Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, November 18, 2016

1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ: 113/2016 ಕಲಂ: 279, 337, 338 ಐ.ಪಿ.ಸಿ. ಹಾಗೂ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 17-11-2016 ರಂದು ಮಧ್ಯಾಹ್ನ 3-30 ಗಂಟೆಗೆ ಫಿರ್ಯಾದಿ ಲಕ್ಷ್ಮಣ್ಣ ತಂದೆ ದೇವಪ್ಪ ಬೇಟಗೇರಿ ಸಾ: ಬೋಚನಹಳ್ಳಿ ಇತನು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಪಿರ್ಯಾದಿಯನ್ನು ಹಾಜರು ಪಡಿಸಿದ್ದು, ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ, ದಿನಾಂಕ: 17-11-2016 ರಂದು ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಬೋಚನಹಳ್ಳಿ-ತಿಗರಿ ರಸ್ತೆಗೆ ಹೊಂದಿಕೊಂಡಿರುವ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ  ಅದೇ ಸಮಯಕ್ಕೆ ನಿಂಗನಗೌಡನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ: ಕೆಎ-36 ಆರ್-5855 ನೇದ್ದನ್ನು ಬೋಚನಹಳ್ಳಿ ಕಡೆಯಿಂದ ತಿಗರಿ ಕಡೆಗೆ ರಸ್ತೆಯ ಎಡ ಬದಿಗೆ ನಿಧಾನವಾಗಿ ನಡೆಸಿಕೊಂಡು ಹೋಗುತ್ತಿದ್ದಾಗ, ಅದೇ ವೇಳೆಗೆ ತಿಗರಿ ಕಡೆಯಿಂದ ಆರೋಪಿತನು ತಾನು ನಡೆಸುತ್ತಿದ್ದ ಟ್ರಾಕ್ಟರ್ ಗೆ ಮೂರು ಟ್ರಾಲರಗಳನ್ನು ಹಾಕಿಕೊಂಡು ಎಡರಲ್ಲಿ ಕಬ್ಬು ಹೇರಿಕೊಂಡು ಟ್ರಾಕ್ಟರನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ತಪ್ಪಿ ರಾಂಗ್ ಸೈಡ್ ಬಂದು ನಿಂಗನಗೌಡ ಹಾಗೂ ಆತನ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟು ಅಫಘಾತ ಮಾಡಿದ್ದರಿಂದ ನಿಂಗನಗೌಡನಿಗೆ ಬಲಗಾಲ ಮೋಣಕಾಲ ಹತ್ತಿರ ಭಾರಿ ರಕ್ತಗಾಯವಾಗಿ ಕಾಲು ಮುರಿದು ಎಲಬು ಹೋರಗಡೆ ಬಂದಿದ್ದು, ಎರಡು ಕೈಗಳಿಗೆ ಭಾರಿ ಒಳ ಪೆಟ್ಟಾಗಿ ಮುರಿದಂತೆ ಕಾಣಿಸುತ್ತಿದ್ದು ಅಲ್ಲದೇ ಹಣೆಯ ಮೇಲೆ, ಭಾಯಿಗೆ, ಮೂಗಿನ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಫಿರ್ಯಾಧಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 257/2016 ಕಲಂ: 457, 380 ಐ.ಪಿ.ಸಿ.
ದಿನಾಂಕ 17-11-2016 ರಂದು 12-00 ಪಿ.ಎಂ.ಕ್ಕೆ ಬಸಯ್ಯ ತಂದೆ ಶಂಕ್ರಯ್ಯ ಮಠ ವಯಾ: 48 ವರ್ಷ ಜಾ: ಲಿಂಗಾಯತ(ಜಂಗಮ) ಉ: ಶಿಕ್ಷಕರು ಸಾ:  ವಿರುಪಾಪುರ ತಾಂಡ, 31 ನೇ  ವಾರ್ಡ ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ದಿನಾಂಕ 16-11-2016 ರಂದು ಸಾಯಂಕಾಲ 6-00 ಗಂಟೆಯಿಂದ ದಿನಾಂಕ 17-11-2016 ರಂದು ಮುಂಜಾನೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಗಂಗಾವತಿ ನಗರದ ವಿರುಪಾಪೂರ ತಾಂಡಾದಲ್ಲಿರುವ ಫಿರ್ಯದಿದಾರರ ಮನೆಯ ಮೇನ್ ಗೇಟ್ ಹಾಗೂ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯೊಳಗೆ ಹೋಗಿ ಅಲ್ಮರಾದಲ್ಲಿಟ್ಟಿದ್ದ ಬಂಗಾರ, ಬೆಳ್ಳಿ, ಅಂ.ಕಿ 1200-00 ರೂ. ಹಾಗೂ 10,500-00 ರೂ. ನಗದುಹಣ. ಎಲ್ಲಾ ಸೇರಿ ಒಟ್ಟು ಅಂ.ಕಿ.ರೂ.84,700-00 ಬೆಲೆ ಬಾಳುವವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
3] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 257/2016 ಕಲಂ: 279, 338  ಐ.ಪಿ.ಸಿ.

ದಿ:17-11-16 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿದಾರರಾದ ಸಿ. ಆಂಜನೇಯ, ಸಾ: ಕೌಲಬಜಾರ ಬಳ್ಳಾರಿ ಇವರು ಠಾಣೆಗೆ ಹಾಜರಾಗಿ ಗಣಿಕೀಕೃತ ಫಿರ್ಯಾದಿ ನೀಡಿದ್ದು ಅದರ ಸಾರಾಂಶವೆನೆಂದರೆ, ನಿನ್ನೆ ದಿ:16-11-16 ರಂದು ಮದ್ಯಾನ್ಹ 3-30 ಗಂಟೆಗೆ ತನ್ನ ಮಗ ಸಿ. ಮೋಹನಕುಮಾರ ಇತನು ಹೊಸಪೇಟೆಯಿಂದ ಕೊಪ್ಪಳಕ್ಕೆ ಕೆಲಸದ ನಿಮಿತ್ತ ಬರುವಾಗ ತನ್ನ ಮೋಟಾರ ಸೈಕಲ್ ನಂ: ಕೆಎ-35/ಇಸಿ-6061 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ಬರುವಾಗ ತನ್ನ ವಾಹನವನ್ನು ನಿಯಂತ್ರಿಸದೇ ಹಾಕಿಕೊಂಡು ಬಿದ್ದು ಭಾರಿ ಪೆಟ್ಟುಗಳಾಗಿದ್ದು ಇರುತ್ತದೆ. ಕಾರಣ ಅಪಘಾತ ಮಾಡಿದ ಮೋಟಾರ ಸೈಕಲ್ ನಂ:  ಕೆಎ-35/ಇಸಿ-6061 ನೇದ್ದರ ಚಾಲಕ ಸಿ. ಮೋಹನಕುಮಾರ ತಂದೆ ಸಿ. ಆಂಜನೇಯ. ಸಾ: ಕೌಲಬಜಾರ ಬಳ್ಳಾರಿ. ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ತಡವಾಗಿ ಸಲ್ಲಿಸಿದ ಫಿರ್ಯಾದಿ ಮೇಲಿಂದ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008