1] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 80/2017 ಕಲಂ. 465, 468, 471, 477(ಎ), 409 ಸಹಿತ 34 ಐ.ಪಿ.ಸಿ:.
ದಿನಾಂಕ: 08-06-2017 ರಂದು ರಾತ್ರಿ 9-00 ಗಂಟೆಗೆ ಮಾನ್ಯ ಜಿಲ್ಲಾ ಪೊಲೀಸ್
ಅಧೀಕ್ಷಕರು, ಕೊಪ್ಪಳರವರಿಂದ ಒಂದು ಜ್ಞಾಪನ ಪತ್ರದೊಂದಿಗೆ ಲಗತ್ತಿಸಿದ ಫಿರ್ಯಾದಿ ಸ್ವೀಕೃತಗೊಂಡಿದ್ದು,
ಸದರಿ ಫಿರ್ಯಾದಿಯನ್ನು ಪಡೆದುಕೊಂಡು ಪರಿಶೀಲಿಸಿ ನೋಡಲು, ಅದರ ಸಾರಾಂಶವೆನೆಚಿದರೆ, ಆರೋಪಿ ನಂ:
01 ಮಹಮ್ಮದ ಫೈಜ್ ಕಿರಿಯ ವೈದ್ಯಕೀಯ ಪ್ರಯೋಗಶಾಲಾ ತಂತ್ರಜ್ಞರು ಸಮುದಾಯ ಆರೋಗ್ಯ ಕೇಂದ್ರ ಹಿರೇಸಿಂಧೋಗಿದಲ್ಲಿ
ಕರ್ತವ್ಯನಿರ್ವಹಿಸುತ್ತಿದ್ದು ಹಾಗೂ ಸದರಿ ಆಸ್ಪತ್ರೆಯಲ್ಲಿ ಹೆಚ್.ಆರ್.ಎಂ.ಎಸ್. ಸಹ ನಿರ್ವಹಣೆ ಮಾಡುತ್ತಿದ್ದು,
ಸದರಿಯವನು ಸಮುದಾಯ ಆರೋಗ್ಯ ಕೇಂದ್ರ ಹಿರೇಸಿಂಧೋಗಿಯಲ್ಲಿ ವರ್ಗಾವಣೆಗೊಂಡ ಹಾಗೂ ಪದೋನ್ನತಿ ಮೇಲೆ ವರ್ಗಾವಣೆಗೊಂಡ
ನೌಕರರ ಹೆಸರಿನಲ್ಲಿ ನಕಲಿ ದಾಖಲಾತಿಗಳನ್ನು ಸೃಷ್ಠಿ ಮಾಡಿ, ಡಮ್ಮಿ ನೌಕರರ ಹೆಸರಿನಲ್ಲಿ ವೇತನ ತೆಗೆದು,
ನಖಲಿ ವೇತನ ಬಿಲ್ಲುಗಳನ್ನು ಸೃಷ್ಠಿಸಿ, ಸರ್ಕಾರಕ್ಕೆ ಸೇರಿ ಒಟ್ಟು ಹಣ 1,01,86,246=00 ರೂಪಾಯಿಗಳನ್ನು
ತನ್ನ ಖಾತೆಗೆ ಮತ್ತು ಆರೋಪಿ ನಂ: 02 ಸರ್ವಂಗಳ ಕಿರಿಯ ವ್ಯದ್ಯಕೀಯ ಇವರ ಖಾತೆಗೆ ಜಮಾ ಮಾಡಿಕೊಂಡು
ಸ್ವಂತಕ್ಕೆ ಬಳಸಿಕೊಂಡು ದುಪಯೋಗ ಪಡಿಸಿಕೊಂಡಿರುತ್ತಾನೆ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ. 67/2017 ಕಲಂ. 143, 147, 148, 323, 326, 354,
504, 506 ಸಹಿತ 149 ಐ.ಪಿ.ಸಿ:.
ದಿನಾಂಕ 08/06/2017 ರಂದು ಮುಂಜಾನೆ 6-00 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಿಂದ
ಎಂ.ಎಲ್.ಸಿ.ಯು ನಿಸ್ತಂತು ಮುಖಾಂತರ ಬಂದ ಮೇರೆಗೆ ಠಾಣೆಯ ಹೆಚ್ಸಿ-50 ಎ.ಎ.ಪಾಟೀಲ್ ರವರನ್ನು ಕಳುಹಿಸಿದ್ದು,
ಸದ್ರಿ ಹೆಚ್ಸಿ-50 ರವರು ಜಿಲ್ಲಾ ಸರಕಾರಿ ಆಸ್ಪತ್ರೆ ಕೊಪ್ಪಳಕ್ಕೆ ಹೋಗಿ ಗಾಯಾಳು ಹುಲಿಗೆಮ್ಮ ಗಂಡ
ಯಂಕಪ್ಪ ನಾಡಿಗೇರ್ ಸಾ : ಆಕಳಕುಂಪಿ ಇವರ ಹೇಳಿಕೆ ಫಿರ್ಯಾಧಿಯನ್ನು ಪಡೆದುಕೊಂಡು ವಾಪಸ್ ಸಂಜೆ
5-30 ಗಂಟೆಗೆ ಠಾಣೆಗೆ ಬಂದು ಹೇಳೀಕೆ ಫಿರ್ಯಾಧಿಯನ್ನು ಹಾಜರ ಪಡಿಸಿದ್ದು, ಅದರ ಸಾರಾಂಶವೇನೆಂದರೆ,
ನಿನ್ನೆ ದಿನಾಂಕ 07-06-2017 ರಂದು ರಾತ್ರಿ 8-30 ಗಂಟೆಗೆ ಫಿರ್ಯಾಧಿದಾರಳು ತನ್ನ ಮನೆಯ ಮುಂದೆ ಕುಳಿತುಕೊಂಡಾಗ
ಆ ಸಮಯದಲ್ಲಿ ಆರೋಪಿತರು ಈ ಹಿಂದೆ ದಿನಾಂಕ 02-06-2017 ರಂದು ತಮ್ಮ ಮೇಲೆ ಕೇಸ್ ಮಾಡಿದ ವಿಷಯವನ್ನು
ಮನಸ್ಸಿನಲ್ಲಿ ಇಟ್ಟುಕೊಂಡು ಅದೇ ದ್ವೇಶದಿಂದ ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ
ಕಲ್ಲು ಗಳನ್ನು ಹಿಡಿದುಕೊಂಡು ಬಂದು ಲೇ ಭೋಸೂಡಿ ಸೂಳೇ ನಮ್ಮ ಮೇಲೆ ಕೇಸ್ ಮಾಡಿಸಿದ್ದೇನಲೇ ಅಂತಾ ಅಶ್ಲೀಲವಾಗಿ
ಬೈದು ಆರೋಪಿ ನಂ.1 ರಿಂದ 5 ರವರು ಕಲ್ಲಿನಿಂದ ತಲೆಗೆ, ಬೆನ್ನಿಗೆ, ಮೈ ಕೈಗೆ ಒಡೆದು ಕಾಲಿನಿಂದ ಹೊಟ್ಟೆಗೆ
ಒದ್ದು ಕೆಳಗೆ ಬಿಳಿಸಿರುತ್ತಾರೆ. ಇದರಿಂದ ಫಿರ್ಯಾಧಿದಾರಳ ತಲೆಗೆ ಭಾರಿ ರಕ್ತ ಗಾಯವಾಗಿರುತ್ತದೆ.
ಉಳಿದ ಆರೋಪಿತರು ಲೇ ಬಸುವಿ ಸೂಳೇ. ನಿನ್ನ ತಿಂಡಿ ತಿರಿಸುತ್ತೇವೆ ನೋಡಲೇ ಅಂತಾ ಬೈದು ಇನ್ನೊಮ್ಮೆ
ನಮ್ಮ ತಂಟೆಗೆ ಬಂದರೇ ನಿನ್ನ ಜೀವ ಮುಕ್ತಾಯಗೊಳಿಸುತ್ತೇವೆ ಅಂತಾ ಬೈದರು ಆಗ ಆಕೆಯ ಅಣ್ಣನು ಬಂದು ಜಗಳ
ಬಿಡಿಸಿ ಅವಳನ್ನು ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ.
ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
0 comments:
Post a Comment