Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Monday, June 26, 2017

1]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 129/2017 ಕಲಂ. 304(ಎ) ಐ.ಪಿ.ಸಿ. .
ದಿನಾಂಕ 25-06-2017 ರಂದು ರಾತ್ರಿ 9-00 ಗಂಟೆಗೆ ಶ್ರೀ ಮಹ್ಮದ್ ಆರೀಫ್ ತಂದೆ ಖಾಜಾಹುಸೇನಸಾಬ, ವಯಸ್ಸು 65 ವರ್ಷ  ಇವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ನನ್ನ ಮಗಳಾದ ಜರೀನಾಬಾನು ಗಂಡ ಹೊನ್ನೂರಸಾಬ ಈಕೆಯು ಗರ್ಭಿಣಿಯಿದ್ದು, ಆಕೆಯ ಹೆರಿಗೆ ಕುರಿತು ಗಂಗಾವತಿಯ ಆನಂದ ನರ್ಸಿಂಗ್ ಹೋಮ್ ದಲ್ಲಿ ಇಂದು ದಿನಾಂಕ 25-06-2017 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಅಡ್ಮಿಟ್ ಮಾಡಿದ್ದು, ಅಲ್ಲಿನ ವೈದ್ಯರು ನಾರ್ಮಲ್ ಡಿಲೇವರಿ ಆಗುತ್ತದೆ ಅಂತಾ ಹೇಳಿದ್ದು ಮಧ್ಯಾಹ್ನ 3-30 ಗಂಟೆಗೆ ಹೆಚ್ಚಿನ ಚಿಕಿತ್ಸೆಗೆ ಎಮರ್ಜೆನ್ಸಿ ಕೊಠಡಿಗೆ ಕರೆದುಕೊಂಡು ಗ್ಲುಕೋಸ್ ಬಾಟಲಿಯನ್ನು ಏರಿಸಿ ಓವರ್ ಡೋಸ್ ನೀಡಿದ್ದು ಸಂಜೆ 4-00 ಗಂಟೆಗೆ ಸಾವಿನ ಸುದ್ಧಿ ಹೇಳಿರುತ್ತಾರೆ.  ವೈದ್ಯರ ಬೇಜವಾಬ್ದಾರಿಯಿಂದ ಗರ್ಭಿಣಿಯ ಪ್ರಾಣ ಹೋಗಿದ್ದು, ನನ್ನ ಮಗಳಿಗೆ 3 ನಾರ್ಮಲ್ ಡಿಲೇವರಿ ಆಗಿದ್ದು, 4ನೇ ಡಿಲೇವರಿ ಈ ರೀತಿ ವೈದ್ಯರ ನಿರ್ಲಕ್ಷ್ಯತನದಿಂದ ನಡೆದಿರುತ್ತದೆ.  ಕಾರಣ ಡಾ: ಶಶಿಧರ ಮತ್ತು  ಡಾ: ಅನಿತಾ ಹಾಗೂ ಸಿಬ್ಬಂದಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 144/2017 ಕಲಂ. 87 Karnataka Police Act.
ಶ್ರೀ ಜಯಪ್ರಕಾಶ ಪಿ.ಎಸ್. ರವರಿಗೆ ದಿನಾಂಕ 25-06-2017 ರಂದು 12-45 ಪಿ.ಎಂ.ಕ್ಕೆ ಕರ್ಕಿಹಳ್ಳಿ ಗ್ರಾಮದಲ್ಲಿ ಇಸ್ಪೇಟ್ ಜೂಜಾಟ ನಡೆದ ಬಗ್ಗೆ ಮಾಹಿತಿ ಬಂದಿದ್ದು ಹೋಗಿ ದಾಳಿ ಮಾಡಿದ್ದು ಆರೋಪಿತರು 1] ನಾಗಪ್ಪ ತಂದೆ ಬಸಪ್ಪ ಕಟ್ಟಿಮನಿ ವಯ: 38 ವರ್ಷ ಸಾ:ಕರ್ಕಿಹಳ್ಳಿ ಹಾಗೂ ಇತರೇ 7 ಜನರು ಗ್ರಾಮದ ಯಮನೂರಸಾಬ ಇವರ ಪ್ಲಾಟ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದಾಗ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ದಾಳಿ ಮಾಡಿ ಹಿಡಿದಿದ್ದು, ಕಾಲಕ್ಕೆ ಮೇಲ್ಕಂಡ ಆರೋಪಿತರು ಸಿಕ್ಕಿದ್ದು, ಸದರಿಯವರಿಂದ 52 ಇಸ್ಪೇಟ ಎಲೆಗಳು, 1 ಹಳೆ ಬರಕಾ ಹಾಗೂ 4400-00 ರೂ. ನಗದು ಹಣ ಸಿಕ್ಕಿರುತ್ತವೆ ಎಂದು ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.
3]  ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ: 379 IPC and MMRD 1957 Rule 4, 4(1),4(A)
ದಿನಾಂಕ: 25-06-2017 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಅಳವಂಡಿ ಠಾಣೆ ವ್ಯಾಪ್ತಿಯ ಚಿಕ್ಕಸಿಂದೋಗಿ ಕಡೆಯಿಂದ ಆರೋಪಿತರಾದ ಚಾಲಕ ಮತ್ತು ಮಾಲಿಕರು ತಮ್ಮ ನಂಬರ್ ಇರಲಾರದ ನೀಲಿ ಬಣ್ಣದ ನ್ಯೂಹಾಲೆಂಡ್ ಕಂಪನಿಯ ಟ್ರಾಕ್ಟರ್ ಚಾಸ್ಸಿ ನಂ: NH3317399L503 ಹಾಗೂ ನೊಂದಣಿ ಹಾಗೂ ಚಾಸ್ಸಿ ನಂಬರ್ ಇರಲಾರದ ಟ್ರಾಲಿ ನೇದ್ದರಲ್ಲಿ ಸರ್ಕಾರಕ್ಕೆ ಸೇರಿದ ಚಿಕ್ಕಸಿಂದೋಗಿ ಗ್ರಾಮದ ಹತ್ತಿರ ಹಳ್ಳದಿಂದ ಅಂದಾಜು 2,000-00 ರೂ. ಬೆಲೆ ಬಾಳುವ ಮರಳನ್ನು ಸರ್ಕಾರದಿಂದ ಅಥವಾ ಸಂಭಂದಿಸಿದ ಇಲಾಖೆಯಿಂದ ಯಾವುದೇ ಪಾಸ್ ಅಥವಾ ಪರ್ಮೀಟ್ ಪಡೆಯದೇ ಕಳ್ಳತನ ಮಾಡಿಕೊಂಡು, ಮಾರಾಟ ಮಾಡಿ ಲಾಭ ಗಳಿಸುವ ಉದ್ಧೇಶದಿಂದ ಟ್ರಾಕ್ಟರ ಟ್ರಾಲಿಯಲ್ಲಿ ತುಂಬಿಕೊಂಡು ಬರುತ್ತಿರುವಾಗ ಹಿರೇಸಿಂದೋಗಿ ಕ್ರಾಸನಲ್ಲಿ ಶ್ರೀ ಶಂಕರಪ್ಪ ಎಲ್ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ಹಿಡಿದಿದ್ದು ಆಗ ಚಾಲಕನು ಟ್ರಾಕ್ಟರ್ ಹಾಗೂ ಟ್ರಾಲಿಯನ್ನು ಬಿಟ್ಟು ಅಲ್ಲಿಂದ ಓಡಿ ಹೋಗಿದ್ದು ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಟ್ರಾಕ್ಟರ್ ಟ್ರಾಲಿಯನ್ನು ಮರಳ ಸಮೇತ ವಶಕ್ಕೆ ತಗೆದುಕೊಂಡು ಠಾಣೆಗೆ ಬಂದಿದ್ದು ಸದರಿ ಟ್ರಾಕ್ಟರ್ ಟ್ರಾಲಿ ಚಾಲಕ ಮತ್ತು ಮಾಲಿಕನ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 148/2017 ಕಲಂ. 379 ಐ.ಪಿ.ಸಿ.
ದಿ:25-06-2017 ರಂದು ಮದ್ಯಾಹ್ನ 3-00 ಗಂಟೆಗೆ ಫಿರ್ಯಾದಿದಾರರಾದ ರಾಘವೇಂದ್ರ ಇಳಿಗೇರ. ಸಾ: ಸರ್ದಾರಗಲ್ಲಿ ಕೊಪ್ಪಳ. ಇವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಕೊಪ್ಪಳ ತಾಲ್ಲೂಕಾ ಚಿಲಕಮುಖಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಗುಡಿಯ ಸಮೀಪದ ರಾಮಣ್ಣ ಇವರ ಪಾನಶಾಪ ಬಾಜು ಫಿರ್ಯಾದಿದಾರರ ಅಳಿಯ ಮಲ್ಲೇಶ ಗೋರೆ ಇವರು ದೇವಿ ದರ್ಶನಕ್ಕೆ ಅಂತಾ ತೆಗೆದುಕೊಂಡು ಹೋಗಿದ್ದ ಫಿರ್ಯಾದಿದಾರರ ಮಾಲೀಕತ್ವದ  ಮೋಟಾರ ಸೈಕಲ್ ನಂ: ಕೆಎ-37/ಇಸಿ-7839 ನೇದ್ದನ್ನು ಲಾಕ್ ಮಾಡಿ ಇಟ್ಟಿರುವಾಗ, ದಿ:09-06-2017 ರಂದು ಮದ್ಯಾಹ್ನ 12-30 ಗಂಟೆಯಿಂದ ಸಂಜೆ 4-00 ಗಂಟೆಯ ಅವಧಿಯಲ್ಲಿ ಸುಮಾರು 40,000=00 ರೂ ಬೆಲೆಬಾಳುವ ಸದರ ಗಾಡಿಯನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ಮೋಟಾರ ಸೈಕಲ್ ಕಳುವು ಮಾಡಿದ ಕಳ್ಳರನ್ನು ಹಾಗೂ ಮಾಲನ್ನು ಪತ್ತೆ ಮಾಡಿ ಕೊಡಲು ವಿನಂತಿಸಲಾಗಿದೆ ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ ಪ್ರಕರಣವನ್ನು ದಾಖಲಿಸಿ ತಪಾಸಣೆ ಕೈಗೊಂಡಿದ್ದು ಇರುತ್ತದೆ.
5] ಹನಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 66/2017 ಕಲಂ. 279, 338, 304[], .ಪಿ.ಸಿ.
ದಿನಾಂಕ: 04-6-2017 ರಂದು ಸಾಯಾಂಕಾಲ 19-30 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ: ಕೆ.-36/ಕ್ಯೂ-9879 ನೇದ್ದರ ಚಾಲಕ ಗೋಪಾಲ ತಂದೆ ಹನಮಪ್ಪ ಕೋಟಿಮ್ಯಾಗಿನ್ ವಯಾ: 35 ವರ್ಷ, ಜಾತಿ: ಉಪ್ಪಾರ, ಸಾ: ಪಟ್ಟಲಚಿಂತಿ ತಾ: ಕುಷ್ಟಗಿ ಇತನು ತನ್ನ ಮೋಟಾರ್ ಸೈಕಲ್ಲನ್ನು ಹನಮನಾಳ ಕಡೆಯಿಂದ ಪಟ್ಟಲಚಿಂತಿ ಕಡೆಗೆ ಸೋಮಣ್ಣ ಇಂಗಳದಾಳ ರವರ ತೋಟದ ಹತ್ತಿರ ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿ ಸ್ಕಿಡ್ ಮಾಡಿ ಕೆಡವಿ ಅಪಘಾತಪಡಿಸಿ ಅಪಘಾತದಲ್ಲಿ ಚಾಲಕ ಗೋಪಾಲನಿಗೆ ತಲೆಗೆ ಹಾಗೂ ಎಡಮಲಕು, ಕಿವಿಗೆ ಭಾರಿ ರಕ್ತಗಾಯವಾದಾಗ ಹಿಂದಿನಿಂದ ಬರುವ ಶ್ರೀನಿವಾಸ ತಂದೆ ಹನಮಪ್ಪ ಕೋಟಿಮ್ಯಾಗಿನ್ ಹಾಗೂ ಸೋಮಣ್ಣ ತಂದೆ ಬಸಪ್ಪ ಓಲೇಕಾರ ರವರು ನೋಡಿ ಗಾಯಾಳು ಗೋಪಾಲನನ್ನು 108 ಆಂಬ್ಯುಲೇನ್ಸದಲ್ಲಿ ಕುಮಾರೇಶ್ವರ ಆಸ್ಪತ್ರೆ ಬಾಗಲಕೋಟೆಗೆ ಹೋಗುವಾಗ ಫಿರ್ಯಾದಿ ಬಸವರಾಜ ತಂದೆ ಹನಮಪ್ಪ ಕೋಟಿಮ್ಯಾಗಿನ್ ವಯಾ: 32 ವರ್ಷ ಜಾ: ಉಪ್ಪಾರ, : ಒಕ್ಕಲುತನ, ಸಾ: ಪಟ್ಟಲಚಿಂತಿ, ತಾ: ಕುಷ್ಟಗಿ,  ಇವರಿಗೆ ಶ್ರೀನಿವಾಸ ರವರು ಫೋನ್ ಮಾಡಿ ತಿಳಿಸಿ ಗಾಯಾಳನ್ನು ಕುಮಾರೇಶ್ವರ ಆಸ್ಪತ್ರೆಗೆ ಉಪಚಾರ ಕುರಿತು ದಾಖಲು ಮಾಡಿದ್ದು, ಅಲ್ಲಿಗೆ ಫಿರ್ಯಾದಿದಾರರು ಕೂಡ ಹೋಗಿ ನೋಡಿದ್ದು, ವಿಷಯ ನಿಜವಿದ್ದು, ನಂತರ ದಿನಾಂಕ: 6-6-2017 ರಂದು ಮುಂಜಾನೆ 11-15 ಗಂಟೆಗೆ ಗಾಯಾಳು ಗೋಪಾಲನನ್ನು ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಅಪಘಾತದ ಬಗ್ಗೆ ವೈಧ್ಯಾಧಿಕಾರಿಗಳಿಗೆ ತಿಳಿಸಿರುವುದಿಲ್ಲ. ನಂತರ ಗೋಪಾಲ ಸ್ವಲ್ಪ ಗುಣಮುಖವಾದ ಮೇಲೆ ಫಿರ್ಯಾದಿದಾರರಿಗೆ ಗೋಪಾಲನನ್ನು ವಿಚಾರಿಸಲು ತಾನು ತನ್ನ ಮೋಟಾರ್ ಸೈಕಲ್ ನಂ: ಕೆ.-36/ಕ್ಯೂ-9879 ನೇದ್ದನ್ನು ಅತೀವೇಗ ಹಾಗೂ ಆಲಕ್ಷತನದಿಂದ ನಡೆಸಿಕೊಂಡು ಹೋಗಿ ಸ್ಕೀಡ್ ಮಾಡಿ ಅಪಘಾತಡಪಸಿದ್ದು ಅಂತಾ ತಿಳಿದಿದ್ದು ಇರುತ್ತದೆ. ಸದರಿ ಗೋಪಾಲನು ದಿನಾಂಕ: 24-6-2017 ರಂದು ಉಪಚಾರ ಫಲಿಸದೇ ರಾತ್ರಿ 10-50 ಗಂಟೆಗೆ ಮೃತಪಟ್ಟಿದ್ದು, ಈ ಬಗ್ಗೆ ಫಿರ್ಯಾದಿದಾರರು ಬಾಗಲಕೋಟೆಯಿಂದ ತಮ್ಮೂರ ಪಟ್ಟಲಚಿಂತಿಗೆ ಬಂದು ಹಿರಿಯರನ್ನು ವಿಚಾರಿಸಿ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008