Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, June 16, 2017

1] ನಗರ ಪೊಲೀಸ್ ಠಾಣೆ ಗಂಗಾವತಿ ಗುನ್ನೆ ನಂ. 116/2017 ಕಲಂ. 78(3) Karnataka Police Act.
ದಿನಾಂಕ 15-06-2017 ರಂದು 7-15 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಶಕ್ಷಾವಲಿ ತಂದೆ ಆಲಾಂಸಾಬ ವಯಾ: 24 ವರ್ಷ ಜಾ: ಮುಸ್ಲಿಂ ಉ: ಟೀ ಬಂಡಿ ವ್ಯಾಪಾರ ಸಾ: ಇಸ್ಲಾಂಪುರ ಗಂಗಾವತಿ ಈತನು ಗಂಗಾವತಿ ನಗರದ ಇಸ್ಲಾಂಪುರದ ಶಿರಿಗೇರಿ ಆಸ್ಪತ್ರೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವ ಮೇಲೆ ಪಿ.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಸದರಿಯವನಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ಮಟಕಾ ಜೂಜಾಟದ ಹಣ ನಗದು ರೂ. 570-00  02] ಮಟಕಾ ನಂಬರ ಬರೆದ 01 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00 ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.        
2]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 138/2017 ಕಲಂ. 3 & 4 ಇ. ಸಿ. ಕಾಯ್ದೆ:.
ದಿ:15-06-2017 ರಂದು ರಾತ್ರಿ 10-00 ಗಂಟೆಗೆ ಶ್ರೀ ಭೀಮಣ್ಣ. ಎಮ್.ಸೋರಿ ಸಿಪಿಐ ಕೊಪ್ಪಳ ಗ್ರಾಮೀಣ ವೃತ್ತ ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೇ, ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯ ಚುಕ್ಕನಕಲ್ ಸಮೀಪ ಅನಧಿಕೃತವಾಗಿ ಅಕ್ಕಿ ಮೂಟೆಗಳನ್ನು ಆಟೋದಲ್ಲಿ ತುಂಬಿಕೊಂಡು ಹೊರಟಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಸಿಬ್ಬಂದಿ ಸಮೇತ ಇಂದು ರಾತ್ರಿ 8-15 ಗಂಟೆಗೆ ಚುಕ್ಕನಕಲ್ ಸಮೀಪದ ಅರಗಂಜಿ ಖಾಸಿಂಸಾಬ ಇವರ ಹೊಲದ ಸಮೀಪ ಆರೋಪಿ ಮರುಳಸಿದ್ದಯ್ಯ ಮಠದ ಸಾ: ಹಿರೇಸಿಂದೋಗಿ ಇತನ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ಆಟೋ ನಂ: ಕೆಎ-35/ಎ-5173 ನೇದ್ದರಲ್ಲಿ ಸುಮಾರು 6,000=00 ಬೆಲೆಬಾಳುವ ಪಡಿತರ ಅಕ್ಕಿಗೆ ಹೋಲುವ 15 ಅಕ್ಕಿಯ ಮೂಟೆ ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿದ್ದು ಇರುತ್ತದೆ. ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಅದೆ.  
3]  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 136/2017 ಕಲಂ. 279, 338 ಐ.ಪಿ.ಸಿ:

ದಿ:15-06-2017 ರಂದು ಮದ್ಯಾಹ್ನ 1-15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ತನ್ನ ಸಹೋದ್ಯೋಗಿ ಬೇಬಿನ್ ಸಾ: ಗಿಣಿಗೇರಿ ಇವರ ಮೋಟಾರ ಸೈಕಲ್ ನಂ: ಕೆಎ-37/ಕ್ಯೂ-7509 ನೇದ್ದರ ಹಿಂದೆ ಕುಳಿತುಕೊಂಡು ಗಿಣಿಗೇರಿಯಿಂದ ಕೊಪ್ಪಳಕ್ಕೆ ಅಂತಾ ಬಸಾಪೂರ ಸೀಮಾದ ಕೋಳಿ ಫಾರ್ಮ ದಾಟಿ ಕರ್ವಿಂಗ್ ದಲ್ಲಿ ಬರುತ್ತಿದ್ದಾಗ ಅದೇ ಸಮಯಕ್ಕೆ ಕೊಪ್ಪಳದ ಕಡೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ-37/ಎಫ್-435 ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ ಹಾಗೂ ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಕರ್ವಿಂಗನ್ನು ಗಮನಿಸದೇ ಓಡಿಸುತ್ತಾ ಬಂದು ಫಿರ್ಯಾದಿದಾರರ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಹಣೆಗೆ ರಕ್ತಗಾಯ ಹಾಗೂ ಎರಡೂ ಮೊಣಕಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ. ಮತ್ತು ಬಲಕಾಲ ಪಾದದ ಮೇಲೆ ಭಾರಿ ರಕ್ತಗಾಯವಾಗಿದೆ. ಮತ್ತು ಮೋಟಾರ ಸೈಕಲ ಸವಾರ ಬೇಬಿನ್ ಇತನಿಗೆ ಬಲಕಾಲ ಪಾದದ ಹತ್ತಿರ ಭಾರಿ ರಕ್ತಗಾಯವಾಗಿದೆ. ಕಾರಣ ಅಪಘಾತ ಮಾಡಿದ ಬಸ್ ನಂ: ಕೆಎ-37/ಎಫ್-435 ನೇದ್ದರ ಚಾಲಕ ಮಲ್ಲಪ್ಪ ಬೇಗಾರ. ಗಂಗಾವತಿ ಡಿಪೋ, ಸಾ: ಇಂದುವಾರ, ತಾ:ಹುನಗುಂದ ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರನ್ನು ಪಡೆದುಕೊಂಡು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

0 comments:

 
Will Smith Visitors
Since 01/02/2008