Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, May 12, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 90/2017 ಕಲಂ: 323, 354, 504, 506 ಸಹಿತ 34 ಐ.ಪಿ.ಸಿ ಮತ್ತು 3(1)(10) ಎಸ.ಸಿ/ಎಸ್.ಟಿ. ಕಾಯ್ದೆ 1989.
ದಿನಾಂಕ 08-05-2017 ರಂದು 03-00 ಪಿ.ಎಂ.ಕ್ಕೆ  ಪಿರ್ಯಾದುದಾರರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 05-05-2017 ರಂದು 09-50 ಪಿ.ಎಂ.ಸುಮಾರಿಗೆ ಪಿರ್ಯಾದುದಾರರು ಮುನಿರಾಬಾದನಿಂಗಾಪೂರ ಬೈಪಾಸ್ ಹತ್ತಿರ ಪಿರ್ಯಾದದಾರರು ಆಟೋದಲ್ಲಿ ಹುಲಗಿಯಿಂದ ಬಂದು ಮನೆಗೆ ಹೋಗಲು ನಿಂತಿರುವಾಗ 3ಜನ ರೋಪಿತರು ಬಂದು ಅಸಂಬದ್ದ ಮತ್ತು ಅಶ್ಲಿಲವಾಗಿ ಮಾತನಾಡುತ್ತಿದ್ದು ಪಿರ್ಯಾದುದಾರರು ಮತ್ತು ಅವರ ಪತಿ ಹನುಮಂತಪ್ಪ ಇಬ್ಬರು ತಮ್ಮ ಮೋ.ಸೈ.ನಲ್ಲಿ ಮನೆಗೆ ಹೋಗುತ್ತಿರುವಾಗ ಆ ಮೂರು ಜನರು ಹಿಂಬಾಲಿಸುತ್ತಾ ಬಂದು ಹೊಸಳ್ಳಿ ಶುದ್ದ ಕುಡಿಯುವ ನೀರಿನ ಘಟಕದ ಹತ್ತಿರ ಬಂದಾಗ ಪಿರ್ಯಾದುದಾರಳು ಈ ಹಿಂದೆ ನಿಂಗಾಪೂರ ಬೈಪಾಸ್ ಹತ್ತಿರ ನಿಂತಾಗ  ಮೂರು ಜನ ರೋಪಿತರು ಬಂದು ತೊಂದರೆ ಕೊಟ್ಟ ಎಲ್ಲಾವಿಷಯವನ್ನು ತನ್ನ ಪತಿಗೆ ತಿಳಿಸಿದ್ದು ಆಗ ಪಿರ್ಯಾದುದಾರಳ ಪತಿ ಆ ಮೂರು ಜನರಿಗೆ ವಿಚಾರಿಸಲು ಅವರು  ಪಿರ್ಯಾದುದಾರರ ಪತಿಗೆ ಕೈಯಿಂದ ಹೊಡೆದು ಹಲ್ಲೆಮಾಡಿ ಜೀವದ ಬೆದರಿಕೆ ಹಾಕಿ ಜಾತಿನಿಂದನೆ ಮಾಡಿರುತ್ತಾರೆ ಎಂದು ಪಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
2] ಯಲಬುರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 46/2017 ಕಲಂ: 279, 304(ಎ) ಐ.ಪಿ.ಸಿ:.
ದಿನಾಂಕ: 11-05-2017 ರಂದು ಸಂಜೆ 5-15 ಗಂಟೆಯ ಸುಮಾರಿಗೆ ಮೃತನು ತನ್ನ ಮೋಟಾರ ಸೈಕಲ ನಂ;ಕೆ.ಎ-37/ಇಬಿ-4552 ನೇದ್ದನ್ನು ದಮ್ಮೂರು- ಜರಕುಂಟಿ ರಸ್ತೆಯ ಮೇಲೆ ದಮ್ಮೂರು ಕಡೆಯಿಂದ ಜರಕುಂಟಿ ಕಡೆಗೆ ಜರಕುಂಟಿ ಸೀಮಾದಲ್ಲಿ ಬರುವ ಈರಪ್ಪ ತಂದೆ ಬಸಪ್ಪ ಹಲಗೇರಿ ಇವರ ಹೊಲದ ಹತ್ತಿರ ತನ್ನ ಮೋ.ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ಎಡಮಗ್ಗಲು ತಗ್ಗಿನಲ್ಲಿ ಮೋ.ಸೈಕಲ ಸಮೇತ ಬಿದ್ದು ಮೃತನಿಗೆ ಎಡಗಡೆ ಹಣೆಗೆ, ಎಡಗಡೆ ತಲೆಗೆ ಭಾರಿಸ್ವರೂಪದ ಒಳಪೆಟ್ಟು ಹಾಗೂ ತೆರಚಿದ ಗಾಯ ಮೂಗಿನಿಂದ ರಕ್ತ ಬಂದಿದ್ದು ಎಡಗಾಲು ಮೊಣಕಾಲಿಗೆ ತೆರಚಿದ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ.  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
3] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ: 36/2017 ಕಲಂ: 87 Karnataka Police Act.
ದಿನಾಂಕ:-10.05.2017 ರಂದು ಸಾಯಂಕಾಲ 4:45 ಗಂಟೆ ಸುಮಾರಿಗೆ ಗುಳೆ ಗ್ರಾಮದ ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಕಲ್ಲು-ಗಿಡ ಮರಗಳಿದ್ದ ನಾಲದ ಹತ್ತಿರ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 6 ಜನ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 5400=00 ರೂ ನಗದು ಹಣ ಹಾಗೂ  ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯೊಂದಿಗೆ ತಮ್ಮ ವರದಿ ಸಲ್ಲಿಸಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಅಪರಾಧವಾದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
4] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 114/2017 ಕಲಂ: 87 Karnataka Police Act.

ದಿನಾಂಕ:- 11-05-2017 ರಂದು ಮಧ್ಯಾಹ್ನ ಶ್ರೀ ಪ್ರಕಾಶ ಮಾಳಿ, ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಠಾಣೆರವರು ಠಾಣೆಯಲ್ಲಿರುವಾಗ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಾಪೂರ ಹತ್ತಿರ ಇರುವ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ  ಸದ್ಯ  ಖಾಲಿ ಇರುವ ಪಪ್ಪಾಯಿ  ಕೆನಾಲ್ ದಲ್ಲಿ  ಸೇತುವೆಯ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿರವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಇಬ್ಬರು ಪಂಚರನ್ನು ಬರಮಾಡಿಕೊಂಡು ಸಂಗಡ ಇದ್ದ ಸಿಬ್ಬಂದಿಯವರಾದ ಹೆಚ್.ಸಿ- 44, 173, ಪಿ.ಸಿ. 110, 237, 131, 363, ಹಾಗೂ ಚೀಪ ಚಾಲಕ ಎ.ಹೆಚ್.ಸಿ ಕನಕಪ್ಪ ರವರೊಂದಿಗೆ ಸರಕಾರಿ ಜೀಪ್ ನಂಬರ್: ಕೆ.ಎ-37/ ಜಿ-307 ಹಾಗೂ ಸಿಬ್ಬಂದಿಯವರ ವೈಯಕ್ತಿಕ ಮೋಟಾರ ಸೈಕಲಗಳಲ್ಲಿ ಮಧ್ಯಾಹ್ನ 1=00 ಗಂಟೆಗೆ ಹೊರಟು ಮಲ್ಲಾಪೂರ ಹತ್ತಿರ ಸ್ವಲ್ಪ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಎಲ್ಲರೂ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಲ್ಲಾಪೂರ ಹತ್ತಿರ ಇರುವ ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಪಪ್ಪಾಯಿ ಕೇನಾಲ್ ಸೇತುವೆಯ ಕೆಳಗಡೆ  ನೀರು ಇಲ್ಲದ್ದರಿಂದ  ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ್ ಎಲೆಗಳಿಂದ ಅಂದರ್ ಬಹಾರ್ ಎನ್ನುವ ಕಾನೂನು ಬಾಹಿರವಾದ ಅದೃಷ್ಠದ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದು ಕಂಡುಬಂದಿದ್ದು, ಕೂಡಲೇ ಅವರ ಮೇಲೆ ದಾಳಿ ಮಾಡಲಾಗಿ ಜೂಜಾಟದಲ್ಲಿ ತೊಡಗಿದ್ದ 5 ಜನರು ಸಿಕ್ಕಿಬಿದ್ದಿದ್ದು, ಸದರಿ ದಾಳಿಯಲ್ಲಿ ಸಿಕ್ಕವರಿಂದ ಹಾಗೂ ಸ್ಥಳದಿಂದ ಜೂಜಾಟದ ನಗದು ಹಣ ರೂ. 36,050/- ಗಳು, 52 ಇಸ್ಪೀಟ್ ಎಲೆಗಳು, ಹಾಗೂ ನೆಲದ ಮೇಲೆ ಹಾಸಿದ್ದ ಒಂದು ಪ್ಲಾಸ್ಟಿಕ್ ಖಾಲಿ ಚೀಲ ಸಿಕ್ಕಿದ್ದು ಇರುತ್ತವೆ. ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008