Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, November 17, 2016

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ: 191/2016 ಕಲಂ: 323,324,504ಸಹಿತ 34 ಐ.ಪಿ.ಸಿ.
ದಿನಾಂಕ: 16-11-2016 ರಂದು 5-30 ಪಿ.ಎಂ.ಕ್ಕೆ ಪಿರ್ಯಾಧಿದಾರರಾದ ವೆಂಕಟೇಶ ತಂದೆ ಹನಮಪ್ಪ ರಾಠೋಡ ವಯ: 27 ವರ್ಷ, ಲಮಾಣಿ ಜನಾಂಗ ಉ: ಒಕ್ಕಲುತನ ಸಾ: ಶಿವನತಾಂಡಾ ಇಂದ್ರಗಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ಪಿರ್ಯಾದಿದಾರರಿಗೂ ಮತ್ತು ಆರೋಪಿತರಿಗೂ ಮನೆ ಕಟ್ಟಿಕೊಳ್ಳುವ ವಿಷಯದಲ್ಲಿ ಇಬ್ಬರಿಗೂ ಮನಸ್ತಾನ ಇದ್ದು ಇಂದು ದಿನಾಂಕ: 16-11-2016 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ಪಿರ್ಯಾದಿದಾರರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಪಿರ್ಯಾದಿದಾರರು ಕಾಮಗಾರಿ ಮಾಡುವವರಿಗೆ ನಮ್ಮ ಮನೆ ಮುಂದಿನ ರಸ್ತೆಯನ್ನು ಯಾಕೆ ಸಿಸಿ ರಸ್ತೆ ಮಾಡಿಲ್ಲವೆಂದು ವಿಚಾರ ಮಾಡುತ್ತಿದ್ದಾಗ ಆರೋಪಿತರೆಲ್ಲರೂ ಏಕಾಏಕಿ ಬಂದು ಈ ಸೂಳೆ ಮಕ್ಕಳ ಸೊಕ್ಕು ಜಾಸ್ತಿಯಾಗಿ ಊರಲ್ಲಿ ಏನೆ ನಡೆದರು ಇವರನ್ನ ಕೇಳಬೇಕೆನ ಎಂದು ಅವಾಚ್ಯ ಶಬ್ದಗಳಿಂದ ಬೈದಾಡಿ ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡಿ-ಬಡಿ ಮಾಡಿ ದುಖಾಃಪಾತಗೊಳಿಸಿರುತ್ತಾರೆಂದು ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 38/2016 ಕಲಂ:  279, 337 ಐ.ಪಿ.ಸಿ

ದಿನಾಂಕ. 16-11-2016 ರಂದು ಬೆಳಿಗ್ಗೆ 10-15 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೀಕರಣಮಾಡಿಸಿದ ಫಿರ್ಯಾದಿಯನ್ನು ಹಾರಪಡಿಸಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ. 15-11-2016 ರಂದು ರಾತ್ರಿ 7-30 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಮಾವ ಚಂದ್ರಕಾಂತ ಇಬ್ಬರೂ ತಾನು ಕೆಲಸಮಾಡುವ ಏಲೆಕ್ಟ್ರೀಶಿಯನ್ ವರ್ಕಶಾಪ ಮುಂದೆ ಕುಳಿತುಕೊಂಡಿರುವಾಗ ಯಶೋದಾ ಆಸ್ಪತ್ರೆಯ ಕಡೆಯಿಂದ ವಿರಯ್ಯ ಹಿರೇಮಠ ತನ್ನ ಮೋಟಾರ್ ಸೈಕಲ್ ನಂಬರ. KA-35/X-2455 ನೆದ್ದನ್ನು  ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಮುಖ್ಯ ರಸ್ತೆಯ ಮೇಲೆ ಬಂದಿದ್ದು, ಅದೇ ರೀತಿಯಾಗಿ ಬಸವೇಶ್ವರ ಸರ್ಕಲ್ ಕಡೆಯಿಂದ ಬಸವರಾಜ ಲದ್ದಲ್ ಇತನು ನಂಬರ ಇರದ ಹೊಂಡಾ ಡ್ರೀಮ್ ಮೋಟಾರ್ ಸೈಕಲ್ ಹಿಂದೆ ಹನುಮಂತಪ್ಪ ತಂದೆ ರಾಜಪ್ಪ ಲದ್ದಲ್ ಇವರನ್ನು ಕೂಡಿಸಿಕೊಂಡು ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದು, ಎರಡೂ ಮೋಟಾರ್ ಸೈಕಲ್ ಸವಾರರು ಟಕ್ಕರಮಾಡಿ ಅಪಘಾತಮಾಡಿಕೊಂಡಿರುತ್ತಾರೆ. ಇದರಿಂದ ಎರಡೂ ಮೋಟಾರ್ ಸೈಕಲ್ ಸವಾರರಿಗೆ ಯಾವುದೇ ಗಾಯಗಳು ಆಗಿರುವುದಿಲ್ಲ. ಹಿಂದೆ ಕುಳಿತ ಹನುಮಂತಪ್ಪ ತಂದೆ ರಾಜಪ್ಪ ಲದ್ದಲ್ ಇತನಿಗೆ ಬಲಕಣ್ಣಿನ ಹುಬ್ಬಿಗೆ ಒಳಪೆಟ್ಟು ಮತ್ತು ಮುಖಕ್ಕೆ ತೆರಚಿದಗಾಯಗಳು ಆಗಿರುತ್ತವೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. 

0 comments:

 
Will Smith Visitors
Since 01/02/2008