1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 30/2017 ಕಲಂ: 279, 337, 304(ಎ) ಐಪಿಸಿ.
ದಿನಾಂಕ: 13-04-2017 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಇಟ್ಟಂಗಿ ಲೋಡ ವಾಹನ ನಂ. ಕೆಎ-53/8114
ನೇದ್ದರ ಕ್ಯಾಬಿನಿನಲ್ಲಿ ಪಿರ್ಯಾದಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಯರಗೇರಿ, ವಯಾ: 21 ವರ್ಷ, ಜಾ:
ಲಿಂಗಾಯತ ಉ: ಕೂಲಿಕೆಲಸ, ಸಾ: ದಾಸನಾಳ, ತಾ:ಗಂಗಾವತಿ ಇವರು ಹಾಗೂ ಅಬ್ದುಲ್ ಕರಡಿ ಇವರು ಕುಳಿತುಕೊಂಡಿದ್ದು,
ಇಟ್ಟಂಗಿ ಲೋಡ ಮೇಲೆ ರವಿ ತಂದೆ ಶ್ಯಾಮಣ್ಣ ವೆಂಕಟಗಿರಿ & ಲಕ್ಷ್ಮಣ @ ಲಚಮ ತಂದೆ ದುರಗಪ್ಪ ವಡಕಿ
ಇವರು ಕುಳಿತುಕೊಂಡಿದ್ದು, ಸದರಿ ವಾಹನವನ್ನು ಆರೋಪಿ ಮಂಜುನಾಥ ತಂದೆ ಕರಬಸಪ್ಪ ಬಾಳಿಕಾಯಿ ಸಾ: ಬಸಾಪಟ್ಟಣ
ಇತನು ಅತಿಜೋರಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ದ್ಯಾಂಪುರ-ತೊಂಡಿಹಾಳ ರಸ್ತೆಯ ಮೇಲೆ ಇನ್ನೂ
03 ಕಿ.ಮೀ. ಅಂತರದಲ್ಲಿ ತೊಂಡಿಹಾಳ ಗ್ರಾಮವಿರುವಾಗ ವಾಹನ ನಿಯಂತ್ರಣ ತಪ್ಪಿ ರಸ್ತೆಯ ದಕ್ಷಿಣ ಭಾಗದಲ್ಲಿರುವ
ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಪಿರ್ಯಾದಿದಾರನಿಗೆ, ರವಿ ವೆಂಕಟಗಿರಿ
ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಲಕ್ಷ್ಮಣ @ ಲಚಮ ವಡಕಿ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.
ಈ ಅಪಘಾತಪಡಿಸಿರುವ ವಾಹನ ನಂ. ಕೆಎ-53/8114 ನೇದ್ದರ ಚಾಲಕ ಮಂಜುನಾಥ ತಂದೆ ಕರಬಸಪ್ಪ ಬಾಳಿಕಾಯಿ ಸಾ:
ಬಸಾಪಟ್ಟಣ ಇತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment