ಶ್ರೀ ಕಂತೆಪ್ಪ ತಾಯಿ ಹುಸೇನಮ್ಮ
ಹೊನ್ನೂರಪ್ಪ ತಾಯಿ ಹುಸೇನಮ್ಮ, ವಯಸ್ಸು 38 ವರ್ಷ, ಚಲವಾದಿ ಸಾ: ಡಾಣಾಪೂರು ಈತನು ತನ್ನ ಮೋಟಾರ
ಸೈಕಲ್ ನಂ. ಕೆ.ಎ.37/ಈ.ಎ.0973 ನೇದ್ದರಲ್ಲಿ ನನ್ನ ಚಿಕ್ಕಮ್ಮಳಾದ ಈರಮ್ಮ ಗಂಡ ಈರಪ್ಪ, ವಯಸ್ಸು 50
ವರ್ಷ, ಜಾತಿ:ಚಲವಾದಿ ಸಾ: ಡಾಣಾಪೂರು ಇವಳನ್ನು ಕೂಡ್ರಿಸಿಕೊಂಡು ಮುಷ್ಟೂರು ಕ್ಯಾಂಪ್ ಗೆ ಹೋಗುತ್ತಿರುವಾಗ
ಹೆಬ್ಬಾಳ ದಾಟಿ ಮುಷ್ಟೂರ ಕ್ಯಾಂಪಗೆ ಹೋಗುವಾಗ ಹೆಬ್ಬಾಳ ಮುಷ್ಟೂರ ರಸ್ತೆಯ ಮೇಲೆ ಹೊನ್ನೂರಪ್ಪನು ಮೋಟಾರ
ಸೈಕಲನ್ನು ಅತಿವೇಗವಾಗಿ ತೀವ್ರ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ರಸ್ತೆಯ ಪಕ್ಕದಲ್ಲಿ ತಗ್ಗಿನಲ್ಲಿ
ಇಳಿಸಿದ್ದರಿಂದ ಹಿಂದೆ ಕುಳಿತ ಈರಮ್ಮಳು ಪುಟಿದು ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡು ಗಂಗಾವತಿ
ಉಪವಿಭಾಗ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,
ಚಿಕಿತ್ಸೆ ಪಡೆಯುವಾಗ ಗುಣವಾಗದೇ ದಿನಾಂಕ. 04-11-2016 ರಂದು ಬೆಳಗಿನ ಜಾವ 01-45 ಗಂಟೆ ಸುಮಾರಿಗೆ
ಮೃತ ಪಟ್ಟಿರುತ್ತಾಳೆ. ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್
ಠಾಣೆ ಗುನ್ನೆ ನಂ: 74/2016 ಕಲಂ: 87 Karnataka Police Act.
ವಟಪರ್ವಿ ಗ್ರಾಮದಲ್ಲಿ
ಚನ್ನದಾಸರ ಸಮುದಾಯ ಭವನದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಆರೋಪಿತರೆಲ್ಲರೂ ಇಸ್ಪಟ್ ಜೂಜಾಟ ಆಡುತ್ತಿರುವ
ಕಾಲಕ್ಕೆ ಇದರ ಬಾತ್ಮೀ ಮೇರೆಗೆ ಎಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ಮುತ್ತಿಗೆ
ಹಾಕಿ ದಾಳಿ ಮಾಡಿ ಸಿಕ್ಕಿಬಿದ್ದ ಮೂರು ಜನ ಆರೋಪಿತರು ತಮ್ಮ ಮುಂದೆ ಪಣಕ್ಕಾಗಿ ಇಟ್ಟುಕೊಂಡಿದ್ದ ಹಣ
ಹಾಗೂ ಪಣಕ್ಕೆ ಅಂತಾ ಹಚ್ಚಿದ ಕಣದಲ್ಲಿದ್ದ ಹಣ ಸೇರಿ ಇಸ್ಪೇಟ್ ಜೂಜಾಟದ ಒಟ್ಟು ನಗದು ಹಣ 830/-ರೂ
ಹಾಗೂ ಇಸ್ಪೇಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 195/2016
ಕಲಂ: 41(ಡಿ), 102 ಸಿ.ಆರ್.ಪಿ.ಸಿ
ಮತ್ತು 379 ಐ.ಪಿ.ಸಿ:.
ದಿನಾಂಕ: 04-112016 ರಂದು ಮದ್ಯಾಹ್ನ 2-00 ಗಂಟೆಗೆ ಮುನಿರಾಬಾದ
ಪೊಲೀಸ್ ಠಾಣೆ ಗುನ್ನೆ ನಂ 142/2016 ಕಲಂ 41(ಡಿ) 102
ಸಿ.ಆರ್.ಪಿ.ಸಿ ಸಹಿತ 379 ಐಪಿಸಿ ಪ್ರಕರಣದ ಕಡತವನ್ನು ಹದ್ದಿ ಪ್ರಯುಕ್ತ ಸ್ವಿಕೃತ ಮಾಡಿಕೊಂಡಿದ್ದು, ಸದರಿ ಪ್ರಕರಣದ ಸಾರಾಶವೇನೆಂದರೆ, ದಿನಾಂಕ: 28-07-2016 ರಂದು 10-00 ಎ.ಎಂ. ಸುಮಾರಿಗೆ ಸಂಘರ್ಷಕ್ಕೆ ಒಳಗಾದ ಬಾಲಕನು ಹುಲಗಿಯ ರೈಲ್ವೆ ಗೇಟ
ಹತ್ತಿರ ಮೋಟರ ಸೈಕಲ್ ನಂ. ಕೆಎ-26/ಜೆ-1867 ನೇದ್ದನ್ನು ತಳ್ಳಿಕೊಂಡು ಹೋಗುವ ಕಾಲಕ್ಕೆ ಅನುಮಾನ ಬಂದು ಸದರಿಯವನನ್ನು ವಿಚಾರಣೆ ಮಾಡುವ
ಕಾಲಕ್ಕೆ ಮೋಟರ ಸೈಕಲ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡದೇ ಇದ್ದುದರಿಂದ ನಾನಾ ವಿಧವಾದ ಪ್ರಶ್ನಾವಳಿಗಳ
ಮೂಲಕ ಮತ್ತೆ ವಿಚಾರಣೆಗೊಳಪಡಿಸಿದಾಗ ಸದರಿಯವನು ಸದರಿ ಮೋಟರ ಸೈಕಲ್ ನ್ನು ಕೊಪ್ಪಳ ನಗರದಲ್ಲಿ
ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೇ ಇದಕ್ಕಿಂತ ಮುಂಚೆ ಮೋಟರ ಸೈಕಲ್ ನಂ. ಟಿಎನ್-05/ಬಿ-0990
ನೇದ್ದನ್ನು ಸಹ ಕೊಪ್ಪಳ ನಗರದಲ್ಲಿ ಕಳ್ಳತನ ಮಾಡಿದ ಬಗ್ಗೆ
ಒಪ್ಪಿಕೊಂಡಿದ್ದರಿಂದ ಸದರಿಯವನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೇನು.
0 comments:
Post a Comment