ದಿನಾಂಕ: 10-10-2016 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಆರೋಪಿ ನಿಂಗಪ್ಪ ತಂದೆ ಬಸಪ್ಪ
ಅಡಿವಳ್ಳಿ, ವಯಸ್ಸು: 65 ವರ್ಷ ಜಾತಿ: ನಾಯಕ, ಉ:ಹೋಟಲ ಕೆಲಸ ಸಾ: ಕವಲೂರು ತಾ:ಜಿ: ಕೊಪ್ಪಳ ಇತನು
ಕವಲೂರು ಗ್ರಾಮದ ಪಂಚಲಿಂಗೇಶ್ವರ ದೇವಸ್ಥಾನದ ಹತ್ತಿರ ಒಂದು ಚಹಾದ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಮಟಕಾ ಜೂಜಾಟದಲ್ಲಿ ನಿರತನಾಗಿದ್ದಾಗ, ಎ.ಎಸ್.ಐ. ಶಂಕರಗೌಡ ಹಾಗೂ ತಮ್ಮ ಸಿಬ್ಬಂದಿ ಮತ್ತು ಪಂಚರೊಂದಿಗೆ
ಮಟಕಾ ಜೂಜಾಟದ ದಾಳಿ ಮಾಡಿ, ಮಟಕಾ ಜೂಜಾಟದಲ್ಲಿ ನಿರತನಾಗಿದ್ದ ಆರೋಪಿತನಿಂದ ಮಟಕಾ ಜೂಜಾಟದ ಸಾಮಗ್ರಿಗಳನ್ನು
ಹಾಗೂ ನಗದು ಹಣ 780=00 ರೂ.ಗಳನ್ನು ಜಪ್ತ ಮಾಡಿಕೊಂಡು ನಂತರ ಆರೋಪಿತನು ತಾನು ಮಟಕಾ ನಂಬರ ಬರೆದ ಪಟ್ಟಿಯನ್ನು
ಆರೋಪಿ ಅಶೋಕ ಸಾ: ನೀರಲಗಿ ತಾ: ಗದಗ, ಹಾ:ವ: ಕವಲೂರು ಈತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ
ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ: 26/2016 ಕಲಂ: 279, 337, ಐ.ಪಿ.ಸಿ:
ದಿನಾಂಕ 10-10-2016 ರಂದು ಸಂಜೆ 4-50
ಪಿಎಂ ಗಂಟೆಗೆ ಫಿರ್ಯಾದಿದಾರರು ತಮ್ಮ ಟಯೂಟಾ ಇನೂವಾ ಕಾರ್ ನಂ
ಕೆಎ03 ಎಂಟಿ 5979 ನೇದ್ದರಲ್ಲಿ ಫಿರ್ಯಾದಿ ಜೆ.ವೀರಪ್ರಸಾದ ಮತ್ತು ಫಿರ್ಯಾದಿ
ಹೆಂಡತಿ ಕೃಷ್ಣಾ ಕುಮಾರಿ ಕುಳಿತುಕೊಂಡು ಅಯ್ಯಪ್ಪ ಸ್ವಾಮಿ ದೇವಾಸ್ಥಾನಕ್ಕೆ ಹೋರಟಿರುವಾಗ
ಕಾರ್ ಚಾಲಕ ವೀರನಗೌಡ ಈತನು ಕಾರನ್ನು ಚಾಲನೆ ಮಾಡಿಕೊಂಡು ಗಂಗಾವತಿಯ ಕೊಪ್ಪಳ ರಸ್ತೆಯ
ಕೆಂದೂಳಿ ರಾಮ್ಮಣ ಶಾಲೆ ಹತ್ತಿರ ಹೋರಟಿರುವಾಗ ಆರೋಪಿತನು ತನ್ನ ಲಾರಿ ನಂ ಹೆಚ್ ಆರ್ 63-1904 ನೇದ್ದನ್ನು ಅತಿ
ಜೋರಾಗಿ ಮತ್ತು ಅಲಕ್ಷತನ ದಿಂದ ಚಾಲನೆ ಮಾಡಿಕೊಂಡು ಬಂದು ಮೊದಲು ಬಜಾಜ್ ಡಿಸ್ಕ್ವರಿ
ಮೋ/ಸೈ ನಂ ಕೆ.ಎ.37 ಡಬ್ಲೂ
0580 ನೇದ್ದರ ಸೈಡ್ ಬಾಕ್ಸ್ ಗೆ ಟಕ್ಕರ್ ಕೊಟ್ಟಾಗ ಲಾರಿ ನಿಯಂತ್ರಣಗೊಳದೆ ನಂತರ
ಫಿರ್ಯಾದಿದಾರನ ಕಾರಿನ ಹಿಂಭಾಗದ ಡೋರ್ ಗೆ ಟಕ್ಕರ್ ಕೊಟ್ಟಿದ್ದರಿಂದ ಕಾರಿನ ಹಿಂಭಾಗದಲ್ಲಿ
ಸಂಪೂರ್ಣವಾಗಿ ಡೋರ್ ಡ್ಯಾಮೇಜ್ ಆಗಿದ್ದು ಮತ್ತು ಗ್ಲಾಸ್ ಒಡೆದಿದ್ದು ಹಾಗೂ ಬಂಪರ್.ಹಿಂದಿನ
ಬಲಭಾಗದ ಲೈಟ್ ಅಸಂಬ್ಲಿ ಡ್ಯಾಮೇಜ್ ಅಗಿದ್ದು ಇರುತ್ತದೆ ಮತ್ತು ಮೋ/ಸೈ ಸಹಾ ಡ್ಯಾಮೇಜ್
ಆಗಿದ್ದು ಮತ್ತು ಮೋ/ಸೈ ಸವಾರನಾದ ವೆಂಕಟೇಶ ತಂದೆ ಗೋವಿಂದಯ್ಯ ಸಾ:ದಸನಾಳ ಇತನಿಗೆ
ಗಾಯಗಳಾಗಿದ್ದು ಇರುತ್ತದೆ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment