1] ಕನಕಗಿರಿ
ಪೊಲೀಸ್ ಠಾಣೆ ಗುನ್ನೆ ನಂ. 63/2017 ಕಲಂ.
87 Karnataka Police
Act.
ದಿನಾಂಕ 06-06-2017 ರಂದು 09-30 ಗಂಟೆಯಿಂದ 10-30 ಅವಧಿಯಲ್ಲಿ ಠಾಣಾ ವ್ಯಾಪ್ತಿಯ ವಡಕಿ ಗ್ರಾಮದ ಲಕ್ಷ್ಮೀದೇವಿ ಗುಡಿಯ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ
ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಪೊಲೀಸ್ರು ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ
ಆಡುತ್ತಿದ್ದ 8 ಜನರು ಸಿಕ್ಕಿದ್ದು, ಸದರಿ 8 ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಒಟ್ಟು ಹಣ ರೂ.3400=00
ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು ವಾಪಸ್
ಠಾಣೆಗೆ ಬಂದು ಎ.ಎಸ್.ಐ. ರವರು ವರದಿ ಕೊಟ್ಟ ಮೇರೆಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
2] ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 135/2017 ಕಲಂ. 302 ಐ.ಪಿ.ಸಿ:.
ದಿನಾಂಕ:- 07-06-2017 ರಂದು
ಬೆಳಿಗ್ಗೆ 10:3 ಗಂಟೆಗೆ ಫಿರ್ಯಾದಿದಾರರಾದ ಶ್ರೀಮತಿ ಗಾಳೆಮ್ಮ ಗಂಡ ಮಹಾದೇವಪ್ಪ ಪೂಜಾರಿ, ವಯಸ್ಸು 38 ವರ್ಷ,
ಜಾತಿ: ಮಾದಿಗ ಉ: ಕೂಲಿ ಕೆಲಸ ಸಾ: ವೆಂಕಟಗಿರಿ ತಾ: ಗಂಗಾವತಿ ಇವರು ದೂರನ್ನು ನೀಡಿದ್ದು, ನನ್ನ ಗಂಡನಾದ
ಮಹಾದೇವಪ್ಪ ತಂದೆ ಗಿಡ್ಡಪ್ಪ-45 ವರ್ಷ ಉ: ಕೂಲಿ ಕೆಲಸ ಸಾ: ವೆಂಕಟಗಿರಿ ಈತನು ನಿನ್ನೆ
ದಿನಾಂಕ:- 06-06-2017 ರಂದು ಬೆಳಿಗ್ಗೆ ತನ್ನ ಬ್ಯಾಂಕಿನ ಜಿರೋ ಅಕೌಂಟ್ ಗೆ ಸರಕಾರದಿಂದ ಹಣ ಹಾಕುತ್ತಾರೆ
ಅಂತಾ ಹೇಳಿದ್ದಾರೆ ಅದನ್ನು ಕೇಳಿಕೊಂಡು ಬರಲು ಕೊಪ್ಪಳಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದನು.
ಆದರೆ ಸಂಜೆಯಾದರೂ ಸಹ ವಾಪಸ್ ಬರದೇ ಇದ್ದಾಗ ರಾತ್ರಿ 7:30 ಗಂಟೆಯ ಸುಮಾರಿಗೆ ನನ್ನ ಗಂಡನ ಮೊಬೈಲ್
ಗೆ ಕರೆ ಮಾಡಿದಾಗ ಆತನು ದಾಸನಾಳ ಬ್ರಿಡ್ಜ್ ಹತ್ತಿರ ಇರುವುದಾಗಿ ಹೇಳಿದ್ದನು. ಆತನ ಸಂಗಡ ಯಮನೂರ ಎಂಬಾತನು
ಇರುವುದಾಗಿ ಸಹ ಹೇಳಿದ್ದನು. ಆದರೆ ಇಂದು ಬೆಳಿಗ್ಗೆ ಆತನ ಶವ ದಾಸನಾಳ ಬ್ರಿಡ್ಜ ಹತ್ತಿರ ಕಂಡುಬಂದಿದ್ದು,
ದಿನಾಂಕ:- 06-06-2017 ರಂದು ರಾತ್ರಿ 7:30 ರಿಂದ ರಾತ್ರಿಯ ಅವಧಿಯಲ್ಲಿ ನನ್ನ ಗಂಡ ಮಹಾದೇವಪ್ಪ ಈತನನ್ನು
ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ದಾಸನಾಳ ಡಿಸ್ಟ್ರಿಬ್ಯೂಟರಿ ನಂ: 17 ರ ಹತ್ತಿರ
ಕಾಲುವೆಯ ದಂಡೆಯ ಮೇಲೆ ಹಾಕಿರುವ ತಾತ್ಕಾಲಿಕ ತಗಡಿನ ಶೆಡ್ಡಿನಲ್ಲಿ ಆತನ ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿರುತ್ತಾರೆ.
ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
3] ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ.
24/2017 ಕಲಂ. 279, 337 ಐ.ಪಿ.ಸಿ:.
ದಿನಾಂಕ. 07-06-2017
ರಂದು ಫಿರ್ಯಾದಿದಾರರು ತಮ್ಮ ನಂಬರ ಇರದ ಹೊಸ ಎಚ್.ಎಫ್ ಡಿಲಕ್ಸ
ಮೋಟಾರ್ ಸೈಕಲ್ ಚಲಾಯಿಸಿಕೊಂಡು ಕೊಪ್ಪಳ ನಗರದ ಗದಗ-ಹೊಸಪೇಟೆ ಎನ್.ಹೆಚ್-63 ರಸ್ತೆಯ ಮೇಲೆ ಭಾರತ್ ಪೆಟ್ರೋಲ್ ಬಂಕ್ ಮುಂದೆ ಪೆಟ್ರೋಲ್ ಹಾಕಿಸಲು ಬಲಗಡೆಗೆ
ತಿರುಗಿಸುತ್ತಿರುವಾಗ ಹಿಂದಿನಿಂದ ಒಬ್ಬ ಕಾರ್ ನಂಬರ . KA-37/M-6455 ನೆದ್ದರ ಚಾಲಕನು ತಾನು ಚಲಾಯಿಸುತ್ತಿರುವ ಕಾರ್ ವಾಹನವನ್ನು ಜೋರಾಗಿ ಮತ್ತು
ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ
ಫಿರ್ಯಾದಿಯ ಬಲಕಾಲಿನ ಕೆಳಗೆ ರಕ್ತಗಾಯ ಮತ್ತು ಬೆನ್ನಿಗೆ ತೆರಚಿದಗಾಯಗಳು ಆಗಿರುತ್ತವೆ. ಪ್ರಕರಣವನ್ನು
ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment