1] ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ: 313/2017. ಕಲಂ: 78(3) Karnataka Police Act.
ದಿನಾಂಕ 09-12-2017
ರಂದು ಸಾಯಂಕಾಲ 5-00 ಗಂಟೆಗೆ ಆರೋಪಿ ಮಂಜುನಾಥ ತಂದೆ ವಿರುಪಾಕ್ಷಯ್ಯ ಹಿರೇಮಠ
ವಯಸ್ಸು 22 ವರ್ಷ ಜಾ: ಜಂಗಮ ಉ: ಎ.ಪಿ.ಎಂ.ಸಿ.ಯಲ್ಲಿ ಖಾಲಿಚೀಲ ಹೊಲೆಯುವ ಕೆಲಸ ಸಾ: ಅಗಡಿ
ಸಂಗಣ್ಣ ಕ್ಯಾಂಪ್, ಗಂಗಾವತಿ ಹಾ:ವ:ಲಿಂಗರಾಜ ಕ್ಯಾಂಪ್, ಗಂಗಾವತಿ ಇವನು ಗಂಗಾವತಿ
ನಗರದ ಕನಕಗಿರಿ
ರಸ್ತೆಯ ಸಿ.ಬಿ.ಎಸ್. ಪೆಟ್ರೋಲ್ ಬಂಕ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಸಾರ್ವಜನಿಕರಿಂದ
ಹಣ ಪಡೆದುಕೊಂಡು ಮಟ್ಕಾ ಚೀಟಿಗಳನ್ನು ಬರೆದುಕೊಡುತ್ತಾ, ಮಟಕಾ ಜೂಜಾಟದಲ್ಲಿ ತೊಡಗಿರುವಾಗ ಸದರಿಯವನ ಮೇಲೆ
ಮಾನ್ಯ ಪಿ.ಐ. ರವರು ಪಂಚರ ಸಮಕ್ಷಮ ಸಂಜೆ 5-00 ಗಂಟೆಗೆ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕ ಜೂಜಾಟದಿಂದ ಸಂಗ್ರಹಿಸಿದ [01] ನಗದು ಹಣ ರೂ 740-00. [02] 01
ಮಟ್ಕಾ ನಂಬರ ಬರೆದ ಪಟ್ಟಿ (03) ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ: 185/2017 ಕಲಂ 87 Karnataka Police Act.
ದಿನಾಂಕ: 09-12-2017 ರಂದು ಸಾಯಂಕಾಲ 5:15 ಗಂಟೆ ಸುಮಾರಿಗೆ ಆರೋಪಿತರು ರಾಜೂರು ಗ್ರಾಮದ
ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಪಣಕ್ಕೆ ಹಣ ಹಚ್ಚಿ ಇಸ್ಪೀಟ್ ಎಲೆಗಳ ಸಹಾಯದಿಂದ
ಅಂದರ್-ಬಾಹರ್ ಎಂಬ ಜೂಜಾಟದಲ್ಲಿ ತೊಡಗಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಡಿ
ಸದರಿ ಆರೋಪಿತರಿಂದ ಇಸ್ಪೇಟ್ ಜೂಜಾಟದ ನಗದು ಹಣ 6490=00 ರೂ. ಒಂದು ಪ್ಲಾಸ್ಟಿಕ್ ಬರಕಾ ಮತ್ತು 52 ಇಸ್ಪೀಟ್ ಎಲೆಗಳು ಇವೆಲ್ಲವೂಗಳನ್ನು ಜಪ್ತ ಪಡಿಸಿಕೊಂಡು ಈ ಬಗ್ಗೆ ಇಸ್ಪೀಟ್ ಜೂಜಾಟದ ದಾಳಿ
ಪಂಚನಾಮೆಯನ್ನು ಪೂರೈಸಿಕೊಂಡು ಬಂದು ಆರೋಪಿತರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಲು ಪಿಎಸ್ಐ ರವರು ವರದಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
3] ಕನಕಗಿರಿ ಪೊಲೀಸ್ ಠಾಣೆ ಗುನ್ನೆ ನಂ: 175/2017 ಕಲಂ 87 Karnataka Police Act.
ದಿನಾಂಕ 09-11-2017 ರಂದು ಸಂಜೆ 4-00 ಗಂಟೆಯಿಂದ
6-00 ಗಂಟೆಯ ಅವಧಿಯಲ್ಲಿ ಠಾಣಾ ವ್ಯಾಪ್ತಿಯ ಕರಡಿ ಗುಡ್ಡ ಸೀಮಾದ ಅರಣ್ಯ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ
ಆರೋಪಿತರು ದುಂಡಾಗಿ ಕುಳಿತು ಅಂದರ-ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ಪೊಲೀಸ್ರು ಹಾಗೂ ಪಂಚರ
ಸಮಕ್ಷಮ ದಾಳಿ ಮಾಡಿ ಹಿಡಿಯಲಾಗಿ, ಜೂಜಾಟ ಆಡುತ್ತಿದ್ದವರ ಪೈಕಿ 2 ಜನರು ಓಡಿ ಹೋಗಿದ್ದು ಉಳಿದ 14
ಜನರು ಸಿಕ್ಕಿದ್ದು, ಸದರಿ 14 ಜನರನ್ನು ಹಾಗೂ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ, ಮೊಬೈಲ್ಗಳು, ಒಂದು
ಕಾರು ಹಾಗೂ ಒಂದು ಮೋ/ಸೈ ಮತ್ತು ಜೂಜಾಟಕ್ಕೆ ಉಪಯೋಗಿಸಿದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತ ಮಾಡಿಕೊಂಡು
ವಾಪಸ್ ಠಾಣೆಗೆ ಬಂದು ಸಿಪಿಐ ರವರು ಕೊಟ್ಟ ವರದಿ ಮೇರೆಗೆ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
0 comments:
Post a Comment