ಫಿರ್ಯಾದಿದಾರರಾದ ಚಿನ್ನಪ್ಪ
ತಂದೆ ಕನಕಪ್ಪ ವಟಪರವಿ, ವಯಸ್ಸು 21 ವರ್ಷ, ದಿನಾಂಕ:- 18-11-2016 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಗಂಗಾವತಿ-ಕಾರಟಗಿ ಮುಖ್ಯ ರಸ್ತೆಯ
ಪಕ್ಕದ ಅಂಗನವಾಡಿ ಶಾಲೆಯ ಸಮೀಪದಲ್ಲಿ ತಾತ ಛತ್ರಪ್ಪ ತಂದೆ ಛತ್ರಪ್ಪ, ವಯಸ್ಸು 60 ವರ್ಷ, ಜಾತಿ:
ವಾಲ್ಮೀಕಿ ಸಾ: ವಿದ್ಯಾನಗರ ಈತನು ನಡೆದುಕೊಂಡು ರಸ್ತೆಯ ಎಡಗಡೆ ಬರುತ್ತಿದ್ದನು. ಆಗ ಆತನ ಹಿಂಭಾಗದಿಂದ
ಅಂದರೆ ಕಾರಟಗಿ ಕಡೆಯಿಂದ ಹೋಂಡಾ ಶೈನ್ ಕಂಪನಿ ಮೋಟಾರ ಸೈಕಲ್ ನಂಬರ್: ಕೆ.ಎ-37/ ಡಬ್ಲ್ಯೂ-1320
ರ ಚಾಲಕ ಮುತ್ತುರಾಜ @ ಮುತ್ತಣ್ಣ ತಂದೆ ಯಲ್ಲಪ್ಪ ಕೋರಿ, ವಯಸ್ಸು 30 ವರ್ಷ, ಸಾ: ಸಿದ್ದಾಪೂರು ಈತನು
ತನ್ನ ಮೋಟಾರ ಸೈಕಲ್ ನಲ್ಲಿ ಆನಂದ ತಂದೆ ಜಗದೀಶ ಕೋರಿ-13 ವರ್ಷ, ಸಾ: ಸಿದ್ದಾಪೂರು ಮತ್ತು ವಿನೋದಕುಮಾರ
ತಂದೆ ದುರುಗೇಶ ಕೋರಿ-12 ವರ್ಷ ಸಾ: ಸಿದ್ದಾಪೂರು ಇವರುಗಳನ್ನು ಕೂಡ್ರಿಸಿಕೊಂಡು ಅತೀ ಜೋರಾಗಿ ಮತ್ತು
ತೀವ್ರ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿದ್ದರಿಂದ ವೇಗವನ್ನು ನಿಯಂತ್ರಿಸಲು ಆಗದೇ ನನ್ನ ತಾತ
ಛತ್ರಪ್ಪನಿಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿದನು. ಇದರಿಂದ ಛತ್ರಪ್ಪ ಹಾಗೂ ಮೋಟಾರ ಸೈಕಲ್ ಮೇಲೆ ಇದ್ದ
ಮೂವರೂ ಸಹ ಕೆಳಗೆ ಬಿದ್ದು ಗಾಯಗೊಂಡಿದ್ದು, ಛತ್ರಪ್ಪನಿಗೆ ಎರಡೂ ಕಾಲುಗಳಿಗೆ
ತೀವ್ರ ಗಾಯಗಳಾಗಿ ಎಲುಬು ಮುರಿದಿದ್ದು, ಮೂಗಿಗೆ, ಹಣೆಗೆ ಮತ್ತು ಗದ್ದಕ್ಕೆ ಗಾಯಗಳಾಗಿದ್ದವು. ಆತನು
ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಉಳಿದ ಮೂವರಿಗೂ ಸಹ ಸಾದಾ ಗಾಯಗಳಾಗಿದ್ದವು. ನಂತರ ಗಾಯಗೊಂಡವರನ್ನು
ಯಾವುದೋ ಒಂದು ಆಟೋದಲ್ಲಿ ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ
ದಾಖಲು ಮಾಡಿದ್ದು, ಆದರೆ ವೈದ್ಯರು ಪರೀಕ್ಷಿಸಿ ನನ್ನ ತಾತ ಛತ್ರಪ್ಪನು ಆಗಲೇ ಮೃತಪಟ್ಟಿರುವುದಾಗಿ
ತಿಳಿಸಿದರು. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ: 194/2016 ಕಲಂ: 279, 337, 338, 304(ಎ) ಐ.ಪಿ.ಸಿ.
ದಿನಾಂಕ: 18-11-2016 ರಂದು ಮುಂಜಾನೆ 5-30 ಗಂಟೆ ಸುಮಾರಿಗೆ ಕೂಕನಪಳ್ಳಿ ಹತ್ತಿರ ಪೌಜಿ ಡಾಬಾದ ಮುಂದೆ ಎನ್.ಎಚ್-50 ರಸ್ತೆಯ ಮೇಲೆ ಕುಷ್ಟಗಿ-ಹೊಸಪೇಟೆ ರಸ್ತೆಯ ಮೇಲೆ ಟಂ ಟಂ. ವಾಹನ ನಂ. ಕೆಎ-37/ಎ-7262
ನೇದ್ದರ ಚಾಲಕನು ತನ್ನ ವಾಹನವನ್ನು ಕುಷ್ಟಗಿ ಕಡೆಯಿಂದ ಬೂದಗುಂಪಾ ಕ್ರಾಸ್ ಕಡೆಗೆ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ ಮೇಲೆ ವಾಹನ ಹತ್ತಿಸಿದ್ದರಿಂದ ವಾಹನ ಪಲ್ಟಿಯಾಗಿ ಬಿದಿದ್ದರಿಂದ ವಾಹನದಲ್ಲಿ ಕುಳಿತಿದ್ದ ರಾಜಮಾ ಗಂಡ ಮೌಲಾಸಾಬ ಮುಲ್ಲಾ ವಯ: 50 ಸಾ: ಕುಷ್ಟಗಿ ಈಕೆಯು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತಳ ಗಂಡ ಮೌಲಾಸಾಬ ಮುಲ್ಲಾ ಮತ್ತು ಹನಮಂತಪ್ಪ ತುಮ್ಮರಗುದ್ದಿ, ಶಂಕ್ರಪ್ಪ ಗಾದಾರಿ ಮತ್ತು ಚನ್ನಪ್ಪ ಗಾದಾರಿ ಇವರಿಗೆ ಗಾಯ ಪೆಟ್ಟುಗಳು ಆಗಿರುತ್ತವೆ ಎಂದು ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
0 comments:
Post a Comment