Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Sunday, March 26, 2017

1]  ಕಾರಟಗಿ ಪೊಲೀಸ್ ಠಾಣೆ ಗುನ್ನೆ. ನಂ: 46/2017 ಕಲಂ: 279, 304(ಎ) ಐ.ಪಿ.ಸಿ ಮತ್ತು 187 ಐ.ಎಂ.ವಿ. ಕಾಯ್ದೆ:
ದಿನಾಂಕ:-25-03-2017 ರಂದು ಬೆಳಗಿನ 06-00 ಗಂಟೆಗೆ ಡೈರಿ ಹಾಲು ಹಾಕಲು ದೇವಿಕ್ಯಾಂಪ್ ಗೆ ಹೋಗಿ ವಾಫಸ್  ಇಬ್ಬರೂ ಕೂಡಿಕೊಂಡು ನಮ್ಮ ಮೋಟಾರ್ ಸೈಕಲ್ ಮೇಲೆ ಕಾರಟಗಿ ಕಡೆಗೆ ದೇವಿಕ್ಯಾಂಪ್- ಕಾರಟಗಿ ರಸ್ತೆಯ ಮೇಲೆ ಮುಂಜಾನೆ 7-45 ಗಂಟೆ ಸುಮಾರಿಗೆ ಕಾರಟಗಿಯ ಅಯ್ಯಪ್ಪ ವರ ಹೊಲದ ಹತ್ತಿರ ಬರುತ್ತಿದ್ದಾಗ ಕಾರಟಗಿ ಕಡೆಯಿಂದ ಬಬ್ಬ ಟ್ರ್ಯಾಕ್ಟರ್ ಚಾಲಕ ತಾನು ನಡೆಸುತ್ತಿದ್ದ ಟ್ರ್ಯಾಕ್ಟರ್ ನ್ನು ಕಾರಟಗಿ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ದೇವಿಕ್ಯಾಂಪ್ ಕಡೆಗೆ ನಡೆದುಕೊಂಡು ಹೋರಟಿದ್ದ ಒಬ್ಬ ವ್ಯೆಕ್ತಿಯನ್ನು ಗಮನಿಸದೇ ಆತನಿಗೆ ಠಕ್ಕರ್ ಮಾಡಿ ಅಪಘಾತಪಡಿದ್ದರಿಂದ ನಡೆದುಕೊಂಡು ಹೋಗುತ್ತಿದ್ದ ವ್ಯೆಕ್ತಿ ರಸ್ತೆಯ ಪಕ್ಕದಲ್ಲಿದ್ದ 31 ನೇ ಕೇನಾಲ್ ನಲ್ಲಿ ಹೋಗಿ ಬಿದ್ದನು. ಟ್ರ್ಯಾಕ್ಟರ್ ಚಾಲಕನು ತನ್ನ ನಿಯಂತ್ರಣ ಕಾಯ್ದುಕೊಳ್ಳದೇ ಇದ್ದುದ್ದರಿಂದ ಟ್ರ್ಯಾಕ್ಟರ್ ಕೂಡ 31 ನೇ ಕೇನಾಲ್ ನಲ್ಲಿ ಬಿದ್ದಿದ್ದ ವ್ಯೆಕ್ತಿಯ ಮೇಲೆ ಹೋಗಿ ಬಿದ್ದಿತು. ಕೂಡಲೇ ನಾವು ಗಾಭರಿಯಾಗಿ ಸಮೀಪ ಹೋಗಿ ನೋಡುತ್ತಿದ್ದಂತೆ  ಸದರಿ ಟ್ರ್ಯಾಕ್ಟರ್ ಚಾಲಕ ನಾವು ಹೋಗುತ್ತಿದ್ದಂತೆ ಅಲ್ಲಿಂದ ಓಡಿ ಹೋದನು. ನಾವು ಕೇನಾಲ್ ದಲ್ಲಿ ಇಳಿದು ನೋಡಲು ಟ್ರ್ಯಾಕ್ಟರ್ ಇಂಜೀನ್ ಕೆಳಗಡೆ ಸಿಕ್ಕಿ ಹಾಕಿಕೊಂಡ ವ್ಯೆಕ್ತಿಯನ್ನು ನೋಡಲು ಆತನು ನಾಡಿಗೆಪ್ಪ ತಂದೆ ರಂಗಪ್ಪ ಹುಲ್ಲೂರು ಸಾ. ಕಾರಟಗಿ ಇದ್ದು, ಈತನು ಸ್ಥಳದಲ್ಲಿ ಮೃತಪಟ್ಟಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
2] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ: 58/2017 ಕಲಂ. 307 ನಂತರ 302 ಐ.ಪಿ.ಸಿ:

ದಿನಾಂಕ 25-03-2017 ರಂದು ಬೆಳಿಗ್ಗೆ 11-00 ಗಂಟೆಗೆ ಎಂ.ಎಲ್.ಸಿ. ಮಾಹಿತಿ ಮೇರೆಗೆ ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿದಾರಳಾದ ಶ್ರೀ ಮತಿ ಕಲಮಾಬಿ ಗಂಡ ಬುಡನಸಾಬ ತಾವರಗೇರಾ ಇವರ ಮರಣಪೂರ್ವ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ ಫಿರ್ಯಾದಿ ಮಗಳು  ಶೈನಜಾ ಬೇಗಂ  ಈಕೆಯು ಮುದೇನೂರು ಗ್ರಾಮದಲ್ಲಿ ಎ.ಎನ್.ಎಂ ಅಂತಾ ಕೆಲಸ ಮಾಡುತ್ತಿದ್ದು, ಈ ದಿವಸ ಕುಷ್ಟಗಿಯಲ್ಲಿ ಮಿಟಿಂಗ್ ಇದ್ದರಿಂದ ಬೆಳಿಗ್ಗೆ 9-00 ಗಂಟೆ ಸುಮಾರು ಫಿರ್ಯಾದಿ ಮತ್ತು ಮಗಳು ಶೈನಜಾ ಬೇಗಂ ಕುಷ್ಟಗಿಗೆ ಹೋಗಲು ಊರ ಮುಂದೆ ನಿಂತಾಗ  ಪರಿಚಯಸ್ಥ ನಮೂದಿತ ಆರೋಪಿ ಇತನು ತನ್ನ ಮೋ.ಸೈ ಮೇಲೆ ಬಂದು ನಾನು ಕುಷ್ಟಗಿಗೆ ಹೋಗುತ್ತೇನೆ ಅಂತಾ ಹೇಳಿ ಇಬ್ಬರನ್ನು ತನ್ನ ಹೊಂಡಾ ಸೈನ್ ಮೋ.ಸೈ ನಂ: ಕೆ.-37/0916 ನೇದ್ದರಲ್ಲಿ ಕೂಡಿಸಿಕೊಂಡು ಹೊರಟು ಕುಷ್ಟಗಿ ಇನ್ನೂ ಸುಮಾರು 3 ಕಿ.ಮಿ. ದೂರ ಇರುವಾಗ ಆರೋಪಿ ಉತ್ತರದ ಕಡೆಗೆ ಬಂಡಿ ರಸ್ತೆಯಲ್ಲಿ ತಿರುಗಿಸಿ ಒಂದು ಹೊಲದಲ್ಲಿ ಹೋಗಿ ನಿಲ್ಲಿಸಿ ಫಿರ್ಯಾದಿ ಮಗಳಿಗೆ ಆರೋಪಿ ನನ್ನನ್ನು ಮದುವೆಯಾಗು ನಿನ್ನನ್ನು ಪ್ರೀತಿಸುತ್ತೇನೆ ಅಂತಾ ಕೇಳಿದ್ದು ಆಗ ಫಿರ್ಯಾದಿ ಮಗಳು ನಿನಗೆ ಮದುವೆಯಾಗಿದೆ ಹೆಂಡತಿ ಮಕ್ಕಳು ಇದ್ದು ಮದುವೆಯಾಗುವದಿಲ್ಲ ಅಂತಾ ಹೇಳಿದ್ದು ಆಗ ಆರೋಪಿ ಒಮ್ಮೆಲೆ ಸಿಟ್ಟಿಗೆ ಬಂದು ಲೇ ಬೋಸುಡಿ ನೀನು ನನ್ನ ಮದುವೆಯಾಗುವದಿಲ್ಲ ನೀನು ಹೆಗೆ ಬದುಕುತ್ತಿಯಾ ನನ್ನನ್ನು ಮದುವೆಯಾಗದಿದ್ದರೆ ನಿನ್ನನ್ನು ಕೊಂಡು ಬಿಡುತ್ತೇನೆ ಅಂತಾ ಅಂದವನೇ ತನ್ನ ಹತ್ತಿರ ಇದ್ದ ಸೆವಿಂಗ ಮಾಡುವ ಕತ್ತಿಯನ್ನು ತೆಗೆದು ಶೈನಜಾ ಈಕೆಯನ್ನು ಗಟ್ಟಿಯಾಗಿ ಹಿಡಿದು ಬಲ ಕುತ್ತಿಗೆಗೆ ಕೊಯ್ದನು ಆಗ ಆಕೆ ನೊವಿನಿಂದ ಕೆಳಗೆ ಬಿದ್ದಳು ಆಗ ತನ್ನ ಮೊ.ಸೈ ನಲ್ಲಿದ್ದ ಪ್ಲಾಸ್ಟಿಕ್ ಬಾಟಲಿಯಲ್ಲಿದ್ದ ಪೆಟ್ರೋಲನ್ನು ಶೈನಾಜ ಬೇಗಂ ಆಕೆಯ ತಲೆಯ ಮೇಲೆ ಸುರಿದಿದ್ದು ಫಿರ್ಯಾದಿಯು ಬಿಡಿಸಲು ಹೋದಾಗ ಆಕೆಗೂ ಮೈಮೇಲೆ ಪೆಟ್ರೋಲ್ ಸುರಿದು ಅವರುಗಳು  ಬೇಡ ಅಂದರೂ ಬೆಂಕಿ ಹಚ್ಚಿ ಮೊ.ಸೈ ತೆಗೆದುಕೊಂಡು ಹೊರಟು ಹೋಗಿದ್ದು ಇದರಿಂದ ಫಿರ್ಯಾದಿಗೆ ಗದ್ದಕ್ಕೆ, ಎಡಗಡೆ ಎದೆಗೆ ಎಡಗಡೆ ಹೊಟ್ಟೆಗೆ, ಎಡತಲೆಗೆ, ಎಡಗೈಗೆ ಸುಟ್ಟು ಗಾಯಗಳಾಗಿ ಎದೆಯ ಮತ್ತು ಹೊಟ್ಟೆಯ ಚರ್ಮ ಕಿತ್ತಿದಂತೆ ಆಗಿದ್ದು ಇರುತ್ತದೆ. ಮತ್ತು ಫಿರ್ಯಾದಿ ಮಗಳಿಗೆ  ಕುತ್ತಿಗೆಗೆ ಭಾರಿ ರಕ್ತಗಾಯ, ಮುಖಕ್ಕೆ, ಕೈಗಳಿಗೆ, ಎದೆಗೆ, ಹೊಟ್ಟೆಗೆ, ಎರಡೂ ಕೈಗಳಿಗೆ ಸುಟ್ಟಗಾಯಗಳಾಗಿದ್ದು, ನಂತರ ರೋಡಿಗೆ ಬಂದಾಗ ಯಾರೋ 108 ಅಂಬುಲೇನ್ಸಗೆ ಪೋನ್ ಮಾಡಿದ್ದು ಚಿಕಿತ್ಸೆ ಕುರಿತು ಇಲ್ಲಿಗೆ ಸೇರಿಕೆಯಾಗಿದ್ದು ಘಟನೆಯಾದಾಗ ಬೆಳಗಿನ 9-30 ಗಂಟೆಯಾಗಿರಬಹುದು ಅಂತಾ ವಗೈರಾ ಫಿರ್ಯಾದಿಯ ಪ್ರಕರಣ ದಾಖಲಿಸಿದ್ದು ಇರುತ್ತದೆ.  ನಂತರ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

0 comments:

 
Will Smith Visitors
Since 01/02/2008