ದಿನಾಂಕ: 03-11-2016 ರಂದು ಸಂಜೆ 3: 30 ಗಂಟೆಗೆ ಪಿ.ಎಸ್.ಐ. ಹನಮಸಾಗರ ಪೊಲೀಸ್ ಠಾಣೆರವರು
ಗಣಕೀಕೃತ ವರದಿ, ದಾಳಿ ಪಂಚನಾಮೆ, ಮುದ್ದೇಮಾಲು ಸಿಕ್ಕಿಬಿದ್ದ 10 ಜನ ಆರೋಪಿಯನ್ನು ಹಾಜರಪಡಿಸಿದ್ದು,
ವರದಿಯಲ್ಲಿ ದಿನಾಂಕ: 03-11-2016 ರಂದು ಮದ್ಯಾಹ್ನ 1-30 ಗಂಟೆಗೆ ಆರೋಪಿತರು ಬಚನಾಳ ಗ್ರಾಮದ ಸರಕಾರಿ
ಹಳ್ಳದಲ್ಲಿ ಅಕ್ರಮವಾಗಿ ಕಳ್ಳತನದಿಂದ ಒಂದು ಜೆ.ಸಿ.ಬಿ ಯಿಂದ ಮರಳನ್ನು ಲೋಡ ಮಾಡಿಕೊಂಡು 9 ಟ್ರ್ಯಾಕ್ಟರ್
ಮೂಲಕ ಸಾಗಾಣಿಕೆ ಮಾಡುತ್ತಿರುವ ಕಾಲಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿ ದಾಳಿ ಮಾಡಿ ಹಿಡಿದು
ಒಂದು ಜೆ.ಸಿ.ಬಿ, 9 ಟ್ರ್ಯಾಕ್ಟರ್, ಹಾಗೂ 10 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿಯವರ
ವಿರುದ್ದ ಕಾನೂನು ಕ್ರಮ ಜರುಗಿಸಲು ವರದಿಯನ್ನು ನೀಡಿದ್ದು ಗುನ್ನೆ ದಾಖಲಿಸಿಕೊಂಡು ತಪಾಸಣೆಯನ್ನು
ಕೈ ಕೊಂಡಿದ್ದು ಇರುತ್ತದೆ.
2] ಕುಷ್ಟಗಿ ಪೊಲೀಸ್
ಠಾಣೆ ಗುನ್ನೆ ನಂ: 277/2016 ಕಲಂ: 279, 337, 338 ಐ.ಪಿ.ಸಿ:.
ದಿನಾಂಕ:
03-11-2016 ರಂದು ರಾತ್ರಿ 07-30 ಗಂಟೆಗೆ ಲಕ್ಷ್ಮಣ ತಂದೆ ಕಾಂತಪ್ಪ ವಂಕಲಕುಂಟಾ ಸಾ:ಚಿಕ್ಕಬೊಮ್ಮನಾಳ
ತಾ:ಜಿ:ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಪಿರ್ಯಾದಿಯನ್ನು ಹಾಜರಪಡಿಸಿದ್ದು ಮುಂಜಾನೆ
10-30 ಗಂಟೆಯ ಸುಮಾರಿಗೆ ಕುಷ್ಟಗಿ-ಹೊಸಪೇಟ ಎನ್,ಹೆಚ್-50 ರಸ್ತೆಯ ಮೇಲೆ ಕುರುಬನಾಳ ಕ್ರಾಸ್ ಹತ್ತಿರ
ಎಕಮುಖ ರಸ್ತೆಯ ಮೇಲೆ ಎಡಗಡೆ ಹೋಗುತ್ತಿದ್ದಾಗ ಕುಷ್ಟಗಿ ಕಡೆಗೆ ಹೋಗುವ ಇನ್ನೊಂದು ಎಕಮುಖ ರಸ್ತೆಯ
ಮೇಲೆ ಹೋಗದೇ ರಾಂಗ್ ರೂಟ್ ನಲ್ಲಿ ಹೊಸಪೇಟೆ ಕಡೆಗೆ ಹೋಗುವ ರಸ್ತೆಯಿಂದ ಎದುರಿಗೆ ಒಂದು ಟ್ಯಾಂಕರ್
ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ನನ್ನ
ಮೋಟಾರ ಸೈಕಲ್ ಗೆ ಟಕ್ಕರಕೊಟ್ಟು ಅಪಘಾತಪಡಿಸಿದ್ದು ಸದರಿ ಅಪಘಾತದಿಂದ ನಾನು ನನ್ನ ಹೆಂಡತಿ, ಮಗು ಮೋಟಾರ
ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿದ್ದು. ಸದರಿ ಅಪಘಾತದಿಂದ ನನಗೆ ಬಲಗೈಗೆ ತೆರಚಿದಗಾಯ, ಎಡಬುಜಕ್ಕೆ
ಒಳಪೆಟ್ಟಾಗಿದ್ದು ಇರುತ್ತದೆ. ನನ್ನ ಹೆಂಡತಿ ಸಂಗಮ್ಮಳನ್ನು ನೋಡಲು ಬಲ ಮೊಣಕೈಗೆ ರಕ್ತಗಾಯ ಮತ್ತು
ಬಲ ಮುಂಗೈ ಹತ್ತಿರ ಮುರಿದಂತಾಗಿ ರಕ್ತಗಾಯವಾಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಯಿತು.
0 comments:
Post a Comment