Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, April 12, 2017

1] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ: 45/2017 ಕಲಂ: 96(ಬಿ) ಮತ್ತು (ಸಿ) Karnataka Police Act.
ದಿನಾಂಕ 11-04-2017 ರಂದು ಬೆಳಗ್ಗೆ  06-30 ಗಂಟೆಗೆ ಪಿಸಿ 382 ರಾಜಶೇಖರ ಇವರು ನೀಡಿದ ವರದಿಯಲ್ಲಿ ಇಂದು 5-30 ಗಂಟೆಯಿಂದ ಠಾಣಾ ವ್ಯಾಪ್ತಿಯಲ್ಲಿ ನಾನು ಮತ್ತು ಪಿಸಿ 226 ರವರೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಾ ನಗರದ ಲೇಬರ್ ಕ್ರಾಸ್ ಹತ್ತಿರ ತಿರುಗಾಡುತ್ತಿದ್ದಾಗ ಒಬ್ಬನು ನಮ್ಮನ್ನು ನೋಡಿ ಕತ್ತಲಲ್ಲಿ ತನ್ನ ಇರುವಿಕೆಯನ್ನು ಮರೆಮಾಚುವ ಉದ್ದೇಶದಿಂದ ತನ್ನ ಮುಖ ಮುಚ್ಚಿಕೊಂಡು ಕತ್ತಲಲ್ಲಿ ಅವಿತುಕೊಂಡಿರುವುದು ಕಂಡುಬಂದಿದ್ದು, ಆಗ ನಾವು ಅವನನ್ನ ನೋಡಿದ್ದು, ನಮಗೆ ಅವನ ಮೇಲೆ ಸಂಶಯ ಬಂದು, ಕೂಡಲೇ ನಾವು ಅವನನ್ನು ಹಿಡಿಯಲು ಹೋದಾಗ ಅವನು ನಮ್ಮನ್ನು ನೋಡಿ ಪೊಲೀಸ್ರು ಅಂತಾ ಗುರುತಿಸಿ ಓಡಿ ಹೊರಟಿದ್ದು, ಆಗ ನಾವು ಅವನನ್ನು ಬೆನ್ನತ್ತಿ ಹಿಡಿದುಕೊಂಡು ಅವನನ್ನು ನೋಡಲಾಗಿ ಅವನು ನಮ್ಮ ಠಾಣೆಯ ಎಮ್.ಓ.ಬಿ ಆಸಾಮಿ ಇದ್ದು, ಇವನ ಹೆಸರು ಗುಲಾಬಷಾವಲಿ @ ಗುಲಾಬ ತಂದೆ ಮೈನುದ್ದಿನಸಾಬ ಚುಮ್ಣಾ ವಯಾ: 30 ಜಾ: ಮುಸ್ಲಿಂ ಉ: ಕೂಲಿ ಕೆಲಸ ಸಾ: ಕಪಾಲಿ ಓಣಿ ಕೊಪ್ಪಳ. ಅಂತಾ ಇದ್ದು ನಂತರ ನಾವು ಅವನಿಗೆ ಬೆಳಗಿನ ಜಾವದಲ್ಲಿ ಅಲ್ಲಿದ್ದ ಬಗ್ಗೆ ವಿಚಾರಿಸಲು ಅವ ಸಮರ್ಪಕವಾದ ಉತ್ತರ ಕೊಡಲಿಲ್ಲಾ, ಸದರಿಯವರನ್ನು ಹಾಗೆಯೇ ಬಿಟ್ಟಲ್ಲಿ ನಗರದಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಕಂಡುಬಂದಿದ್ದರಿಂದ ಮುಂಜಾಗೃತೆ ಕುರಿತು ಹಾಜರು ಪಡಿಸಿದ್ದರ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 38/2017 ಕಲಂ: 323 324 504 ಐ.ಪಿ.ಸಿ ಹಾಗೂ ಎಸ್.ಸಿ ಎಸ್.ಟಿ 3 (1) (10) ಯಾಕ್ಟ್.
ದಿನಾಂಕ 11-04-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾಧಿದಾರ ಶ್ರೀ ದುರುಗಪ್ಪ ತಂದೆ ದುರುಗಪ್ಪ ವಡ್ಡರ್. ವಯಾ 55 ವರ್ಷ ಜಾತಿ ಹಿಂದೂ ವಡ್ಡರ್. ಉ: ಕೂಲಿ ಕೆಲಸ ಸಾ: ನವಲಿ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 11-04-2017 ರಂದು ಬೆಳಗ್ಗೆ 09-30 ಗಂಟೆಯ ಸುಮಾರಿಗೆ ನವಲಿ ರೈತ ಸಂಪರ್ಕ ಕೇಂದ್ರಕ್ಕೆ ನನ್ನ ಮಗನ ಜಮೀನಿನಲ್ಲಿ ತೆಗೆಸಿದ ಕೃಷಿ ಹೊಂಡದ ಬಿಲ್ಲ್ ವಿಳಂಬದ ಬಗ್ಗೆ ಕೇಳಲು ಹೋದಾಗ ನವಲಿಯ ಕೃಷಿ ಅಧಿಕಾರಿಯಾದ ಜೆ.ದೇವೆಂದ್ರಪ್ಪನು ನಿಮ್ಮ ಹೊಲದಲ್ಲಿನ ಕೃಷಿ ಹೊಂಡದ ಬಿಲ್ಲ ಮಾಡಬೇಕಾದರೆ 8.000 ರೂ. ಗಳು ಲಂಚ ಕೊಡಿ ಅಂತಾ 15 ದಿನದಲ್ಲಿ ಬಿಲ್ಲ್ ಕೊಡುತ್ತೇನೆ ಎಂದು ಹೇಳಿದರು ಸರ್ ನೀವು ಸರಕಾರಿ ನೌಕರರು ಸಕರ್ಾರ ಸಂಬಳ ಕೊಡುತ್ತೇ ನಾವು ಎಲ್ಲಿಂದ 8.000 ರೂ ಕೊಡೋದು ನಾವು ರೋಕ್ಕ ಕೊಡೋದಿಲ್ಲಾ ಅಂತಾ ನಾನು ಹೇಳಿದಾಗ ಆಗ ಜೆ.ದೇವೆಂದ್ರಪ್ಪನು ನೀನು ಯಾರಿಗೆ ಹೇಳುತ್ತಿ ಹೇಳು ಹೋಗು ಅಂತಾ ಗದರಿಸುತ್ತಾ ಲೇ ವಡ್ಡರ ಸೂಳೆ ಮಗನೆ ನಿಂದು ಭಹಳ ಆಗೈತಿ ನಿನಗೆ ಒಂದು ಗತಿ ಕಾಣಿಸುತ್ತೇನೆ ನನ್ನನ್ನು ಸಾಮಾನ್ಯ ಎಂದು ತಿಳಿಬೇಡ ಎಂದು ಸಾರ್ವಜನಿಕರ ಎದುರಲ್ಲಿ ನನಗೆ ಜಾತಿ ಹೆಸರಲ್ಲಿ ಬೈದು ನನ್ನ ಮೇಲೆ ಹಲ್ಲೇ ಮಾಡಿರುತ್ತಾನೆ. ಇದರಿಂದ ನನಗೆ ಒಳಪೆಟ್ಟಾಗಿರುತ್ತದೆ ಅಲ್ಲಿಯೇ ಇದ್ದು ವಿರೇಶ ಹರಿಜನ ಪ್ಯಾಟೆಪ್ಪ ನಾಯಕ್. ಇವರು ಕೂಡ ನೀವಬ್ಬ ಅಧಿಕಾರಿಯಾಗಿ ಹಿಗೇ ಗದರಿಸಿದರೆ ಹೇಗೆ ಎಂದು ಕೇಳಿದ್ದಕ್ಕೆ ಅವರಿಗೂ ಕೂಡ ಜಾತಿಯಿಂದ ಬೈದಿರುತ್ತಾರೆ. ಅಲ್ಲದೆ ನಿನ್ನ ಮೇಲೆ ಸುಳ್ಳು ಕೇಸು ಹಾಕುತ್ತೇನೆ ನೋಡು ಎಂದು ಹೆದರಿಸಿ ನನಗೆ 20.000 ರೂ ಹಣ ಕೊಡು ಎಂದು ಕೇಳಿದನು ನಾನು ಕೊಡುವುದಿಲ್ಲಾ ಎಂದು ಹೇಳಿದಾಗ ನನಗೆ ಪದೇ ಪದೇ ಸಾರ್ವಜನಿಕ ಸ್ಥಳದಲ್ಲಿ ನಾನು ಒಬ್ಬ ಪರಿಶೀಷ್ಟ ಜಾತಿ (ವಡ್ಡರ್) ಎಂದು ಗೊತ್ತಿದ್ದು ಜಾತಿಯಿಂದ ಬೈದಿರುತ್ತಾನೆ. ಈ ಬಗ್ಗೆ ನಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಈ ದಿವಸ ತಡವಾಗಿ ಠಾಣೆಗೆ ಬಂದಿರುತ್ತೇನೆ. ಕಾರಣ ನನ್ನ ಮೇಲೆ ಹಲ್ಲೇ ಜಾತಿ ನಿಂದನೆ ಹಾಗೂ ಸುಳ್ಳು ಕೇಸು ದಾಖಲಿಸುವುದಾಗಿ ಹಣ ಕೇಳಿದ ಜೆ. ದೇವೆಂದ್ರಪ್ಪ ಕೃಷಿ ಅದಿಕಾರಿ ನವಲಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಲಿಖಿತ ಫಿರ್ಯಾಧಿಯ ಸಾರಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ. ನಂ. 70/2017 ಕಲಂ: 323,324,504,506  ಸಹಿತ 34 ಐಪಿಸಿ.
ಫಿರ್ಯಾಧಿ ಲಕ್ಷ್ಮಣ ಅಳ್ಳಳ್ಳಿ ಸಾ: ಗಂಗನಾಳ ಇವರು ಫಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ದಿನಾಂಕ : 11-04-2017 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ಹಿರೆಮನ್ನಾಪೂರದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ಇದ್ದ ಕಾರಣ ಜಾತ್ರೆಯಲ್ಲಿ ಇದ್ದಾಗ ಆಗ ನನಗೆ ನನ್ನ ಅಣ್ಣನಾದ ಹನಮಪ್ಪನಿಗೆ ಹಿರೇಮನ್ನಾಪೂರ ಗ್ರಾಮದ ತಾಯಪ್ಪ ತಂದೆ ತಿಪ್ಪಣ್ಣ ಇಲಾತಿ ಮತ್ತು ಆತನ ತಮ್ಮ ನಿರುಪಾದಿ ಹಾಗೂ ನನ್ನ ಅಣ್ಣನ ಹೆಂಡತಿಯಾದ ಮಲ್ಲಮ್ಮ ರವರು ಕೂಡಿ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದಾರೆ ಅಂತಾ ಸುದ್ದಿ ಗೊತ್ತಾಗಿ ನಾನು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ಹಿರೇಮನ್ನಾಪೂರ ಗ್ರಾಮದ ನೀರಲೂಟಿ ರಸ್ತೆಯಲ್ಲಿ ಸದರಿಯವರು ನನ್ನ ಅಣ್ಣನೊಂದಿಗೆ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದರು ಆಗ ನಾನು ಸದರಿ ನನ್ನ ಅಣ್ಣನನ್ನು ಬಿಡಿಸಿಕೊಳ್ಳಲು ಹೋದಾಗ ಸದರಿ ತಾಯಪ್ಪ ಈತನು ನನಗೆ ಈ ಸೂಳೆ ಮಗ ಇಲ್ಲಿಗೆ ಯಾಕೆ ಬಂದಾ ಅಂತಾ ಅಂದವನೇ ಅಲ್ಲಿಯೇ ಇದ್ದ ಒಂದು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದನು ಅದರಿಂದ ನನಗೆ ರಕ್ತಗಾಯವಾಯಿತು, ಹಾಗೂ ನಿರುಪಾದಿ ಇತನು ಕೈಯಿಂದ ನನ್ನ ಮೈಕೈಗಳಿಗೆ ಹೊಡಿ ಬಡಿ ಮಾಡಿದನು, ಹಾಗೂ ನಮ್ಮ ಅತ್ತಿಗೆಯಾದ ಮಲ್ಲಮ್ಮಈಕೆಯು ಕೂಡಾ ನನಗೆ ಕಾಲಿನಿಂದ ಒದ್ದಳು, ಅಷ್ಟರಲ್ಲಿ ಅಲ್ಲಿಯೇ ಇದ್ದ ನನ್ನ ಅಣ್ಣನ ಮಗನಾದ ಕಂಠೆಪ್ಪ, ಗೊವಿಂದಪ್ಪ ತಂದೆ ಹನಮಪ್ಪ ಮ್ಯಾಗೇರಿ, ಮಾನಪ್ಪ ತಂದೆ ಕರಿಯಪ್ಪ ಯಾಪಲದಿನ್ನಿ, ಹನಮಪ್ಪ ತಂದೆ ಹುಲುಗಪ್ಪ ಚೌಡಕಿ ರವರು ಬಂದು ಜಗಳಾ ಬಿಡಿಸಿಕೊಳ್ಳಲು ಸದರಿಯವರು ನಮಗೆ ಲೇ ಸೂಳೇ ಮಕ್ಕಳೇ ಇವತ್ತು ಉಳಿದು ಕೊಂಡಿರಿ ನಿಮ್ಮನ್ನು ಇಂದಲ್ಲ ನಾಳೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ  ಅಲ್ಲಿಂದ ಹೋದರು.ನಂತರ ವಿಚಾರಿಸಿದಾಗ ನನ್ನ ಅಣ್ಣನಾದ ಹನುಮಪ್ಪನ ಮಗನಾದ ಕಂಠೆಪ್ಪ ಇತನು ಪೆಂಡಾಲ್ ಹಾಕುವ ಕೆಲಸ ಮಾಡುತ್ತಿದ್ದರಿಂದ ಹಿರೇಮನ್ನಾಪೂರದಲ್ಲಿ ಪೆಂಡಾಲ್ ಹಾಕಲು ಹೋದಾಗ ಸದರಿ ನಮ್ಮ ಅತ್ತಿಗೆಯಾದ ಮಲ್ಲಮ್ಮ ಈಕೆಯು ತಾಯಪ್ಪನ ಮನೆಯಲ್ಲಿರುವದನ್ನು ನೋಡಿ ನನ್ನ ಅಣ್ಣನಾದ ಹನುಮಪ್ಪನಿಗೆ ಹೇಳಿದ್ದು ಆಗ ಹನುಮಪ್ಪನು ಸದರಿಯವರಿಗೆ ಕೇಳಲು ಹೋದಾಗ ಜಗಳಾ ತೆಗೆದು ಹೊಡೆಬಡೆ ಮಾಡುತ್ತಿದ್ದ ಬಗ್ಗೆ ಗೊತ್ತಾಯಿತು, ನಂತರ ಗಾಯಗೊಂಡಿದ್ದ ನಾನು 108 ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಕುರಿತು ಕುಷ್ಟಗಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ಹಿರೇಮನ್ನಾಪೂರ ಗ್ರಾಮದ ತಾಯಪ್ಪ ತಂದೆ ತಿಪ್ಪಣ್ಣ ಇಲಾತಿ ಮತ್ತು ಆತನ ತಮ್ಮ ನಿರುಪಾದಿ ಹಾಗೂ ನನ್ನ ಅಣ್ಣನ ಹೆಂಡತಿಯಾದ ಮಲ್ಲಮ್ಮ ರವರು ಸದರಿ ಮಲ್ಲಮ್ಮಳು ಮನೆ ಬಿಟ್ಟು ಹೋಗಿದ್ದ ಹಳೇ ದ್ವೇಷದಿಂದ ನಮ್ಮೊಂದಿಗೆ ಜಗಳಾ ತೆಗೆದು ಅವಾಚ್ಯಾಗಿ ಬೈದು ನನ್ನ ಅಣ್ಣನಾದ ಹನುಮಪ್ಪನಿಗೆ ಹಾಗೂ ನನಗೆ ಹೊಡೆಬಡೆ ಮಾಡಿ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿದ್ದು, ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008