Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 8, 2016

1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 266/2016 ಕಲಂ: 78 (3) Karnataka Police Act.
ದಿನಾಂಕಃ- 07-10-2016  ರಾತ್ರಿ 9-00 ಗಂಟೆಯ ಸುಮಾರಿಗೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಒಂದು ಮೂಲ ಪಂಚನಾಮೆಯೊಂದಿಗೆ ಮಾನ್ಯ ನ್ಯಾಯಾಲಯದ ಅನುಮತಿ ಪತ್ರದೊಂದಿಗೆ ವರದಿಯನ್ನು ಹಾಜರುಪಡಿಸಿದ್ದು ಸಾರಾಂಶವೆನಂದರೆ, ಇಂದು ದಿನಾಂಕ 07-10-2016 ರಂದು ಸಾಯಂಕಾಲ 7-45 ಗಂಟೆಯ ಸುಮಾರಿಗೆ ಜಮಾಪೂರ ಗ್ರಾಮದಲ್ಲಿ ಮಸ್ತಗುಡಿ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮಟಕಾ ಜೂಜಾಟ ತೊಡಗಿದ್ದ ಆರೋಪಿತರ ಮೇಲೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿವರು ಪಂಚರ ಸಮಕ್ಷದಲ್ಲಿ ದಾಳಿ ಮಾಡಿದಾಗ ಆರೋಪಿ 1 ಇತನು ಸಿಕ್ಕಿಬಿದ್ದಿದ್ದು ಆರೋಪಿ ನಂ-2 ಓಡಿ ಹೊಗಿದ್ದು  ಸಿಕ್ಕಿಬಿದ್ದ  ಬಸಯ್ಯಸ್ವಾಮಿ ತಂದಿ ಕಲ್ಲಯ್ಯಸ್ವಾಮಿ ಹಿರೇಮಠಜಾ- ಜಂಗಮ ಜೆ.ಸಿ.ಬಿ. ಕೆಸ ಸಾ- ಜಮಾಪೂರ ತಾ-ಗಂಗಾವತಿ  ಇವನು ಸಿಕ್ಕಿಬಿದ್ದ ಆರೋಪಿತನಿಂದ ರೂ. 460=00 ಗಳನ್ನು ಜಪ್ತ ಮಾಡಿಕೊಂಡು ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗಕೊಂಡೆನು.
2] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 252/2016 ಕಲಂ: 120(ಬಿ), 295(ಎ), 505(1)(ಬಿ)(ಸಿ) ಸಹಿತ 34 ಐ.ಪಿ.ಸಿ:.
ಜಹೀರ ಅಬ್ಬಾಸ ತಂದೆ ಅಹ್ಮದಪಾಷಾ ವಯಸ್ಸು 32 ವರ್ಷ ಫಿರ್ಯಾದಿ ನೀಡಿದು, ದಿನಾಂಕ 07-11-2016 ರಂದು ಮುಂಜಾನೆ 11-50 ಗಂಟೆಯ ಸುಮಾರಿಗೆ ಆರೋಪಿತನಾದ ವಿನಯಕುಮಾರ ಇತನು ಕಿಲ್ಲಾ ಏರಿಯಾದ ಕಾಂತಾ @ ಶ್ರೀಕಾಂತ ಮತ್ತು ಚನ್ನೇಶ ಹೂಗರ ಎಂಬುವವರ ಪ್ರಚೋಧನೆಯಿಂದ ಮತ್ತು ಅಪರಾಧಿಕ ಒಳಸಂಚಿನಿಂದ ಮುಸ್ಲಿಂ ಜನರ ಪವಿತ್ರ ಸ್ಥಳವಾದ ಮಕ್ಕದಲ್ಲಿರುವ ಕಾಬಾದ ಚಿತ್ರದ ಮೇಲೆ ಪರಮೇಶ್ವರ ಹಿಂದು ದೇವರ ಚಿತ್ರವನ್ನು ಫೇಸ್ಬುಕ್ದಲ್ಲಿ ಅಪಲೋಡ ಮಾಡಿ ಮುಸ್ಲಿಂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿ ಕೋಮು ಗಲಭೆಗಳುಂಟಾಗುವಂತಹ ಕೃತ್ಯಗಳನ್ನು ಎಸಗಿ, ನಗರದಲ್ಲಿ ಅಶಾಂತಿ ಹಾಗೂ ಸಮಾಜದ ಸಾಮರಸ್ಯ ಹಾಳು ಮಾಡಲು ಪ್ರಯತ್ನಿಸಿದ್ದರಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008