಿ ಬೈಯ್ದಾಡಿ ಮೈಕೈ ಮುಟ್ಟಿ ಎಳೆದಾಡಿ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಅದೇ ರೀತಿ ಇನ್ನುಳಿದ ಗಾಯಾಳುಗಳಿಗೆ ಆರೋಪಿತರು ಅವಾಚ್ಯವಾಗಿ ಬೈಯ್ದಾಡಿ ಕೈಯಿಂದ, ಕಟ್ಟಿಗೆಯಿಂದ ಬಡಿದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಮುಂತಾಗಿದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 101/2016 ಕಲಂ: 279, 337, 338  .ಪಿ.ಸಿ.

ದಿನಾಂಕ: 05-10-2016 ರಂದು ಮುಂಜಾನೆ ಸುಮಾರಿಗೆ ಪಿರ್ಯಾದಿ ಶ್ರೀ ಮುದಕಪ್ಪ ತಂದೆ ಮೈಲಾರಪ್ಪ ಯಲಬುರ್ಗಾ ವಯ- 29 ವರ್ಷ ಜಾತಿ- ಕುರಬರ ಉ- ಒಕ್ಕಲುತನ ಸಾ:  ಕುಡಗುಂಟಿ ತಾ: ಯಲಬುರ್ಗಾ ಹಾಗೂ ಆರೋಪಿ ಗವಿಸಿದ್ದಪ್ಪ  ಇಬ್ಬರೂ ಕೂಡಿಕೊಂಡು ಯಲಬುರ್ಗಾಕ್ಕೆ ಪಿರ್ಯಾದಿಯ ಹೊಸಬಟ್ಟೆ ತರಲು ಆರೋಪಿತನ ಮೋಟಾರ ಸೈಕಲ ನಂ KA-37/Q-2328 ನೇದ್ದರ ಮೇಲೆ ಬಂದಿದ್ದು ಇರುತ್ತದೆ. ನಂತರ ಯಲಬುರ್ಗಾದಲ್ಲಿ ಪಿರ್ಯಾದಿದಾರ ಮತ್ತು ಆರೋಪಿ ಇಬ್ಬರೂ ಪಿರ್ಯಾದಿದಾರನ ಹೊಸ ಬಟ್ಟೆ ತೆಗೆದುಕೊಂಡು ವಾಪಸ್ ಕುಡಗುಂಟಿ ಗ್ರಾಮಕ್ಕೆ ಹೋಗುತ್ತಿದ್ದಾಗ ಆರೋಪಿತನು ಮೋಟಾರ ಸೈಕಲ ಚಲಾಯಿಸುತ್ತಿದ್ದ ಅದರ ಹಿಂದುಗಡೆ ಪಿರ್ಯಾದಿದಾರ ಕುಳಿತುಕೊಂಡಿದ್ದು ಮಧ್ಯಾನ್ಹ 11-30 ಗಂಟೆಯ ಸುಮಾರಿಗೆ ಸದರಿ ಮೋಟಾರ ಸೈಕಲ ನಂ KA-37/Q-2328  ನೇದ್ದನ್ನು ಆರೋಪಿತನು ಮಲಕಸಮುದ್ರ ಸೀಮಾದಲ್ಲಿ ಬರುವ ಗಂಗೂರೇಶ್ವರ ದೇವಾಸ್ಥನದ ಹತ್ತಿರ ಮಲಕಸಮುದ್ರ – ಕುಡಗುಂಟಿ ರಸ್ತೆ ಮೇಲೆ ಸಜ್ಜೆ ತೆನೇ ಹಾಕಿದ್ದು ಆರೋಪಿತನು ತಾನು ನಡೆಸುತ್ತಿದ್ದ ಮೋಟಾರ ಸೈಕಲನ್ನು ಗಂಟೆಯ ಸುಮಾರಿಗೆ ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆ ಮೇಲೆ ಬಿದ್ದಿದ್ದು ಇದರಿಂದ ಆರೋಪಿತನಿಗೆ ಭಾರಿ ಹಾಗೂ ಸಾದಾ ಸ್ವರೂಪದ ಗಾಯವಾಗಿದ್ದು ಪಿರ್ಯಾದಿಗೆ ಸಾದಾ ಸ್ವರೂಪದ ಗಾಯವಾಗಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008