Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, February 23, 2017

1]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 35/2017 ಕಲಂ: 87 Karnataka Police Act.
ದಿ : 22-02-2017 ರಂದು 4-15 ಪಿ.ಎಮ್ ಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯ ಗಿಣಿಗೇರಿ ಸೀಮಾದ ಭದ್ರಯ್ಯ ಕೋಳಿ ಫಾರ್ಮ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 11 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣವನ್ನು ಹಚ್ಚಿ ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್,ಐ ರವರು ಸಿಬ್ಬಂದಿಯವರನ್ನು ಸಂಗಡ ಕರೆದುಕೊಂಡು ಪಂಚರ ಸಮಕ್ಷಮ ದಾಳಿ ಮಾಡಿದ್ದು 03 ಜನರು ಸಿಕ್ಕಿಬಿದ್ದಿದ್ದು, ಸಿಕ್ಕಿಬಿದ್ದವರಿಂದ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, 2100=00 ರೂ, 52 ಇಸ್ಪೇಟ್ ಎಲೆ, ಒಂದು ಹಾಳೆಯ ಚೀಲ ಇವುಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡಿದ್ದು ಸಿಕ್ಕ 03 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 36/2017 ಕಲಂ: 279, 337, 338, 304(ಎ) ಐ.ಪಿ.ಸಿ:.
ದಿ:22-02-2017 ರಂದು ಬೆಳಿಗ್ಗೆ ಫಿರ್ಯಾದಿದಾರರು ದಾಸನಾಳ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ, ವಾಪಾಸ್ ಟಾಟಾ ಎಸಿ ನಂ: ಕೆಎ-37/ಎ-3898 ನೇದ್ದರಲ್ಲಿ ಸುಮಾರು 15 ಜನರು ಕುಳಿತುಕೊಂಡು ಬರುತ್ತಿದ್ದಾಗ, ಇಂದು 4-45 ಪಿ.ಎಮ್ ಸುಮಾರಿಗೆ ಗಂಗನಾಳ-ಮ್ಯಾದನೇರಿ ರಸ್ತೆಯ ಚಿಕ್ಕಸೂಳಿಕೇರಿ ಕ್ರಾಸ್ ಹತ್ತಿರ ಟಾಟಾ ಎಸಿ ವಾಹನದ ಚಾಲಕ ಹನುಮಂತಪ್ಪ ತಳವಾರ ಇತನು ಹಾಗೂ ಅದೇ ಸಮಯಕ್ಕೆ ಎದುರುಗಡೆ ಮ್ಯಾದನೇರಿ ಕಡೆಯಿಂದ ಒಂದು ಮೋಟಾರ ಸೈಕಲ್ ನಂ: ಕೆಎ-37/ವಾಯ್ -1907 ನೇದ್ದರ ಚಾಲಕ ಹೀಗೆ ಇವರುಗಳು ತಮ್ಮ ತಮ್ಮ ವಾಹನಗಳನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದಾ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದವರೇ ಒಬ್ಬರಿಗೊಬ್ಬರು ಮುಖಾಮುಖಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಈ ಅಪಘಾತದಲ್ಲಿ ಟಾಟಾ ಎಸಿ ಚಾಲಕ ಹನುಮಂತಪ್ಪ ತಳವಾರ ಹಾಗೂ ಸದರಿ ಟಾಟಾ ಎಸಿ ವಾಹನದ ಚಾಲಕನ ಪಕ್ಕದಲ್ಲಿ ಕುಳಿತಿದ್ದ ಯಮನೂರಪ್ಪ ತಳವಾರ ಇವರಿಗೆ ಹಾಗೂ ಮೋಟಾರ ಸೈಕಲ್ ಸವಾರ ಕಾಶಪ್ಪ ವಡ್ರ ಸಾ: ಕೇಸರಹಟ್ಟಿ ಹಾಗೂ ಹಿಂಬದಿ ಸವಾರ ಶ್ಯಾಮೀದಅಲಿ ಪಿಂಜಾರ ಸಾ: ಕೇಸರಹಟ್ಟಿ ಇವರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ ಸದರಿ ಪ್ರಕರಣದಲ್ಲಿಯ ಗಾಯಾಳು ಕಾಶಪ್ಪ ವಡ್ಡರ ಸಾ: ಕೇಸರಹಟ್ಟಿ. ಇತನನ್ನು ಕೊಪ್ಪಳದ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರಕ್ಕೆ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಇಂದು ರಾತ್ರಿ 10-20 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಬ್ರಾಟಡೆಡ್ [ಮೃತ] ಆಗಿದೆ ಎಂದು ತಿಳಿದುಬಂದಿರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ: 30/2017 ಕಲಂ: 379 ಐ.ಪಿ.ಸಿ:.

ದಿನಾಂಕ:-22-02-2017 ರಂದು ಬೆಳಿಗ್ಗೆ 11:15 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮುದಕಪ್ಪ ತಂದಿ ನಿಂಗಪ್ಪ ಎಡಿಬಾಳ ವಯಾ-40 ವರ್ಷ ಜಾ. ನಾಯಕ ಉ-ಒಕ್ಕಲುತನ ಸಾ.ಹುಳ್ಕಿಹಾಳ ತಾ. ಗಂಗಾವತಿ ರವರು ಠಾಣೆಗೆ ಹಾಜರಾಗಿ ಒಂದು ದೂರು ನೀಡಿದ್ದು ಸದ್ರಿ ದೂರಿನ ಸಾರಾಂಶದಲ್ಲಿ ಪಿರ್ಯಾದಿದಾರರು ತಮ್ಮ ಹಿರೋ ಹೊಂಡಾ ಸ್ಪಂಡರ್ ಪ್ಲಸ್ ಮೋಟಾರ್ ಸೈಕಲ್ ನಂ ಕೆ.ಎ-37/ಆರ್-7099 ಅಂ.ಕಿ 25000=00 ರೂ.ಬೆಲೆಬಾಳುವದನ್ನು ದಿನಾಂಕ:-29-12-2016 ರಂದು ಮದ್ಯಾಹ್ನ 4-00 ಗಂಟೆಯಿಂದ ಇದೇ ದಿನ ರಾತ್ರಿ 7-00 ಗಂಟೆಯ ಮದ್ಯದ ಅವಧಿಯಲ್ಲಿ ಶ್ರೀ ದ್ಯಾಮಮ್ಮದೇವಿ ಜಾತ್ರೆಗೆ ಹೋದಾಗ ಫಿರ್ಯಾದಿದಾರರಿಗೆ ಪರಿಚಯಸ್ಥ ಶ್ರೀ  ಪರಸಪ್ಪ ತಂದೆ ದುರಗಪ್ಪ ಕಾರಟಗಿ ಮನೆಯ ಮುಂದೆ ಬಿಟ್ಟಿದ್ದಾಗ್ಗೆ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಇಷ್ಟು ದಿವಸ ಉಳೆನೂರು, ನಂದಿಹಳ್ಳ, ಸಿದ್ದಾಪೂರ, ಕಂಪ್ಲಿ, ಗಂಗಾವತಿ, ಕಮಲಾಪೂರ, ಸಿಂಧನೂರು ಮುಂತಾದ ಕಡೆಗಳಲ್ಲಿ ಹುಡುಕಾಡಿದರೂ ಸಿಗದ ಕಾರಣಕ್ಕೆ ಇಂದು ಬಂದು ದೂರು ಕೊಟ್ಟಿರುತ್ತೇನೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.    

0 comments:

 
Will Smith Visitors
Since 01/02/2008