1] ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ: 52/2017. ಕಲಂ: 279, 338 ಐ.ಪಿ.ಸಿ:
ದಿನಾಂಕ. 15-12-2017
ರಂದು ಸಂಜೆ 7-15 ಗಂಟೆಗೆ ಕೊಪ್ಪಳದ
ಕಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ
ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿ ಬಾಲಚಂದ್ರ ಬಂಗಾರೆ ಇವರ ಹೇಳಿಕೆಯನ್ನು
ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ. 15-12-2017 ರಂದು ಸಂಜೆ 5-50
ಗಂಟೆಗೆ ಫಿರ್ಯಾದಿಯು ತಮ್ಮ ಮನೆಯ ಮುಂದೆ ನಿಂತುಕೊಂಡಿರುವಾಗ
ಫಿರ್ಯಾದಿಯ ತಾಯಿ ಶಾಂತಾಬಾಯಿ ಇವರು ನಡೆದುಕೊಂಡು ಮನೆಗೆ ಬರುತ್ತಿರುವಾಗ, ಟಾಟಾ ಏಸ್ ವಾಹನ ನಂಬರ. KA-37/A-4452 ನೆದ್ದರ ಚಾಲಕನು ವಾಹನವನ್ನು ನಿರ್ಲಕ್ಷ್ಯತನದಿಂದ ಹಿಂದಕ್ಕೆ ತೆಗೆದುಕೊಂಡು ಶಾಂತಾಬಾಯಿ
ಇವರಿಗೆ ಟಕ್ಕರಮಾಡಿ ಅಪಘಾತಮಾಡಿದ್ದರಿಂದ ಅವರ ಬಲಕಾಲ ಮೋಣಕಾಲ ಕೆಳಗೆ ಮತ್ತು ಪಾದದ ಹತ್ತಿರ ಭಾರಿ
ರಕ್ತಗಾಯವಾಗಿದ್ದು ಅವರಿಗೆ ನಡೆದಾಡಲು ಬರುತ್ತಿಲ್ಲ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿಯ
ಸಾರಾಂಶದ ಮೇಲಿಂದ ಪ್ರಕರಣವನ್ನು ದಾಖಲುಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
0 comments:
Post a Comment