Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, June 6, 2017

1]  ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 102/2017 ಕಲಂ. 78(3) Karnataka Police Act.
ದಿನಾಂಕ 05-06-2017 ರಂದು 8-00 ಪಿ.ಎಮ್ ಗಂಟೆಯ ಸುಮಾರಿಗೆ ಆರೋಪಿತನಾದ ಸಾಬಣ್ಣ  ತಂದೆ ಶ್ಯಾಮೀದಸಾಬ ವಯಾ: 42 ವರ್ಷ, ಜಾ: ಮುಸ್ಲಿಂ, ಉ: ಪಾನಶಾಪ ಸಾ: ಸಂತೆ ಬಯಲು ಗಂಗಾವತಿ ಈತನು ಗಂಗಾವತಿ ನಗರದ  ಸಂತೆ ಬಯಲಿನಲ್ಲಿರುವ ಆಂಜನೇಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರನ್ನು ಕರೆದು  ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ  ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವ ಮೇಲೆ ಪಿಎಸ್ಐ(ಅ.ವಿ) ರವರು ಪಂಚರ ಸಮಕ್ಷಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಸದರಿಯವರಿಗೆ ವಶಕ್ಕೆ ತೆಗೆದುಕೊಂಡು ಸದರಿಯವನಿಂ ಮಟಕ ಜೂಜಾಟದಿಂದ ಸಂಗ್ರಹಿಸಿದ 01] ನಗದು ಹಣ ರೂ. 450-00 02 ] ಮಟಕಾ ನಂಬರ ಬರೆದ 01 ಚೀಟಿ ಅಂ. ಕಿ 00 03] 01 ಬಾಲ್ ಪೆನ್ ಅಂ.ಕಿ 00-00  ದೊರೆತಿದ್ದುಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 52/2017 ಕಲಂ. 87 Karnataka Police Act.
ದಿನಾಂಕ:-04.06.2017 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ಹುಣಸಿಹಾಳ ಗ್ರಾಮದ ಸೀಮಾದಲ್ಲಿರುವ ಸಾರ್ವಜನಿಕ ಸ್ಥಳದ ಕಲ್ಲು-ಗಿಡ ಮರಗಳಿದ್ದ ನಾಲಾದ ಹತ್ತಿರ ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ದಾಳಿ ಮಾಡಿದಾಗ 11 ಜನ ಆರೋಪಿತರೆಲ್ಲರೂ ಸಿಕ್ಕಿ ಬಿದ್ದಿದ್ದು ಸದರಿ ಸಿಕ್ಕಿಬಿದ್ದ ಆರೋಪಿತರಿಂದ 7590=00 ರೂ ನಗದು ಹಣ ಹಾಗೂ ಇಸ್ಪೆಟ್ ಜೂಜಾಟದ ಸಾಮಾಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.  
3] ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 77/2017 ಕಲಂ. 379 ಐ.ಪಿ.ಸಿ:.
ದಿನಾಂಕ: 05-06-2017 ರಂದು ಮದ್ಯಾಹ್ನ 4-00 ಗಂಟೆಗೆ ಪಿರ್ಯಾಧಿದಾರರಾದ ಬಾಬುಜಿ ತಂದೆ ವಿರುಪಾಕ್ಷಪ್ಪ ದಿವಟರ ಸಾ: ಎನ್.ಜಿ.ಓ ಕಾಲೋನಿ ಕೊಪ್ಪಳ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 23-02-2017 ರಂದು ಮದ್ಯಾಹ್ನ 3-00 ಗಂಟೆಯ ಸುಮಾರಿಗೆ ತಮ್ಮ ಹೆಸರಿನಲ್ಲಿರುವ ಹಿರೋ ಪ್ಯಾಶನ್ ಪ್ರೋ ಮೋಟಾರ ಸೈಕಲ್ ನಂ ಕೆ.ಎ 37 ಯು 8267 ನೇದ್ದನ್ನು ಕೊಪ್ಪಳ ನಗರದ ರೈಲ್ವೆ ಸ್ಟೇಷನ್ ಎದುರುಗಡೆ ನಿಲ್ಲಿಸಿ ತಾವು ಒಳಗಡೆ ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ವಾಪಸ ಸಂಜೆ 6-30 ಗಂಟೆಗೆ ಹೊರಗಡೆ ಬಂದು ನೋಡಿದಾಗ ತಮ್ಮ ಮೋಟಾರ ಸೈಕಲ್ ಕಾಣಲಿಲ್ಲಾ ಯಾರೋ ಕಳ್ಳರು ಕಳ್ಲತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
4] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ. 454, 380 ಐ.ಪಿ.ಸಿ:.

ದಿನಾಂಕ:-05-06-2017 ರಂದು ಸಂಜೆ 7-30 ಗಂಟೆಗೆ ಶ್ರೀ ರಾರಾಯಪ್ಪ ತಂದೆ ಈರಪ್ಪ ಯರಡೋಣಿ, ವಯಾ 50 ವರ್ಷ ಜಾತಿ ಕುರುಬರು : ಒಕ್ಕಲುತನ ಸಾ: ಸಿದ್ದಾಪೂರ ರವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾಧಿ ಕೊಟ್ಟಿದ್ದು, ಅದರ ಸಾರಾಂಶವೇನೆಂದರೆನನ್ನ ಸ್ವಂತ ಊರು ಸಿದ್ದಾಪುರ ಗ್ರಾಮ ಇದ್ದು, ನಮ್ಮ ಮನೆಯು ನಮ್ಮೂರ ಕುರುಬರು ಓಣಿಯ ತಾಯಮ್ಮನ ಗುಡಿಯ ಹತ್ತಿರ ಬರುತ್ತಿದ್ದು, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ, ಮಕ್ಕಳು ಮತ್ತು ಅಕ್ಕ ದುರಗಮ್ಮಳೊಂದಿಗೆ ಜೀವನ ನಡೆಸುತ್ತೇವೆ. ನಿನ್ನೆ ದಿನಾಂಕ 04-06-2017 ರಂದು ಕುಷ್ಟಗಿ ತಾಲೂಕಿ ಇದ್ಲಾಪೂರ ಗ್ರಾಮದಲ್ಲಿ ನನ್ನ ಅಣ್ಣನ ಮಗಳಾದ ಹುಲಿಗೆಮ್ಮ ರವರ ಮದುವೆ ಇದ್ದುದ್ದರಿಂದ ಮನೆಯಲ್ಲಿ ನನ್ನ ಅಕ್ಕ ದುರಗಮ್ಮಳನ್ನು ಬಿಟ್ಟು ನಾವೆಲ್ಲರೂ ಮದುವೆಗೆ ಹೋಗಿದ್ದು, ನಾವೆಲ್ಲರೂ ಮದುವೆ ಮುಗಿಸಿಕೊಂಡು ವಾಪಸ ಸಂಜೆ 5-00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಿ ಮನೆಯಲ್ಲಿದ್ದ ನನ್ನ ಅಕ್ಕ ದುರಗಮ್ಮಳನ್ನು ವಿಚಾರ ಮಾಡಿದಾಗ ತಿಳಿದು ಬಂದಿದ್ದೆನೆಂದರೆ, ನಿನ್ನೆ ದಿನಾಂಕ 04-06-2017 ರಂದು ಮದ್ಯಾಹ್ನ 1-00 ಗಂಟೆಯಿಂದ 2-00 ಗಂಟೆಯ ಅವಧಿಯಲ್ಲಿ ನಮ್ಮ ದನಕರುಗಳನ್ನು ನೀರು ಕುಡಿಸಲು ಪಕ್ಕದ ಮನೆಗೆ ಹೋದಾಗ  ಸಮಯದಲ್ಲಿ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲು ಮುರಿದು ಮನೆಯಲ್ಲಿ ಇಟ್ಟಿದ್ದ .ಕಿ.ರೂ.48000/- ಗಳ ಬೆಲೆ ಬಾಳುವ ಬಂಗಾರ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 

0 comments:

 
Will Smith Visitors
Since 01/02/2008