1] ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 201/2017 ಕಲಂ: 32, 34 Karnataka Excise Act.
ದಿನಾಂಕಃ 04-09-2017 ರಂದು ರಾತ್ರಿ 10-30 ಗಂಟೆಗೆ ಶ್ರೀ ಎಂ.ಶಿವಕುಮಾರ ಪಿ.ಎಸ್.ಐ.
ಕಾರಟಗಿ ಠಾಣೆ ರವರು ಠಾಣೆಗೆ ಹಾಜರಾಗಿ, ಪಂಚನಾಮೆ, ವರದಿಯನ್ನು ಪಡಿಸಿದ್ದು, ಸದ್ರಿ ವರದಿಯ ಸಾರಾಂಶವೇನೆಂದರೆ,
ದಿನಾಂಕ 04-09-2017 ರಂದು ರಾತ್ರಿ 8-30 ಗಂಟೆಗೆ ಕಾರಟಗಿ ಪಟ್ಟಣದ ಹೊರ ವಲಯದ ರೆಡ್ ಚಿಲ್ಲಿ ರೆಸ್ಟೋರೆಂಟ್
ದ ಮಾಲೀಕನು ಯಾವುದೇ ಅಧಿಕೃತವಾದ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು
ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು,
ಆ ಕಾಲಕ್ಕೆ ಆರೋಪಿತನು ಪೊಲೀಸ್ ರು ಬರುವದನ್ನು ನೋಡಿ ಓಡಿ ಹೋಗಿದ್ದು, ಸದ್ರಿ ರೆಸ್ಟೋರೆಂಟ್ ದಲ್ಲಿದ್ದ
1] 05 ಕಿಂಗ್ ಪಿಷರ್ ಸ್ಟ್ರಾಂಗ್ ಬಿಯರ್ ಮದ್ಯದ ಬಾಟಲಿಗಳು, 650 ಎಂ.ಎಲ್. 2] 09 ಕಿಂಗ್ ಪಿಷರ್
ಸ್ಟ್ರಾಂಗ್ ಬಿಯರ್ ಮದ್ಯದ ಬಾಟಲಿಗಳು 330 ಎಂ.ಎಲ್ 3) 07
8 ಪಿ.ಎಂ. ವಿಸ್ಕಿ ಟೆಟ್ರಾ ಮದ್ಯದ ಬಾಟಲಿಗಳು 180 ಎಂ.ಎಲ್. 4) 03 ಓಲ್ಡ್ ಟಾವರ್ ವಿಸ್ಕಿ
ಟೆಟ್ರಾ ಮದ್ಯದ ಬಾಟಲಿಗಳು 180 ಎಂ.ಎಲ್. 5) 02 ಮ್ಯಾಗಡೋಲ್ ವಿಸ್ಕಿ ರಮ್ ಮದ್ಯದ ಬಾಟಲಿಗಳು 180
ಎಂ.ಎಲ್. 6) 02 ಬ್ಯಾಗಪೇಪರ್ ವಿಸ್ಕಿ ಪೇಪರ್ ಬಾಟಲಿಗಳು
180 ಎಂ.ಎಲ್. 7) 03 ಮ್ಯಾಗಡೋಲ್ ಮದ್ಯದ ಬಾಟಲಿಗಳು 90 ಎಂ.ಎಲ್. 8) 05 08 ಪಿ.ಎಂ. ವಿಸ್ಕಿ ಮದ್ಯದ ಬಾಟಲಿಗಳು 90 ಎಂ.ಎಲ್. 9)
06 ಓರಿಜನಿಲ್ ಟ್ರಾವಲರ್ ವಿಸ್ಕಿ ಮದ್ಯದ ಬಾಟಲಿಗಳು 90 ಎಂ.ಎಲ್. ಈಗ್ಗೆ ಒಟ್ಟು 42 ಮದ್ಯದ ಬಾಟಲಿಗಳು
ಅ.ಕಿ.ರೂ. 3037=0 ವಿವಿಧ ಮದ್ಯದ ಬಾಟಲಿಗಳನ್ನು ಪಂಚರ
ಸಮಕ್ಷಮ ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
ಇರುತ್ತದೆ.
2] ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 201/2017 ಕಲಂ: 32, 34 Karnataka Excise Act.
ಫಿರ್ಯಾದಿದಾರರು ದಿ:04-09-2017
ರಂದು ಸಂಜೆ 5-30 ಗಂಟೆಗೆ ಠಾಣೆಗೆ ಹಾಜರಾಗಿ
ನೀಡಿದ ದೂರಿನ ಸಾರಾಂಶವೇನೆಂದರೇ, ಇಂದು ದಿ:04-09-2017
ರಂದು ಮದ್ಯಾಹ್ನ 3-10 ಗಂಟೆಗೆ ಠಾಣಾ ವ್ಯಾಪ್ತಿಯ ಬಹೂದ್ದೂರುಬಂಡಿ
ರಸ್ತೆಯ ಡಾಬಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮದ್ಯದ ಟೆಟ್ರಾಪಾಕೇಟಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ
ಬಂದಿದ್ದರಿಂದ, ಫಿರ್ಯಾದಿದಾರರು ಸಿಬ್ಬಂದಿ ಮತ್ತು ಪಂಚರಿಗೆ ಸಂಗಡ ಕರೆದುಕೊಂಡು ಸ್ಥಳಕ್ಕೆ
ಭೇಟಿ ನೀಡಿ ಮದ್ಯಾಹ್ನ
3-45 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮತ್ತು ಹಾಯವರ್ಡ್ಸ ಚಿಯರ್ ವಿಸ್ಕಿ 90
ಎಮ್.ಎಲ್ ಅಳತೆಯೆ ಒಂದು ಟೆಟ್ರಾಪಾಕೆಟ್ ಅಂ.ಕಿ. 28.13 ರೂ ಹೀಗೆ ಒಟ್ಟು 48 ಪಾಕೇಟಗಳು ಅಂ,ಕಿ
1,350=24 ರೂ. ಬೆಲೆಬಾಳುವ ಮದ್ಯವನ್ನು ಪಂಚರ ಸಮಕ್ಷಮ ಜಪ್ತಿ
ಮಾಡಿಕೊಂಡಿದ್ದು ಇರುತ್ತದೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಿ ಅಂತಾ ಫಿರ್ಯಾದಿ ನೀಡಿದ್ದು ಇರುತ್ತದೆ.
3] ಕುಕನೂರ ಪೊಲೀಸ್ ಠಾಣೆ ಗುನ್ನೆ
ನಂ. 122/2017 ಕಲಂ: 279, 337 ಐ.ಪಿ.ಸಿ:
ದಿನಾಂಕ:
03-09-2017 ರಂದು ಸಾಯಂಕಾಲ 5 ಸುಮಾರಿಗೆ ಕೊಪ್ಪಳ-ಗದಗ ರಸ್ತೆಯ ಮೇಲೆ ತಳಕಲ್ ಬಸ್
ನಿಲ್ದಾಣದ ಮುಂದುಗಡೆ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: KA 37
EB 5781 ನೇದ್ದನ್ನು ಗದಗ ಕಡೆಯಿಂದ ಕೊಪ್ಪಳ
ಕಡೆಗೆ ಅತೀ ಜೋರಾಗಿ ಹಾಗೂ ಅಲ್ಷತನದಿಂದ ನಡೆಸಿಕೊಂಡು ಬಂದವನೇ ರಸ್ತೆ ಎಡಬದಿಗೆ ನಿದಾನವಾಗಿ
ಬರಿತ್ತಿದ್ದ ಫಿರ್ಯಾದಿದಾರನ ಕಾರ್ ನಂ : KA
29 M 4633 ನೇದ್ದರ ಬಲಭಾಗಕ್ಕೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ಆರೋಪಿತನು ತನ್ನ ಮೋಟಾರ್ ಸೈಕಲ್ ಸಮೇತ
ಬಲವಾಗಿ ಬಿದ್ದು ಗಾಯಗೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೆಲಿಂದ ಪ್ರಕರಣ ದಾಖಲಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ,
0 comments:
Post a Comment