Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Thursday, July 27, 2017

1] ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 197/2017 ಕಲಂ. 78(3) Karnataka Police Act.
ದಿನಾಂಕ: 26-07-2017 ರಂದು 10-00 ಎ.ಎಂ. ಸುಮಾರಿಗೆ ಶಿವಪೂರ ಗ್ರಾಮದ ಹನುಮಪ್ಪನಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಮಚಂದ್ರ ತಂ/ ತುಳಿಜಾರಾಮ್ ಕಾಂಬ್ಳೆ ಸಾ: ಹಳೆ ಶಿವಪೂರ ಇವನು  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ, ಪಿರ್ಯಾದಿದಾರರಾದ ಶ್ರೀ ಕೆ.ಜಯಪ್ರಕಾಶ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದುಕೊಂಡು ಅವರಿಂದ 430-00 ರೂ. ಮಟಕಾ ಜೂಜಾಟದ ನಗದು ಹಣ ಮತ್ತು ಒಂದು ಬಾಲ್ ಪೆನ್ ಹಾಗೂ ಒಂದು ಮಟಕಾ ಚೀಟಿಯನ್ನು ಜಪ್ತ ಪಡಿಸಿಕೊಂಡಿದ್ದು ಇರುತ್ತದೆ, ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.   
2] ಅಳವಂಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/2017 ಕಲಂ. 174 ಸಿ.ಆರ್.ಪಿ.ಸಿ:

ದಿನಾಂಕ: 26-07-2017 ರಂದು ಮುಂಜಾನೆ 9-30 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಮಾಳವ್ವ ಗಂಡ ಭೀಮಪ್ಪ ಯತ್ನಟ್ಟಿ ವಯ: 40 ವರ್ಷ ಜಾತಿ: ಕುರಬರ  ಉ: ಕೂಲಿಕೆಲಸ ಸಾ: ಹಿರೇಸಿಂದೋಗಿ  ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಒಂದು ಫಿರ್ಯಾದಿಯನ್ನು ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ: 25-07-2017 ರಂದು ರಾತ್ರಿ 10-30 ಗಂಟೆಯಿಂದ ಇಂದು ದಿನಾಂಕ: 26-07-2017 ಮುಂಜಾನೆ 6-15 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಗಂಡನಾದ ಭೀಮಪ್ಪ ಯತ್ನಟ್ಟಿ ವಯಸ್ಸು: 47 ವರ್ಷ ಈತನು ಶ್ರೀ ಧರ್ಮಸ್ಥಳ ಮಂಜುನಾಥ ಗುಂಪುಗಳಲ್ಲಿ ಮಾಡಿಕೊಂಡ ಸಾಲಭಾದೆಯಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ವಿಷ ಸೇವನೆ ಮಾಡಿ ತಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಅವನ ಮರಣದಲ್ಲಿ ಯಾವುದೇ ರೀತಿಯ ಯಾರ ಮೇಲೆ ಸಂಶಯ ವಗೈರೆ ಇರುವದಿಲ್ಲಾ. ಅಂತಾ ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ. 

0 comments:

 
Will Smith Visitors
Since 01/02/2008