Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Friday, October 6, 2017

1]  ಕುಷ್ಟಗಿ  ಪೊಲೀಸ್  ಠಾಣೆ  ಗುನ್ನೆ ನಂ. 277/2017 ಕಲಂ.  87 Karnataka Police Act.
ದಿನಾಂಕ : 05-10-2017 ರಂದು ಸಾಯಂಕಾಲ 5-00 ಗಂಟೆಗೆ  ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ ಸಾಹೇಬರು ಕುಷ್ಠಗಿ ಪೊಲೀಸ ಠಾಣೆರವರು ಠಾಣೆಗೆ ಬಂದು ಒಂದು ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ್ದು ಸದರಿ ವರದಿ ಮತ್ತು ಪಂಚನಾಮೆ ಆಧಾರದ ಮೇಲಿಂದ ಪ್ರಕರಣವನ್ನು ದಾಖಲು ಮಾಡಲು ಮಾನ್ಯ ನ್ಯಾಯಾಲಯಕ್ಕೆ ಪರವಾನಿಗೆ ಕೇಳಿದ್ದು ಸದರಿ ಪರವಾನಿಗೆಯು ಸಾಯಂಕಾಲ 5-15 ಗಂಟೆಗೆ ಸ್ವೀಕೃತವಾಗಿದ್ದು ಸಾರಾಂಶವೆನಂದರೆ ಹಿರೇಮನ್ನಾಪೂರ ಗ್ರಾಮದ ಗುಡದೂರು ರಸ್ತೆಯ ರಮಜಾನಸಾಬ ಅಳ್ಳಳ್ಳಿ ರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ  5 ಜನ ಆರೋಪಿತರು ಸಿಕ್ಕಿದ್ದು ಇರುತ್ತದೆ. ಹಾಗೂ ಆರೋಪಿತರಿಂದ ಇಸ್ಪೆಟ್ ಜೂಜಾಟದ ಒಟ್ಟು ನಗದು ಹಣ 3580-00 ರೂಪಾಯಿ, 52 ಇಸ್ಪೆಟ್ ಎಲೆಗಳು, ಹಾಗೂ ಒಂದು ಹಳೆ ನ್ಯೂಸ್ ಪೇಪರನ್ನು ಪಂಚನಾಮೆ ಕಾಲಕ್ಕೆ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
2]  ಸಂಚಾರಿ  ಪೊಲೀಸ್  ಠಾಣೆ  ಕೊಪ್ಪಳ   ಗುನ್ನೆ ನಂ. 43/2017 ಕಲಂ. 279, 337, 338 ಐ.ಪಿ.ಸಿ:
ದಿನಾಂಕ. 05-10-2017 ರಂದು ಸಂಜೆ 6-00 ಗಂಟೆಗೆ ಹೊಸಪೇಟೆ ರಸ್ತೆಯ ಹೊರವಲಯದಲ್ಲಿರುವ ತಮ್ಮ ಕಾಮಗಾರಿ ನಡೆದ ಮನೆಯಿಂದ ತಮ್ಮ ಟ್ರಾಕ್ಟರ ಚಾಲಕ ಭಿಮಪ್ಪ ತಳವಾರ ಇತನನ್ನು ಮನೆಗೆ ಬಿಟ್ಟು ಬರಲು ತನ್ನ ಮೋಟಾರ್ ಸೈಕಲ್ ನಂಬರ. KA-37/EA-8473 ವಾಹನವನ್ನು ಕೊಟ್ಟು ಅವರ ಆತನ ಸಂಗಡ ತನ್ನ ಅಣ್ಣನ ಮಗ ರಾಜೇಸಾಬ ಮುಜಾವರ ವಯ. 16 ವರ್ಷ ಇತನನ್ನು ಕೂಹಿಸಿದನು. ಬೀಮಪ್ಪ ಇತನು ಮೋಟಾರ್ ಸೈಕಲ್ ಚಲಾಯಿಸಿಕೊಂಡು ಕೊಪ್ಪಳ ನಗರದ ಎನ್.ಹೆಚ್.63 ಹೊಸಪೇಟೆ ರಸ್ತೆಯ ಮೇಲೆ ಮಾತಾ ಹೊಟೆಲ್ ಸಮೀಪ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ವಾಹನವನ್ನು ಸ್ಕಿಡ್ ಮಾಡಿ ಅಪಘಾತಮಾಡಿದ್ದರಿಂದ ಭಿಮಪ್ಪ ತಳವಾರ ಇತನಿಗೆ ತಲೆಯ ಎಡಭಾಗಕ್ಕೆ ರಕ್ತಗಾಯ ಮತ್ತು ಕಾಲುಗಳಿಗೆ ತೆರಚಿದ ಗಾಯಗಳು ಆಗಿದ್ದು ಮೋಟಾರ್ ಸೈಕಲ್ ಹಿಂದೆ ಕುಳಿತ ರಾಜೇಸಾಬ ಇತನಿಗೆ ಸಾದಾ ಸ್ವರೂಪದ ಗಾಯಗಳು ಆಗಿರುತ್ತವೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3] ಯಲಬುರ್ಗಾ  ಪೊಲೀಸ್  ಠಾಣೆ  ಗುನ್ನೆ ನಂ. 111/2017 ಕಲಂ. 279, 304(ಎ) ಐ.ಪಿ.ಸಿ:

ದಿನಾಂಕ; 05-10-2017 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ಮೃತನು ತಮ್ಮ ಸಜ್ಜೆಯನ್ನು ಕೊಪ್ಪಳದಲ್ಲಿ ಮಾರಾಟ ಮಾಡವ ಸಲುವಾಗಿ ಅದೇ ಗ್ರಾಮದ ಆರೋಪಿತನಿಗೆ ಸಂಬಂದಿಸಿದ ಟಾ ಟಾ ಎಸ ನಂ: ಕೆಎ-37/7156 ನೇದ್ದರಲ್ಲಿ ಸಜ್ಜೆಯ ಚೀಲಗಳನ್ನು ಹಾಕಿಕೊಂಡು ಕೊಪ್ಪಳಕ್ಕೆ ಹೋಗುತ್ತಿದ್ದಾಗ, ಚಿಕ್ಕಮ್ಯಾಗೇರಿ ದಾಟಿ, ಬೇವೂರು-ಯಲಬುರ್ಗಾ ರಸ್ತೆಯ ಮೇಲೆ ಆರೋಪಿತನು ತಾನು ನಡೆಸುತ್ತಿದ್ದ ಮೇಲ್ಕಂಡ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನವನ್ನು ನಡೆಸಿಕೊಂಡು ಬಂದು ಚಿಕ್ಕಮ್ಯಾಗೇರಿ ಸೀಮಾದಲ್ಲಿ ಬರುವ ತೆರಪಿನ ಹಳ್ಳದ ಬ್ರಿಜ್ಡ್ ಮೇಲಿದ್ದ ತೆಗ್ಗನ್ನು ಹಾರಿಸಿದ್ದರಿಂದ ವಾಹನವು ಒಮ್ಮಲೇ ಜಂಪ್ ಆಗಿದ್ದರಿಂದ ಸದರಿ ವಾಹನದಲ್ಲಿ ಹಿಂದೆ ಕುಳಿತಿದ್ದ ಫಿರ್ಯಾದಿಯ ಮಗನಾದ ಮೃತ ಮುತ್ತಪ್ಪ ತಂದೆ ಸಿದ್ಧಪ್ಪ ದೇಸಾಯಿ, ವಯ: 19 ವರ್ಷ ಜಾತಿ: ಗಾಣಿಗ ಉ: ಕೂಲಿಕೆಲಸ ಸಾ: ಚಿಕ್ಕಮ್ಯಾಗೇರಿ ತಾ: ಯಲಬುರ್ಗಾ ಈತನು ಒಮ್ಮಲೇ ರಸ್ತೆಯ ಮೇಲೆ ಬಿದ್ದಿದ್ದರಿಂದ ಆತನಿಗೆ ತಲೆಗೆ ಭಾರಿ ಸ್ವರೂಪದ ರಕ್ತಗಾಯ ವಾಗಿ, ಕಿವಿಯಲ್ಲಿ, ಬಾಯಿಯಲ್ಲಿ, ಮೂಗಿನಿಂದ ರಕ್ತ ಬಂದು, ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

0 comments:

 
Will Smith Visitors
Since 01/02/2008