Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, April 13, 2017

1] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 30/2017 ಕಲಂ: 279, 337, 304(ಎ) ಐಪಿಸಿ.

ದಿನಾಂಕ: 13-04-2017 ರಂದು ಮುಂಜಾನೆ 10 ಗಂಟೆ ಸುಮಾರಿಗೆ ಇಟ್ಟಂಗಿ ಲೋಡ ವಾಹನ ನಂ. ಕೆಎ-53/8114 ನೇದ್ದರ ಕ್ಯಾಬಿನಿನಲ್ಲಿ ಪಿರ್ಯಾದಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಯರಗೇರಿ, ವಯಾ: 21 ವರ್ಷ, ಜಾ: ಲಿಂಗಾಯತ ಉ: ಕೂಲಿಕೆಲಸ, ಸಾ: ದಾಸನಾಳ, ತಾ:ಗಂಗಾವತಿ ಇವರು ಹಾಗೂ ಅಬ್ದುಲ್ ಕರಡಿ ಇವರು ಕುಳಿತುಕೊಂಡಿದ್ದು, ಇಟ್ಟಂಗಿ ಲೋಡ ಮೇಲೆ ರವಿ ತಂದೆ ಶ್ಯಾಮಣ್ಣ ವೆಂಕಟಗಿರಿ & ಲಕ್ಷ್ಮಣ @ ಲಚಮ ತಂದೆ ದುರಗಪ್ಪ ವಡಕಿ ಇವರು ಕುಳಿತುಕೊಂಡಿದ್ದು, ಸದರಿ ವಾಹನವನ್ನು ಆರೋಪಿ ಮಂಜುನಾಥ ತಂದೆ ಕರಬಸಪ್ಪ ಬಾಳಿಕಾಯಿ ಸಾ: ಬಸಾಪಟ್ಟಣ ಇತನು ಅತಿಜೋರಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ದ್ಯಾಂಪುರ-ತೊಂಡಿಹಾಳ ರಸ್ತೆಯ ಮೇಲೆ ಇನ್ನೂ 03 ಕಿ.ಮೀ. ಅಂತರದಲ್ಲಿ ತೊಂಡಿಹಾಳ ಗ್ರಾಮವಿರುವಾಗ ವಾಹನ ನಿಯಂತ್ರಣ ತಪ್ಪಿ ರಸ್ತೆಯ ದಕ್ಷಿಣ ಭಾಗದಲ್ಲಿರುವ ತೆಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಪಿರ್ಯಾದಿದಾರನಿಗೆ, ರವಿ ವೆಂಕಟಗಿರಿ ಇವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು, ಲಕ್ಷ್ಮಣ @ ಲಚಮ ವಡಕಿ ಇತನು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಈ ಅಪಘಾತಪಡಿಸಿರುವ ವಾಹನ ನಂ. ಕೆಎ-53/8114 ನೇದ್ದರ ಚಾಲಕ ಮಂಜುನಾಥ ತಂದೆ ಕರಬಸಪ್ಪ ಬಾಳಿಕಾಯಿ ಸಾ: ಬಸಾಪಟ್ಟಣ ಇತನ ವಿರುದ್ದ ಕಾನೂನು ಕ್ರಮ ಜರುಗಿಸಿರಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008