1] ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 143/2017 ಕಲಂ. 32, 34 Karnataka Excise Act.
ದಿನಾಂಕ: 01-10-2017 ರಂದು ಸಾಯಾಂಕಾಲ 17-00 ಗಂಟೆಗೆ ಠಾಣೆಯಲ್ಲಿದ್ದಾಗ
ಹನಮಸಾಗರದ ಎ.ಪಿ.ಎಂ.ಸಿ. ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪರಶುರಾಮ ತಂದೆ ಚಂದಪ್ಪ ಗುಡಗಲದಿನ್ನಿ
ಸಾ: ಹನಮಸಾಗರ ರವರು ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಕೂಡಲೆ
ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರಾದ ಹೆಚ್.ಸಿ-32, ಪಿ.ಸಿ-398, 168 ರವರೊಂದಿಗೆ ಠಾಣೆಯಿಂದ ಹೊರಟು
ಗೊಣ್ಣಾಗರ ಆಸ್ಪತ್ರೆಯ ಕಂಪೌಂಡ ಹತ್ತಿರ ಸಾಯಾಂಕಾಲ 17-15 ಗಂಟೆಗೆ ತಲುಪಿ ಸಾಯಾಂಕಾಲ 17-20 ಗಂಟೆಗೆ
ದಾಳಿಮಾಡಿದಾಗ ಪರಶುರಾಮ ತಂದೆ ಚಂದಪ್ಪ ಗುಡಗಲದಿನ್ನಿ ರವರು ಸಿಕ್ಕಿಬಿದಿದ್ದು ಅವನ ಹತ್ತಿರ 1]
180 .ಎಂ.ಎಲ್.ಅಳತೆಯ 26 ಟೆಟ್ರಾ ಪಾಕೇಟಗಳು HAYWARDS
CHEERS WHISKY ಪ್ರತಿಯೊಂದಕ್ಕೆ ಎಂ.ಆರ್.ಪಿ.
56.27 ಅಂತಾ ಬೆಲೆ ಇರುತ್ತದೆ. ಇವುಗಳ ಒಟ್ಟು ಅಂ:ಕಿ: 1463.02 ರೂಪಾಯಿಗಳು ಆಗುತಿದ್ದು. ಹಾಗೂ ನಗದು
ಹಣ 170-00 ರೂಪಾಯಿ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈ ಗೊಂಡಿರುತ್ತಾರೆ.
2] ಅಳವಂಡಿ ಪೊಲೀಸ್ ಠಾಣೆ ಗುನ್ನೆ ನಂ. 158/2017 ಕಲಂ. 504, 323, 506 ಸಹಿತ 149 ಐ.ಪಿ.ಸಿ ಹಾಗೂ 3(1)(10) ಮತ್ತು 3(2)(5) ಎಸ್.ಸಿ/ಎಸ್.ಟಿ.
ಕಾಯ್ದೆ:
ದಿನಾಂಕ: 01-10-2017 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರರಾದ
ಶ್ರೀ ರಮೇಶ ತಂದೆ ಹನಮಪ್ಪ ದೊಡ್ಡಮನಿ. ವಯಸ್ಸು: 24 ವರ್ಷ ಜಾತಿ: ಮಾದಿಗ ಉ: ಕೂಲಿಕೆಲಸ ಸಾ: ಬೇಳೂರ
ತಾ:ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು ಅದರ ಸಾರಾಂಶ ಏನಂದರೆ, ಇಂದು
ದಿನಾಂಕ: 01-10-2017 ರಂದು ಸಂಜೆ 6:30 ಗಂಟೆಯ ಸುಮಾರಿಗೆ ಬೇಳೂರು ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ಯ
ಹೆಜ್ಜೆ ಹಾಕುವ ಸಮಯದಲ್ಲಿ ಕಾಲು ಬಡಿದ ನೆಪ ಮಾಡಿಕೊಂಡು 1] ರವಿಕುಮಾರ ತಂದೆ ದೇವಪ್ಪ ಬಾರಕೇರ ಹಾಗೂ
15 ಜನರನ್ನು ಕರೆದುಕೊಂಡು ಫಿರ್ಯಾದಿ ಮನೆ ಹತ್ತಿರ ಹೋಗಿ ಫಿರ್ಯಾದಿಗೆ ಅವಾಚ್ಯವಾಗಿ ಬೈದು ಜಾತಿ ನಿಂಧನೆ
ಮಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ.
0 comments:
Post a Comment