ದಿನಾಂಕ 19-11-2016 ರಂದು ಫಿರ್ಯಾಧಿದಾರರಾದ ನರಸಿಂಗರಾವ್ ತಂದೆ ಪ್ರಹ್ಲಾದರಾವ್ ಕುಲಕರ್ಣಿ ಸಾ: ಕೆ.ಜಿ. ಕುಲಕರ್ನೀ
ಅಸ್ಪತ್ರೆ ಹಿಂದೆ ಕೊಪ್ಪಳ ಇವರು ಫಿರ್ಯಾದಿಯ ನೀಡಿದ್ದು, ದಿನಾಂಕ 29-10-216 ರಂದು ರಾತ್ರಿ 10-00 ಗಂಟೆಯ
ಸುಮಾರಿಗೆ ತಮ್ಮ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ ಸೈಕಲ ನಂ KA 37/Q
8269 ನೇದ್ದನ್ನು ತನ್ನ ಮನೆಯ ಮುಂದೆ ನಿಲ್ಲಿಸಿ ಮನೆಯೊಳಗೆ ಹೋಗಿದ್ದು, ನಂತರ ರಾತ್ರಿ 10-30 ಗಂಟೆಯ ಸುಮಾರಿಗೆ ಹೊರಗಡೆ ಬಂಧು ನೋಡಿದಾಗ ತನ್ನ
ಮೋಟಾರ ಸೈಕಲ್ ಇತ್ತು, ನಂತರ ದಿನಾಂಕ: 30-10-2016 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ್
ಹತ್ತಿರ ಬಂದು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ. ಕೂಡಲೇ ತಾನು ಅಲ್ಲಿ
ಸುತ್ತಾಮುತ್ತ ಹಾಗೂ ರೈಲ್ವೆ ಸ್ಟೇಷನ್, ಬಸ್ ನಿಲ್ದಾಣ ಮುಂತಾದ ಕಡೆಗಳಲ್ಲಿ ಹುಡುಕಾಡಲು ಎಲ್ಲಿಯೂ ಕಂಡು ಬರಲಿಲ್ಲಾ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಮುನಿರಾಬಾದ ಪೊಲೀಸ್
ಠಾಣೆ ಗುನ್ನೆ ನಂ: 195/2016 ಕಲಂ: 279, 337 ಐ.ಪಿ.ಸಿ.
ದಿನಾಂಕ: 19-11-2016 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಮುನಿರಾಬಾದ ಅಗ್ರಿಕಲ್ಚರ ಇಲಾಖೆಯ ಜಮೀನ ಹತ್ತಿರ ಕೊಪ್ಪಳ ದಿಂದ ಹೊಸಪೇಟಿ ಕಡೆಗೆ ಹೋಗುವ ಎನ್.ಎಚ್-63 ಏಕ ಮುಖ
ರಸ್ತೆಯ ಮೇಲೆ ಗಾಯಾಳು ಫುರ್ಖಾನ ಅಹಮ್ಮದ ಇವರು ಮೋಟಾರ್ ಸೈಕಲ್ ನಂ. ಕೆಎ-35/ಕ್ಯೂ-2526 ನೇದ್ದರಲ್ಲಿ ತಮ್ಮ ಹಳೆ ಹೊಟೆಲ್ ದಿಂದ ಹೊಸ ಹೊಟೆಲ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದೆ ವೇಳೆಗೆ ಆರೋಪಿತನು ಟ್ರ್ಯಾಕ್ರ್ ಇಂಜನ್ ಚೆಸ್ಸಿ ನಂ: SNSW 5886 ನೇದ್ದನ್ನು ರಾಂಗ್
ಸೈಡಿನಿಂದ ಎದುರು ಗಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜಿವಕ್ಕೆ ಅಪಾಯವಾಗುವ ಹಾಗೆ
ಚಲಾಯಿಸಿಕೊಂಡು ಬಂದು ಎದರುಗಡೆಯಿಂದ ಬೈಕಿಗೆ
ಡಿಕ್ಕಿ ಹೊಡೆಸಿ ಅಪಘಾತಪಡಿಸಿದ್ದರಿಂದ ಬೈಕ ಸವಾರನು ಬೈಕ ಸಮೇತ ಕೇಳಗೆ ಬಿದ್ದಿದ್ದು ಇದರಿಂದ ಅವನ
ಬಲಕಾಲಿನ ಸೊಂಟಕ್ಕೆ &
ಚಪ್ಪಿಗೆ ಒಳಪೆಟ್ಟಾಗಿದ್ದು, ಬೆನ್ನಿಗೆ ಹಾಗು ಮೈಗೆ ಅಲ್ಲಲ್ಲಿ ತೆರೆಚಿದ ಗಾಯಗಳು ಆಗಿರುತ್ತವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
0 comments:
Post a Comment