Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Tuesday, November 21, 2017

1] ಕುಕನೂರ  ಪೊಲೀಸ್  ಠಾಣೆ  ಗುನ್ನೆ ನಂ. 168/2017 ಕಲಂ. 87 Karnataka Police Act:
ದಿನಾಂಕ:20-11-2017 ರಂದು 03-30 ಎ.ಎಂ.ಕ್ಕೆ ಪಿ.ಎಸ್.ಐ.ರವರು ಠಾಣೆಗೆ ಹಾಜರಾಗಿ ಆರೋಪಿತರು, ಮುದ್ದೆಮಾಲಿನೊಂದಿಗೆ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯನ್ನು ಲಗತ್ತಿಸಿ ತಮ್ಮ ವರದಿ ನೀಡಿದ್ದರ ಸಾರಾಂಶವೇನೆಂದರೆ, ದಿನಾಂಕ:20-11-2017 ರಂದು 01-55 ಎ.ಎಂ.ಕ್ಕೆ ಆರೋಪಿತರು ಅರಿಕೇರಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 09 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ ಮೇಲೆ ದಾಳಿ ಮಾಡಿ ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಸಿಮೇಂಟ್ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 720=00 ರೂ.ಗಳನ್ನು ಜಪ್ತಿಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ  ಪೊಲೀಸ್  ಠಾಣೆ  ಗುನ್ನೆ ನಂ. 169/2017 ಕಲಂ. 87 Karnataka Police Act:
ದಿನಾಂಕ:20-11-2017 ರಂದು  04-20 ಎ.ಎಂ.ಕ್ಕೆ ಆರೋಪಿತರು ಇಟಗಿ ಗ್ರಾಮದ ಬಜಾರ್ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 03 ಜನ ಆರೋಪಿತರು ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಅವರ ಮೇಲೆ ಪಿ.ಎಸ್.ಐ ಮತ್ತು ಸಿಬ್ಬಂದಿ ಯವರು ದಾಳಿ ಮಾಡಿ ಸದರಿ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಸಿಕ್ಕಿಬಿದ್ದ ಆರೋಪಿತರಿಂದ ಹಾಗೂ ಜೂಜಾಟದ ಕಣದಿಂದ ಒಂದು ಸಿಮೇಂಟ್ ಪ್ಲಾಸ್ಟಿಕ್ ಚೀಲ ಮತ್ತು 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟದ ನಗದು ಹಣ 6,100=00 ರೂ. ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್  ಠಾಣೆ  ಗುನ್ನೆ ನಂ. 166/2017 ಕಲಂ. 34 Karnataka Excise Act:
ದಿನಾಂಕ 20-11-2017 ರಂದು ಫಿರ್ಯಾದಿದಾರರು ಠಾಣೆಯಲ್ಲಿದ್ದಾಗ ಸಂಜೆ 4-30 ಗಂಟೆಯ ಸುಮಾರಿಗೆ  ಚಿಕ್ಕಮಾದಿನಾಳ ಗ್ರಾಮದಲ್ಲಿ ಹನುಮಂತ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ರಸ್ತೆಯಲ್ಲಿ ಒಬ್ಬನು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಕೂಡಲೇ ಠಾಣೆಯಿಂದ ಸಿಬ್ಬಂದಿಯೊಂದಿಗೆ ಹೊರಟು ಹನುಮಂತ ದೇವರ ಗುಡಿಯಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಬೈಕಗಳನ್ನು ನಿಲ್ಲಿಸಿ ಕೆಳಕ್ಕೆ ಇಳಿದು ನಡೆದುಕೊಂಡು ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಂದೆ ಒಂದು ಪ್ಲಾಸ್ಟಿಕ್ ಚೀಲವನ್ನಿಟ್ಟುಕೊಂಡು ಅದರೊಳಗಿನಿಂದ ಮಧ್ಯದ ಪಾಕೀಟುಗಳನ್ನು ತೆಗೆದು ಸಾರ್ವಜನಿಕರಿಂದ ಹಣವನ್ನು ಪಡೆದು ನೀಡುತ್ತಿರುವುದು ಕಂಡು ಬಂದಿದ್ದು ಕೂಡಲೇ ಧಾಳಿ ಮಾಡಿ ಸದರಿ ಆರೋಪಿತನಿಗೆ ಹಿಡಿದು ಪ್ಲಾಸ್ಟಿಕ್ ಚೀಲವನ್ನು ವಶಕ್ಕೆ ಪಡೆದು ಆರೋಪಿತನಿಗೆ ಅದರ ಬಗ್ಗೆ ವಿಚಾರಿಸಿ ಪರಿಶೀಲಿಸಲು ಅದರಲ್ಲಿ  ಒಟ್ಟು 38 ಓರಿಜೀನಲ್ ಚಾಯ್ಸ ಕಂಪನಿಯ 90 ಎಂ.ಎಲ್ ಅಳತೆಯ ಟೆಟ್ರಾ ಪಾಕೀಟುಗಳಿದ್ದು ಪ್ರತಿಯೊಂದರ ಮೇಲೆ ಬೆಲೆ ರೂ, 28.13 ಅಂತಾ ನಮೂದಿಸಿರುತ್ತದೆ. ಒಟ್ಟು ಅಳತೆ 3420 ಎಂ.ಎಲ್ ಮತ್ತು ಒಟ್ಟು ಮೌಲ್ಯ ರೂ, 1068=94 ರೂಪಾಯಿ. ಬೆಲೆಯುಳ್ಳ ಮದ್ಯದ ಟೆಟ್ರಾ ಪಾಕೇಟಗಳನ್ನು ನೇದ್ದನ್ನು ಪಂಚರ ಸಮಕ್ಷಮದಲ್ಲಿ ಆರೋಪಿತನಿಂದ ಜಫ್ತ ಮಾಡಿ ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
4] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 287/2017 ಕಲಂ. 78(3) Karnataka Police Act:
ದಿನಾಂಕ 20-11-2017 ರಂದು 16-45 ಗಂಟೆಗೆ ಆರೋಪಿ ಖಾದರ್ ಬಾಷ ತಂದೆ ನಭಿ ಸಾ: ಪಂಪಾನಗರ ಗಂಗಾವತಿ ಇವನು ಗಂಗಾವತಿಯ ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 380-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 288/2017 ಕಲಂ. 78(3) Karnataka Police Act:
ದಿನಾಂಕ 20-11-2017 ರಂದು 18-45 ಗಂಟೆಗೆ ಆರೋಪಿ ತಿಮ್ಮಣ್ಣ ತಂದೆ ಹೋನ್ನೂರಪ್ಪ ನಾಗಳ್ಳಿ ಸಾ: ಜಯನಗರ ಗಂಗಾವತಿ ಇವನು ಗಂಗಾವತಿಯ ಕಿಲ್ಲಾ ಏರಿಯಾದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 340-00. (02) ಮಟಕಾ ನಂಬರ ಬರೆದ 01 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
6] ಗಂಗಾವತಿ ನಗರ  ಪೊಲೀಸ್  ಠಾಣೆ  ಗುನ್ನೆ ನಂ. 289/2017 ಕಲಂ. 78(3) Karnataka Police Act:

ದಿನಾಂಕ 20-11-2017 ರಂದು 20-30 ಗಂಟೆಗೆ ಆರೋಪಿ ರಾಜಪ್ಪ @ ರಾಜಾಸಾಬ ತಂದೆ ಇಮಾಮ್ ಹುಸೇನ್ ಮಸೀದಿ ಮನೆ ಸಾ: ವಿರುಪಾಪುರ ತಾಂಡ ಗಂಗಾವತಿ ಇವನು ಗಂಗಾವತಿಯ ವಿರುಪಾಪುರದ ಡಾಲ್ಫಿನ್ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಕರೆದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ಚೀಟಿಯನ್ನು ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದಾಗ, ಮಾನ್ಯ ಪಿ.ಐ. ರವರು ಸದರಿಯವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಅವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ (01) ನಗದು ಹಣ ರೂ. 540-00. (02) ಮಟಕಾ ನಂಬರ ಬರೆದ 02 ಮಟ್ಕಾ ಪಟ್ಟಿ ಹಾಗೂ (03) 01 ಬಾಲ್ ಪೆನ್ ದೊರೆತಿದ್ದು. ಸದರಿ ಆರೋಪಿತನ ಹತ್ತಿರ ದೊರೆತ ಮುದ್ದೇಮಾಲನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

0 comments:

 
Will Smith Visitors
Since 01/02/2008