ದಿನಾಂಕ 14-11-2016 ರಂದು ಬೆಳಗ್ಗೆ 11-45 ಗಂಟೆಯ
ಸುಮಾರಿಗೆ ಕಾರಟಗಿಯ ದಲಾಲಿ ಬಜಾರದಲ್ಲಿರುವ ಸಿದ್ದಪ್ಪ ತಳವಾರ ಇವರ ಅಂಗಡಿಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿತರು ಇಸ್ಪೀಟ್ ಜೂಜಾಟದಲ್ಲಿ
ತೊಡಗಿದ್ದಾಗ್ಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ
ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 7 ಜನರು ಸಿಕ್ಕಿಬಿದ್ದಿದ್ದು ಆರೋಪಿತರ ಕಡೆಯಿಂದ ಹಾಗೂ ಖಣದಲ್ಲಿ ಸೇರಿ
ಒಟ್ಟು ರೂ.10,235=00 ಗಳನ್ನು ಮತ್ತು
ಇಸ್ಪೀಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ
ಇದ್ದ ವರದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 225/2016
ಕಲಂ: 279, 338, 304(ಎ) ಐ.ಪಿ.ಸಿ:
ದಿ:13-11-16 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ತಮ್ಮ ಮಂಜುನಾಥ ಕೂಡಿಕೊಂಡು
ತಮ್ಮ ಹೊಲದಿಂದಾ ಎತ್ತಿನ ಬಂಡಿಯಲ್ಲಿ ಶೇಂಗಾ ಹೊಟ್ಟು ತುಂಬಿಕೊಂಡು ಮನೆಗೆ ಅಂತಾ ಕೊಪ್ಪಳ-ಗದಗ ರಾ.ಹೆ-63 ರಸ್ತೆಯಲ್ಲಿ ಹಲಿಗೇರಿ ಸಮೀಪ ರಸ್ತೆಯ ಎಡಬಾಜು ಬರುತ್ತಿದ್ದಾಗ, ಅದೇ ಸಮಯಕ್ಕೆ ಹಿಂದಿನಿಂದ ಮೋಟಾರ ಸೈಕಲ್ ನಂ: ಕೆಎ-37/ಇಎ-0808 ನೇದ್ದರ ಚಾಲಕನು ತನ್ನ ಗಾಡಿಯನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ
ಅಪಾಯವಾಗುವ ರೀತಿಯಲ್ಲಿ ಓಡಿಸಿಕೊಂಡು ಬಂದವನೇ ಎತ್ತಿನಬಂಡಿಯನ್ನು ಗಮನಿಸದೇ ಹಿಂದಿನಿಂದ ಬಂದು
ಬಂಡಿಗೆ ಟಕ್ಕರ ಕೊಟ್ಟು ಅಪಘಾತ ಮಾಡಿದಾಗ ಎತ್ತಿನ ಬಂಡಿಯ ಹಿಂದೆ ನಡೆದುಕೊಂಡು ಹೊರಟಿದ್ದ
ಫಿರ್ಯಾದಿಗೆ ಮೋಟಾರ ಸೈಕಲ್ ಎಡಕಾಲ ಪಾದದ ಹತ್ತಿರ ಬಡಿದು ಭಾರಿ ರಕ್ತಗಾಯವಾಗಿದ್ದು ಇರುತ್ತದೆ.
ಮೋಟಾರ ಸೈಕಲ್ ಸವಾರ ಪ್ರಭು ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಎರಡೂ ಕಾಲ ತೊಡೆಯ ಹತ್ತಿರ ರಕ್ತಗಾಯಗಳಾಗಿದ್ದು ಇರುತ್ತದೆ.
ಅಸ್ವಸ್ಥಗೊಂಡ ಪ್ರಭು ಇತನಿಗೆ ದಾರಿಯಲ್ಲಿ ಹೊರಟಿದ್ದ ಮೊದಲಗಟ್ಟೆಪ್ಪ ಕವಲೂರ. ಸಾ: ಭಾನಾಪೂರ
ಎಂಬುವವರು ಬಂದು ನೋಡಿ ತಮ್ಮ ಕಾರಿನಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ
ಕೊಪ್ಪಳದ ನಗರದ ಬಿ.ಎಸ್. ಪವಾರ್ ಹೋಟೆಲ್ ಹತ್ತಿರ ಮಾರ್ಗದಲ್ಲಿ ರಾತ್ರಿ 11-05 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
0 comments:
Post a Comment