Our Commitment For Safe And Secure Society

Our Commitment For Safe And Secure Society

This post is in Kannada language.

Visit to our new website which is launched on 15-02-2018 www.koppalpolice.in & www.koppalpolice.in/kan

Wednesday, November 4, 2015

1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ.103/2015 ಕಲಂ.143, 147, 283, 341 ಸಹಿತ 149 ಐ.ಪಿ.ಸಿ:.
ದಿನಾಂಕ 03-11-2015 ರಂದು ಸಂಜೆ 7-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಅಲ್ಲಸಾಬ ತಂದೆ ಅಮೀನಸಾಬ ಗಲಗಲಿ. ವಯ: 36 ವರ್ಷ, ಜಾತಿ: ಮುಸ್ಲಿಂ, : ಲಾರಿ ಚಾಲಕ ಸಾ: ಹೊಂಬಳ ತಾ: ಜಿ: ಗದಗ. ರವರು ಠಾಣೆಗೆ ಹಾಜರಾಗಿ ತಮ್ಮದೊಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಸಾರಾಂಶವೆನೆಂದರೆ. ತಾನು ವಿ.ಅರ್.ಎಲ್. ಟ್ರಾನ್ಸ್ಪೊರ್ಟದಲ್ಲಿ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು ದಿವಸ ಬೇಳಿಗ್ಗೆ 02-30 ಗಂಟೆಗೆ ತಮ್ಮ ಕಂಪನಿಯ ವತಿಯಿಂದ ಒಂದು ಲಾರಿ ನಂ: ಕೆ.-25/7850 ನೆದ್ದನ್ನು ತೆಗೆದುಕೊಂಡು ಅದರಲ್ಲಿ ಪಾರ್ಸಲ್ಗಳಿದ್ದು ಹುಬ್ಬಳ್ಳಿಯಿಂದ ರಾಯಚೂರುಗೆ ಹೋಗುವುದಕ್ಕಾಗಿ ಅಲ್ಲಿಂದ ಬಿಟ್ಟಿದ್ದು ಅಲ್ಲಿ ಇಲ್ಲಿ ವಿಶ್ರಾಂತಿ ಮಾಡುತ್ತಾ ರಾಯಚೂರಿಗೆ ಹೋಗಲು ತಾವರಗೇರಾಕ್ಕೆ ಮದ್ಯಾಹ್ನ 01-00 ಗಂಟೆಗೆ ಬಂದಾಗ ತಾವರಗೇರಾದಲ್ಲಿ ಆರೋಪಿತರೆಲ್ಲರೂ ಕೂಡಿ ತಮಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಅಂತಾ ಧರಣೆ ನಿರತರಾಗಿ ಎಲ್ಲಾ ವಾಹನಗಳನ್ನು ಎಲ್ಲಾ ದಿಕ್ಕಿನಿಂದ ಬಂದ್ಮಾಡಿ ಧರಣೆ ನಡೆಸುತ್ತಿದ್ದು ಸದರಿಯವರು 12-30 ಗಂಟೆಯಿಂದ ಸಂಜೆ 06-00 ಗಂಟೆಯವರೆಗೆ ಯಾವುದೇ ವಾಹನಗಳನ್ನು ಯಾವ ಕಡೆಗೂ ಬಿಡದೇ ತಡೆದು ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದು ಇರುತ್ತದೆ. ಅಂತಾ ವಗೈರೆ ಫಿರ್ಯಾದಿ ಯಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ.  
2) ಸಂಚಾರ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 60/2015  ಕಲಂ 279, 337  ಸಹಿತ 187 ಐ.ಪಿ.ಸಿ:.
ದಿನಾಂಕ 03-11-2015 ರಂದು ಸಂಜೆ 6-00 ಗಂಟೆಗೆ ಕೊಪ್ಪಳದ ಕಿಮ್ಸ ಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಹೋಗಿ ಅಪಘಾತದಲ್ಲಿ ಗಾಯಗೊಂಡ ಗಾಯಾಳುವಿಗೆ ಚಿಕಿತ್ಸೆ ಕೊಡಿಸುತ್ತಿರುವ ಫಿರ್ಯಾದಿಯ ಹೇಳಿಕೆಯನ್ನು ಪಡೆದುಕೊಂಡಿದ್ದು ಅದರ ಸಾರಾಂಶವೆನೆಂದರೆ, ಇಂದು ದಿನಾಂಕ 03-11-2015 ರಂದು ಸಂಜೆ 5-30 ಗಂಟೆಗೆ ತನ್ನ ಸ್ನೇಹಿತ ಸಂತೋಷ ವರನ್ನು ತನ್ನ ಮೋಟಾರ್ ಸೈಕಲ್ ಹಿಂದೆ ಕೂಡಿಸಕೊಂಡು ತಮ್ಮ ಮನೆಗೆ ಹೋಗಲು ಕೊಪ್ಪಳ ನಗರದ ಸಾಲರಜಂಗ್ ರಸ್ತೆಯ ಮೇಲೆ ಬಾಲಕಿಯರ ಶಾಲೆಯ ಸಮೀಪ ಹೊಗುತ್ತಿರುವಾಗ, ರಸ್ತೆಯ ಬಲಗಡೆಗೆ ಸಂತೋಷ ಇವರ ಅಜ್ಜ ಪರಮೇಶ್ವರಪ್ಪ ಇವರು ನಡೆದುಕೊಂಡು ಹೊಗುತ್ತಿರುವಾಗ ನಮ್ಮ ಎದುರುಗಡೆಯಿಂದ ಒಬ್ಬ ಮೋಟಾರ್ ಸೈಕಲ್ ಸವಾರನು ತಾನು ಚಲಾಯಿಸುತ್ತಿರುವ ಮೋಟಾರ್ ಸೈಕಲ್ ವಾಹನವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪರಮೇಶ್ವರಪ್ಪ ಇವರಿಗೆ ಟಕ್ಕರಮಾಡಿ ಅಪಘಾತಮಾಡಿದನು ಇದರಿಂದ ಪರಮೇಶ್ವರಪ್ಪ ಇವರು ಕೆಳಗೆ ಬಿದ್ದರು. ನಂತರ ಫಿರ್ಯಾದಿದಾರು ಮೋಟಾರ್ ಸೈಕಲ್ ನಿಲ್ಲಿಸಿ ಪರಮೇಶ್ವರಪ್ಪ ಇವರ ಹತ್ತಿರ ಹೋಗಿ ಮೇಲೆ ಎಬ್ಬಿಸಿ ನೋಡಲು ಇದರಿಂದ ಅವರಿಗೆ ತಲೆಯ ಬಲಗಡೆ, ಬಲಕಣ್ಣಿಗೆ, ಬಲಕೈಗೆ ತೆರಚಿದ ಗಾಯಗಳು ಬಲಚಪ್ಪೆಗೆ ಒಳಪೆಟ್ಟು ಆಗಿದ್ದು ಇರುತ್ತದೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
3) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 247/2015  ಕಲಂ 409, 420 ಐ.ಪಿ.ಸಿ:.
ದಿನಾಂಕ:- 03-11-2015 ರಂದು 19-00 ಗಂಟೆಗೆ ಮಾನ್ಯ ಡಿ.ಎಸ್.ಪಿ. ಗಂಗಾವತಿ ರವರ ಕಾರ್ಯಾಲಯದಿಂದ ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 208/15 ಕಲಂ 409, 420 ಐ.ಪಿ.ಸಿ. ಪ್ರಕರಣವು ಹದ್ದಿ ಪ್ರಯುಕ್ತ ವರ್ಗಾವಣೆಗೊಂಡು ಬಂದಿರುತ್ತದೆ.  ಸದರಿ ಫಿರ್ಯಾದಿಯನ್ನು ಶ್ರೀ ಸಂಗಮೇಶ ತಂದೆ ನೂರಂದಯ್ಯ ಮಠ, ಕಾರ್ಯಾ ನಿರ್ವಾಹಕ ಅಧಿಕಾರಿಗಳು, ಗಂಗಾವತಿ ಇವರು ನೀಡಿದ್ದು ಫಿರ್ಯಾದಿ ಸಾರಂಶವೇನೆಂದರೆ,  ಶ್ರೀ ಮಂಜುನಾಥ ತಂದಿ ಸುಭಾಸಚಂದ್ರ ಅಂಗಡಿ ಇವರು ಮೂಲತಃ ಕೃಷಿ ಇಲಾಖೆಯ ಅಧಿಕಾರಿಗಳಾಗಿದ್ದು ನಮ್ಮ ಇಲಾಖೆಗೆ ನಿಯೋಜನೆಯ ಮೇರೆಗೆ ಬಂದು ದಿ-28-02-14 ರಿಂದ ದಿ-23-04-15 ರ ವೆರೆಗೆ ಪ್ರಭಾರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಂತಾ ಹುಳ್ಕಿಹಾಳ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ನಂತರ ಮಾನ್ಯ ಜಂಟಿ ನಿರ್ದೇಶಕರು ಕೊಪ್ಪಳ ರವರ ಆದೇಶದ ಮೇರೆಗೆ ದಿ-24-04-15 ರಂದು ನಮ್ಮ ಇಲಾಖೆಯ ಪಿ.ಡಿ.ಓ ಹುದ್ದೆಯಿಂದ ಬಿಡುಗಡೆಗೊಳಿಸಿ ಅವರ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶ ಮಾಡಿದ್ದು ಸದರಿ ಮಂಜುನಾಥ ರವರು ದಿ24-04-15 ರಂದು ನಮ್ಮ ಇಲಾಖೆಯಿಂದ ಬಿಡುಗಡೆಗೊಂಡ ನಂತರದ ದಿನಗಳಲ್ಲಿ ದಿ-19-05-15 ರಿಂದ ದಿ-15-06-15 ರ ಅವಧಿಯಲ್ಲಿ ''ಸ್ವಚ್ಚ ಭಾರತ್ ಮೀಷನ್'' ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ನಿಗದಿತ ಮಾರ್ಗಸೂಚಿಯಾದ ಆರ್.ಟಿ.ಜಿ.ಎಸ್ ಮೂಲಕ ಅಥವಾ ಕ್ರಾಸ್ ಚೆಕ್ ಮೂಲಕ ಫಲಾನುಭವಿಗಳ ಖಾತೆಗೆ ಹಣವನ್ನು ಪಾವತಿಸದೇ ಮತ್ತು ಸ್ಥಳಿಯ ಮರ್ಲಾನಹಳ್ಳಿಯಲ್ಲಿಯೇ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಇದ್ದರೂ ಕೂಡಾ ಗಂಗಾವತಿಯ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಒಟ್ಟು ರೂ.20,76,810/-ಗಳನ್ನು ಬೇನಾಮಿ ಹೆಸರಿನಲ್ಲಿ ಡ್ರಾ ಮಾಡಿದ್ದು ಸದರಿ ಮಂಜುನಾಥನು ದಿಃ-19-05-15 ರಿಂದ ದಿಃ-15-06-15 ರ ಅವಧಿಯಲ್ಲಿ ಹುಳ್ಕಿಹಾಳ ಗ್ರಾ.ಪಂ ಪಿ.ಡಿ.ಓ ಅಧಿಕಾರದಲ್ಲಿ ಇಲ್ಲದಿದ್ದಾಗ್ಯೂ ಅಧಿಕಾರ ದೂರುಪಯೋಗ ಪಡಿಸಿಕೊಂಡು ಇಲಾಖೆಗೆ ಮೋಸ ಮಾಡಿರುತ್ತಾನೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಪಿರ್ಯಾದಿಯ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ. ಕಾರಣ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ಇದ್ದ ದೂರಿನ ಆಧಾರದ ಮೇಲಿಂದ ಪ್ರಕರಣ ದಾಖಲು ಮಾಡಿದ್ದು ಇರುತ್ತದೆ.
4) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 226/2015  ಕಲಂ 379 ಐ.ಪಿ.ಸಿ:.

ದಿನಾಂಕ: 03-11-2015 ರಂದು ಮುಂಜಾನೆ 10-15 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ತಮ್ಮ ನುಡಿ ಹೇಳಿಕೆ ನೀಡಿ ಗಣಕೀಕರಣ ಮಾಡಿಸಿದ ಪಿರ್ಯಾದಿ ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ:  28-10-2015 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ಹುಲಗಿಯ ಹೊಳೆಯಲ್ಲಿ ಸ್ನಾನ ಮಾಡುವ ಸಲುವಾಗಿ ತಮ್ಮ ವಸ್ತುಗಳನ್ನು ಮತ್ತು ತಮ್ಮ ಶ್ರೀಮತಿಯ 5 ತೊಲೆ ಬಂಗಾರದ ತಾಳಿಯನ್ನು ಅವರ ಮಗನ ಪ್ಯಾಂಟಿನ ಜೇಬಿನಲ್ಲಿಟ್ಟು ಹೊಳೆಯ ದಂಡೆಯ ಮೇಲಿಟ್ಟು ಸ್ನಾನ ಮಾಡಿಕೊಂಡು ವಾಪಸ್ ಬರುವಷ್ಟರಲ್ಲಿ ಎಲ್ಲಾ ವಸ್ತುಗಳನ್ನು ಬಿಟ್ಟು ಅವರ ಮಗನ ಪ್ಯಾಂಟ ಮತ್ತು ಅದರಲ್ಲಿದ್ದ 5 ತೊಲೆ ಬಂಗಾರದ ತಾಳಿ ಅಂ.ಕಿ. ಹಳೇ ಲೆಕಕ್ಕೆ 49000-00 ಬೆಲೆ ಬಾಳುವ ಬಂಗಾರದ ಆಭರಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 226/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  

Tuesday, November 3, 2015

1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ.117/2015 ಕಲಂ.302 ಐ.ಪಿ.ಸಿ:.
ದಿನಾಂಕ: 02-11-2015 ರಂದು ಜಾಹಗೀರಗುಡದೂರ ಗ್ರಾಮದ ಚೋಳಪ್ಪ ಈತನಿಗೆ ಯಾರೋ ಕೊಡಲಿಯಿಂದ ತಲೆಗೆ ಕಡಿದಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಹೆಚ್.ಸಿ-11, ಪಿ.ಸಿ-162 ರವರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಲು ಅಲ್ಲಿಂದ ಗಾಯಾಳು ಚೋಳಪ್ಪನನ್ನು 108 ಅಂಬ್ಯುಲೆನ್ಸ್ ದಲ್ಲಿ ಉಪಚಚಾರ ಕುರಿತು ಬಾಗಲಕೋಟೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ತಿಳಿದ ಮೇರೆಗೆ ಬಾಗಲಕೋಟೆಗೆ ಮದ್ಯಾಹ್ನ 03-45 ಗಂಟೆಗೆ ಹೋಗಲು ಚೋಳಪ್ಪನು ಮೃತಪಟ್ಟಿದ್ದು; ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ಹಾಕಿರುತ್ತದೆ. ನಂತರ ಫಿರ್ಯಾದಿದಾರರು 07-00 ಗಂಟೆಗೆ ಲಿಖಿತ ಫಿರ್ಯಾದಿಯನ್ನು ಬಾಗಲಕೋಟ ಸರಕಾಗಿ ಆಸ್ಪತ್ರೆಯಲ್ಲಿ ಹಾಜರಪಡಿಸಿದ್ದು ವಾಪಸ್ ಠಾಣೆಗೆ 21-00 ಗಂಟೆಗೆ ಬಂದಿದ್ದು ಫಿರ್ಯಾದಿ ಸಾರಾಂಶವೇನೆಂದರೆ, ಫಿರ್ಯಾದಿದಾರರು ಇಂದು ಮುಂಜಾನೆ ತಮ್ಮ ಸಂಬಂಧಿಕರಾದ ಯಮನೂರಪ್ಪ ಗೊಡೇಕಾರ ರವರ ಮಗನಿಗೆ ಕನ್ಯಾ ನೋಡಲು ಮನೆಯಲ್ಲಿ ತನ್ನ ಗಂಡನಿಗೆ ಹಾಗೂ ಮಕ್ಕಳಿಗೆ ಊರ ಮುಂದಿನ ಹೊಲದಲ್ಲಿ ಮೆಕ್ಕೆಜೋಳದ ರಾಶಿಯನ್ನು ನೋಡಿಕೊಳ್ಳಲು ಹೇಳಿ ಮುಂಜಾನೆ 09-00 ಗಂಟೆಗೆ ಒಂದು ಖಾಸಗಿ ವಾಹನದಲ್ಲಿ ಹೊರಟು ಇಬ್ರಾಹಿಮಪುರಕ್ಕೆ ಹೋಗಿದ್ದು; ಅಲ್ಲಿ ಕಾರಣ ನಡೆಯುವಾಗ ಮದ್ಯಾಹ್ನ 12-10 ಗಂಟೆಯ ಸುಮಾರಿಗೆ ಫಿರ್ಯಾದಿ ಸಂಗಡ ಹೋದ ಮಹಿಬೂಬಸಾಬ ಮುಲ್ಲಾರವರ ಫೋನಿಗೆ ಊರಿಂದ ತಿಳಿಸಿದ್ದೆನೆಂದರೆ, ಫಿರ್ಯಾದಿ ಗಂಡ ಚೋಳಪ್ಪನು ತಮ್ಮ ಹೊಲದ ಮನೆಯಲ್ಲಿ ರಾಶಿ ಕಾಯುತ್ತಾ ಮಲಗಿದಾಗ ಯಾರೋ ದುಶ್ಕರ್ಮಿಗಳು ಕೊಡಲಿಯಿಂದ ತಲೆಗೆ ಕಡೆದು ರಕ್ತ ಗಾಯ ಮಾಡಿದ್ದು, ಆತನನ್ನು ಉಪಚಾರ ಕುರಿತು 108 ಆಂಬ್ಯುಲೆನ್ಸ್ ದಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದರು. ನಂತರ ಫಿರ್ಯಾದಿದಾರರು ಅಲ್ಲಿಂದ ಬಾಗಲಕೋಟೆಗೆ ಬಂದು ನೋಡಲು ಚೋಳಪ್ಪನು ಮೃತಪಟ್ಟಿದ್ದು, ಬಲಗಣ್ಣಿನ ಹುಬ್ಬಿನಿಂದ ಹಣೆಗೆ ಕಡೆದಿದ್ದು ಮತ್ತು ಬಲತಲೆಗೆ ಬಲವಾಗಿ ಕಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಈ ಬಗ್ಗೆ ಫಿರ್ಯಾದಿಯು ತನ್ನ ಚಿಕ್ಕಪ್ಪನನ್ನು ವಿಚಾರಿಸಲು ಆತನು ತಿಳಿಸಿದ್ದೇನೆಂದರೆ, ಚೋಳಪ್ಪನು ತೋಟದ ಮನೆಗೆ ಮಲಗಿದಾಗ ಯಾರೋ ದುಶ್ಕರ್ಮಿಗಳು ಕೊಡಲಿಯಿಂದ ತಲೆಗೆ ಕಡೆದು ಕೊಡಲಿ ಬಿಸಾಕಿ ಹೋಗಿದ್ದು ಅದನ್ನು ತಿಳಿದು ಅಲ್ಲಿಗೆ ಹೋಗಿ ನೋಡಿದಾಗ ಜೀವಂತ ಇದ್ದು ಗೊರ್ರ ಗೊರ್ರ ಎಂದು ರಕ್ತ ಸೋರುತ್ತಿದ್ದು, ಮಾತನಾಡುವ ಸ್ಥಿತಿಯಲ್ಲಿ ಇರದೇ ಇರುವುದರಿಂದ ತಾನು ಹಾಗೂ ತಮ್ಮ ಗ್ರಾಮದವರು ಬಾಗಲಕೋಟೆಗೆ ಹೊರಟಾಗ ಬಾಗಲಕೋಟ ರೇಲ್ವೇ ಗೇಟ್ ಹತ್ತಿರ ಮೃತಪಟ್ಟಿದ್ದು, ನಂತರ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿ ಹಾಕಿದ್ದು ಇರುತ್ತದೆ. ಸದರಿ ಚೋಳಪ್ಪನನ್ನು ಯಾರೋ ದುಶ್ಕರ್ಮಿಗಳು ಯಾವುದೋ ದುರುದ್ದೇಶದಿಂದ ಕೊಡಲಿಯಿಂದ ತಲೆಗೆ ಬಲವಾಗಿ ಕಡೆದು ಕೊಲೆ ಮಾಡಿದ್ದು ಅಂತಾ ಮುಂತಾಗಿ ಫಿರ್ಯಾದಿ ಇರುತ್ತದೆ.
2) ಕೊಪ್ಪಳನಗರ ಪೊಲೀಸ್ ಠಾಣೆ ಗುನ್ನೆ ನಂ. 214/2015  ಕಲಂ 306 ಸಹಿತ 34 ಐ.ಪಿ.ಸಿ:.
ದಿ: 02-11-2015 ರಂದು ಸಾಯಂಕಾಲ 6-15 ಗಂಟೆಗೆ ಫಿರ್ಯಾದಿ ಶಂಭುಲಿಂಗಪ್ಪ ಕೌಜಗೇರಿ ಸಾ: ಕೊಪ್ಪಳ ಇವರು ಠಾಣೆಗೆ ಹಾಜಾರಿಗ ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಅಣ್ಣ ಮೃತ ಶಿವಪ್ಪನಿಗೆ ಹೆಚ್ಚಿಗೆ ದುಡಿದು ಇನ್ನೂ ಹೆಚ್ಚಿನ ಹಣ ತೆಗೆದುಕೊಂಡು ಬರುವಂತೆ ಆತನ ಹೆಂಡತಿ ನಿರ್ಮಲಾ ಹಾಗೂ ಅವಳ ತಾಯಿ ಗಂಗಮ್ಮ ಹಾಗೂ ಅವಳ ಮಾವ ಮಲ್ಲಪ್ಪ, ಲೋಕೇಶ ಇವರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸಿ ಅವರ ಕಿರಿಕಿರಿಯಿಂದ ಮನನೊಂದು ದಿ : 02-11-2015 ರಂದು ಮಧ್ಯಾಹ್ನ 3-00 ಗಂಟೆಗೆ ಕೊಪ್ಪಳ ನಗರದ ಗಡಿಯಾರ ಕಂಬದ ಹತ್ತಿರ ಕುಸಿದು ಬಿದ್ದು, ನಂತರ ಉಪಚಾರ ಫಲೀಸದೇ ಜಿ.ಎಸ್.ಆರ್. ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ನನ್ನ ಅಣ್ಣ ಶಿವಪ್ಪನು ಅವನ ಹೆಂಡತಿ ನಿರ್ಮಲಾ, ಅವಳ ತಾಯಿ ಗಂಗಮ್ಮ, ಅವಳ ಮಾವ ಮಲ್ಲಪ್ಪ ಲೋಕೇಶ ಇವರ ಪ್ರಚೋದನೆಯಿಂದ ಸಾವು ಸಂಭವಿಸಿದ್ದು ಕಾರಣ ಅವರ ಮೇಲೆ ಕಾನೂನು ಕ್ರಮ ಲೈಗೊಳ್ಳುವಂತೆ ನೀಡಿದ ದೂರಿನ ಮೇಲಿಂದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 224/2015  ಕಲಂ 379 ಐ.ಪಿ.ಸಿ:.
ದಿನಾಂಕ: 02-11-2015 ರಂದು ಮದ್ಯಾಹ್ನ 1-30 ಗಂಟೆಗೆ ಪಿರ್ಯದಿದಾರರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತ ಮಾಡಿದ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಅದರ ಸಾರಾಂಶವೇನಂದರೆ, ದಿನಾಂಕ: 27-10-2015 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಹುಲಗಿಯ ಶ್ರೀ ಹುಲಿಗೆಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿರುವ ಹುಂಡಿಯಲ್ಲಿ ಹಣ ಹಾಕುವ ಸಮಯದಲ್ಲಿ ಪಿರ್ಯಾದಿದಾರರ ಕುತ್ತಿಗೆಯಲ್ಲಿನ ಅಂದಾಜು 45,000-00 ರೂ. ಬೆಲೆ ಬಾಳುವ 3 ತೊಲೆ ಬಂಗಾರದ ಸರವನ್ನು ಯಾರೋ ಕಟ್ ಮಾಡಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 224/2015 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


Monday, November 2, 2015

1) ಮುನಿರಾಬಾದಪೊಲೀಸ್ ಠಾಣೆ ಗುನ್ನೆ ನಂ.223/2015 ಕಲಂ.87 Karnatka Police Act:.
ದಿನಾಂಕ.01-11-2015 gÀAzÀÄgÁwæ 10-45 UÀAmÉ ¸ÀĪÀiÁjUÉEAzÀjV ¹ÃªÀiÁzÀ ºÀ£ÀĪÀÄAvÀ¥Àà ¥ÀÆeÁjEªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ°è DgÉÆÃ¦vÀgÀÄಇಸ್ಪೇಟ ಜೂಜಾಟ ಆಡುತ್ತಿರುವಾಗ ಕಾಲಕ್ಕೆ ಫಿರ್ಯಾದಿದಾರರಾದಶ್ರೀ.ಜಯಪ್ರಕಾಶಪಿ.ಎಸ್.ಐ. ಮುನಿರಾಬಾದ ಹಾಗೂ ಸಿಬ್ಬಂದಿಯವರು ಪಂಚರೊಂದಿಗೆ ದಾಳಿ ಮಾಢಿ ಇಸ್ಪೇಟ ಜೂಜಾಟ ಆಡುತ್ತಿರುವ ಆರೋಪಿತರಿಂದ ಒಂದು ಬರಕಾ, 52 ಇಸ್ಪೇಟ ಎಲೆಗಳು ಮತ್ತು ಜೂಜಾಟದ ನಗದು ಹಣ 8110=00 ರೂ. ಗಳನ್ನು ಜಪ್ತ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾದಿ ನೀಡಿದ್ದರಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
2) ಕೊಪ್ಪಳನಗರ ಪೊಲೀಸ್ ಠಾಣಾ ಗುನ್ನೆ ನಂ. 213/2015  ಕಲಂ 143, 147, 341, 504, 186 ಸಹಿತ 149 ಐ.ಪಿ.ಸಿ:.
ದಿ: 01-11-2015 ರಂದುಮಧ್ಯಾಹ್ನ 2-00 ಗಂಟೆಗೆಫಿರ್ಯಾಧಿಶ್ರೀಎಸ್.ಎಸ್. ಪಾಟೀಲ ಪಿ.. ನಗರ ಠಾಣೆ ಕೊಪ್ಪಳ ರವರು ನೀಡಿದ ಗಣಕೀಕೃತ ದೂರಿನ ಸಾರಾಂಶವೇನೆಂದರೆ, ಇಂದುದಿ: 01-11-2015 ರಂದುಮುಂಜಾನೆ 10-00 ಗಂಟೆಯಿಂದ 12-30 ಗಂಟೆಯ ವರೆಗೆ ಕೊಪ್ಪಳ ನಗರದ ಗದಗ ರಸ್ತೆ ಗೌರಿ ಶಂಕರ ದೇವಸ್ಥಾನದ ಹತ್ತಿರ ಎನ್.ಎಚ್.-63 ರಸ್ತೆಯ ಮೇಲೆ ಕೊಪ್ಪಳ ದೂಳು ಮುಕ್ತ ಹೋರಾಟ ಸಮೀತಿ ಹಾಗೂ ಇನ್ನಿತರೆ ಪ್ರಗತಿ ಪರಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಕಾಲಕ್ಕೆ ಅಕ್ರಮಕೂಟ ರಚಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಯನ್ನು ಬಂದ್ಮಾಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಇತರೆ ಇಲಾಖೆಯ ಅಧಿಕಾರಿಗಳ ವಾಹನಗಳನ್ನು ತಡೆದು ದಿಕ್ಕಾರ ಕೂಗುತ್ತಾ ಸಾರ್ವಜನಿಕ ವಾಹನಗಳನ್ನು ತಡೆದು ಸಂಚಾರಕ್ಕೆ ತೀವ್ರತೊಂದರೆಯನ್ನುಂಟು ಮಾಡಿದ್ದು ಅಲ್ಲದೆ ನಮ್ಮ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ರಸ್ತೆಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡಿದ್ದು ಇರುತ್ತದೆ. ಕಾರಣ ಸದರಿ ಕಾರ್ಯಕರ್ತರ ಮೇಲೆ ಕಾನೂನುಕ್ರಮ ಜರುಗಿಸುವಂತೆ ನೀಡಿದದೂರಿನ ಪ್ರಕಾರಪ್ರ ಕರಣ ದಾಖಲಿಸಿಕೊಂಡು ತನಿಖೆಕೈ ಗೊಂಡಿದ್ದುಅದೆ.
3) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 116/2015  ಕಲಂ 454, 457, 380 ಐ.ಪಿ.ಸಿ:.
ದಿನಾಂಕ: 01-11-2015ರಂದು ಮದ್ಯಾಹ್ನ 13-30 ಗಂಟೆಗೆ ಫಿರ್ಯದಿದಾರರಾದ ಶ್ರೀಕರಿ ಶಿದ್ದಪ್ಪ ತಂದೆ ಶಿವಪ್ಪ ಕುಷ್ಟಗಿ ಸಾ: ಹನಮಾಸಾಗರರವರು ಠಾಣೆಗೆ ಹಾಜರಾಗಿ ಲಿಖಿತ ಫೀರ್ಯಾದಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ತಮ್ಮ ಸೊಸೆ ಜ್ಯೋತಿ ರವರ ಹೆಸರಿಲೆ ಇರುವ ಅನ್ನದಾನೇಶ್ವರ ಇಂಡಿಯ ನ್ಗ್ರಾಮೀಣಗ್ಯಾಸ್ವಿ ತಕರಾರುಇದ್ದು, ಆಫೀಸ ಹನುಮಸಾಗರ ಕುಷ್ಟಗಿ ಸರ್ಕಲ್ಹತ್ತಿರ ಇರುತ್ತದೆ. ಆಫೀಸನ್ನು ನಿನ್ನೆ ದಿನಾಂಕ: 31-10-2015 ರಂದು ಸಂಜೆ 07-00 ಗಂಟೆಗೆ ಬಂದ್ಮಾಡಿ ಹೊರಗಡೆ ಲೈಟ್ಹಾಕಿ ಮನೆಗೆ ಹೋಗಿ ಇಂದು ದಿನಾಂಕ: 01-11-2015 ರಂದುಬೆಳಿಗ್ಗೆ 10-00  ಗಂಟೆಗೆ ಆಫೀಸಿನ ಲೇಟ್ತೆಗೆ ಯ ಲುಫಿರ್ಯಾದಿದಾರರು ಹೋದಾಗ ಅಲ್ಲಿಆಫೀಸಿನ ಬೀಗ ಇರಲಿಲ್ಲ ಏನಾಯಿತು ಅಂತಾ ನೋಡಲು ಕೊಂಡಿ ಮುರಿದು ಅಲ್ಲಿ ಒಂದು ಕಲ್ಲು ಬಿದ್ದಿದ್ದು, ಬೀಗ ಇರದೇ ಇದ್ದಾಗ ಗಾಭರಿಯಾಗಿ ಒಳಗೆ ಹೋಗಿ ನೋಡಲು ಆಫೀಸಿಗೆ ಉಪಯೋಗಿಸುತ್ತಿದ್ದ 1] ಡೆಲ್ಕಂಪನಿಯಒಂದುಮಾನಿಟರ್, ಒಂದು ಸಿ,ಪಿ.ಯು ಇವುಗಳ ಒಟ್ಟು ಅಂ.ಕಿ: 55000=00 2] ಎಲ್.ಜಿ ಕಂಪನಿಯ ಒಂದು ಮಾನಿಟರ್, ಒಂದು ಸಿ,ಪಿ.ಯು ಇವುಗಳ ಒಟ್ಟು ಅಂ.ಕಿ: 45000=00  3] ಒಂದು ಸೂರ್ಯ ಕಂಪನಿಯ 6 ಗ್ಯಾಸ್ ಒಲೆಗಳು ಅವುಗಳ ಒಟ್ಟುಅಂ:ಕಿ: 11850=00 ಹೀಗೆಒಟ್ಟು 4] ಡೆಲ್ಕಂಪನಿಯ ಒಂದು ಲ್ಯಾಪಟಾಪ್ ಇದರ ಅಂ.ಕಿ: 22000/-  ಹೀಗೆ ಒಟ್ಟು ಅಂ.ಕಿ 1,33,850/- ರೂ/- ಬೆಲೆ ಬಾಳುವ ಸಾಮಾನುಗಳು ಯಾರೋ ಕಳ್ಳರು ಆಫೀಸಿ ನಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋಗಿದ್ದು ನಂತರತಮ್ಮಮಹಾಂತೇಶನಿಗೆ ಫೋನ್ಮಾಡಿ ವಿಷಯ ತಿಳಿಸಿ ಇಂದು ಭಾನುವಾರ ಆಗಿದ್ದ ರಿಂದ ಯಾರೂ ಕೆಲಸಗಾರರು ಆಫೀಸಿಗೆ ಬಂದಿರುವುದಿಲ್ಲ. ನಂತರ ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆ ಗೆ ಬಂದು ಫಿರ್ಯಾದಿ ಅರ್ಜಿ ನೀಡಿದ್ದು ಇರುತ್ತದೆ.
4) ಗಂಗಾವತಿಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 329/2015  ಕಲಂ 279, 338ಐ.ಪಿ.ಸಿ:.
ದಿನಾಂಕ: 01-110-2015 ರಂದು ಸಂಜೆ 6:00 ಗಂಟೆಗೆ ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮದಿಂದ ಆರ್.ಟಿ.ಎ. ಬಗ್ಗೆ ಎಂ.ಎಲ್.ಸಿ. ಸ್ವೀಕೃತವಾಗಿದ್ದು ಆಸ್ಪತ್ರೆಗೆ ಬೇಟಿ ಕೊಟ್ಟು ಗಾಯಾಳು ಶ್ರೀ ಶರಣಬಸವರಾಜ ಹೆಚ್.ಎಂ. ತಂದೆ ಚೆನ್ನಬಸಯ್ಯ ಡಿ.ಎಂ. ವಯಸ್ಸು: 41 ವರ್ಷ ಜಾತಿ: ಜಂಗಮ, ಉ: ಖಾಸಗಿ ಶಿಕ್ಷಕರು ಸಾ: ವಿಶ್ವೇಶ್ವರ ನಗರ ಕಪಗಲ್ ರೋಡ 5ನೆ ಅಡ್ಡ ರಸ್ತೆ ಬಳ್ಳಾರಿ ಇವರ ನುಡಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶ ಈ ಪ್ರಕಾರ ಇರುತ್ತದೆ ನಿನ್ನೆ ದಿನಾಂಕ: 31-10-2015 ರಂದು ಸಂಜೆ 5:30 ಗಂಟೆಯ ಸುಮಾರಿಗೆ ನಮ್ಮ ಸಂಭಂದಿಯಾದ ಹೆಚ್.ಎಂ. ಶಿವಾನಂದಸ್ವಾಮಿ ಎಂಬುವರ ಮನೆ ಪ್ರವೇಶಕ್ಕಾಗಿ ಸ್ವಾಮಿಗಳನ್ನು ಕರೆಯಲು ನಾನು ಮತ್ತು ನಮ್ಮ ಸಂಭಂದಿ ಹೆಚ್.ಎಂ. ಶಿವಲಿಂಗಯ್ಯ ತಂದೆ ರುದ್ರಯ್ಯ 55 ವರ್ಷ ಇಬ್ಬರೂ ಕೂಡಿ ಅವರ ಹೊಂಡಾ ಶೈನ್ ಮೋಟಾರ ಸೈಕಲ ನಂ: ಕೆ.ಎ-37/ಆರ್-8310 ನೇದ್ದರಲ್ಲಿ ಹೆಬ್ಬಾಳದಿಂದ ಗಂಗಾವತಿಗೆ ಬರುತ್ತಿರುವಾಗ ಆಚಾರನರಸಾಪೂರ ಗ್ರಾಮ ಸೀಮಾದಲ್ಲಿ ಸಂಜೆ 5:30 ಗಂಟೆಯ ಸುಮಾರಿಗೆ ಮೋಟಾರ ಸೈಕಲನ್ನು ಹೆಚ್.ಎಂ. ಶಿವಲಿಂಗಯ್ಯ ಇವರು ಅತೀವೇಗ ಹಾಗೂ ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬರುತ್ತಿರುವಾಗ ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ವೇಗವನ್ನು ನಿಯಂತ್ರಸಲು ಆಗದೇ ಒಮ್ಮಲೇ ಸ್ಕಿಡ್ಡಾಗಿ ಬಿದ್ದಿದ್ದು ಇರುತ್ತದೆ. ಇದರಿಂದಾಗಿ ಮೋಟಾರ ಸೈಕಲ ಹಿಂಬಾಗದಲ್ಲಿ ಕುಳಿತುಕೊಂಡಿದ್ದ ನಾನು ಒಮ್ಮಲೇ ಬಲಗೈಯನ್ನು ರಸ್ತೆಯ ಮೇಲೆ ಊರಿದಾಗ ಬಲಗೈ ಅಂಗೈಗೆ ತೀವ್ರ ಒಳಪಟ್ಟಾಗಿ ಎಡಗೈ ಮುಂಗೈ ಹಾಗೂ ಎಡಗಾಲು ಮೊಣಕಾಲಿಗೆ ತೆರಚಿದ ಗಾಯಗಳಾಗಿದ್ದು ಇರುತ್ತದೆ. ನಂತರ ವಿಷಯವನ್ನು ನಮ್ಮ ಸಂಭಂದಿಕರಿಗೆ ತಿಳಿಸಿದಾಗ ಅವರು ಬಂದು ನನ್ನ ಚಿಕತ್ಸೆ ಕುರಿತು ಗಂಗಾವತಿಯ ಡಾ: ಮಲ್ಲಿಕಾರ್ಜುನ ನರ್ಸಿಂಗ್ ಹೋಮಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ನಿನ್ನೆ ದಿವಸ ವೈಧ್ಯರು ಅಪರೇಷನ ಮಾಡಲು ತಿಳಿಸಿದ್ದರಿಂದ ಅಪರೇಷನ್ ಮಾಡಿಸಿಕೊಂಡು ಮನೆಯಲ್ಲಿ ತಿಳಿಸಿ ವೈಧ್ಯರಿಗೆ ಈ ದಿವಸ ಎಂ.ಎಲ್.ಸಿ. ಕಳುಹಿಸಲು ತಿಳಿಸಿ ನಂತರ ದೂರು ಕೊಟ್ಟಿರುತ್ತೇನೆ. ಕಾರಣ ಮಾನ್ಯರು ಈ ಬಗ್ಗೆ ಅಪಘಾತಕ್ಕೆ ಕಾರಣನಾದ ನಮ್ಮ ಸಂಭಂದಿ ಹೆಚ್.ಎಂ. ಶಿವಲಿಂಗಯ್ಯ ತಂದೆ ರುದ್ರಯ್ಯ ಸಾ: ಬೂದುಗುಂಪಾ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ನುಡಿ ಹೇಳಿಕೆ ದೂರನ್ನು ಪಡೆದುಕೊಂಡು ವಾಪಸ್ಸು ಸಂಜೆ 7:00 ಗಂಟೆಗೆ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
5) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 189/2015  ಕಲಂ 279, 338 ಐ.ಪಿ.ಸಿ:.
ದಿನಾಂಕ: 01-11-2015 ರಂದುಮದ್ಯಾಹ್ನ 01-20 ಗಂಟೆಗೆ ಕಠಾ ರೆ ಆಸ್ಪತ್ರೆ ಇಲಕಲ್ದಿಂದ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಕಠಾರೆ ಆಸ್ಪತ್ರೆ  ಇಲಕಲಗೆ ಬೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ರಾಜೇಶ್ವರಿ ಗಂಡ ಶರಣಪ್ಪ ಈಳಗೇರ ವಯಾ: 22 ವರ್ಷ  ಜಾ: ಈಳಗೇರ : ಕೂಲಿಕೆಲಸಸಾ: ಉಮಲೂಟಿತಾ: ಸಿಂದನೂರಜಿ: ರಾಯಚೂರ ರವರ ಹೇಳಿಕೆ ಪಿರ್ಯಾಧಿಯನ್ನುಪಡೆದು ಕೊಂಡು ವಾಪಸ ಠಾಣೆ ಇಂದು ಸಂಜೆ 04-00 ಗಂಟೆ ಬಂದು ಸದರ ಫಿರ್ಯಾದಿಯ ಸಾರಾಂಶವೆನೆಂದರೆ ಇಂದು ಮುಂಜಾನೆ 08 ಗಂಟೆಯ ಸುಮಾರಿಗೆ ಪಿರ್ಯಾದಿ ಹಾಗೂ ಪಿರ್ಯಾದಿಯ ಗಂಡಶರಣಪ್ಪ ಈಳಗೇರ ಅವರ ಮಾವ ಬಾಲಪ್ಪ ಈಳಗೇರ, ಅಕ್ಕಳಾದ ತಾಯಮ್ಮಈಳಗೇರ ಮತ್ತು ಹುಲಿಗೆಮ್ಮ ಈಳಗೇರ ಹಾಗೂ ಪ್ಯೂವರ ಅಪರೇಟರಾ ದಬಸನ ಗೌಡಗೌಡ್ರ, ಸೂಪರ ವೈಜರರಾದ ಗಣೇಶ ಶ್ರೇಯಾನ್ರವರು ಎಲ್ಲರೂಕೂಡಿ ಸಿಂದನೂರ- ಕುಷ್ಟಗಿ ಹೊಸ ಡಾಂಬರ ರಸ್ತೆ ಕೆಲಸಮಾಡುತ್ತಿದ್ದಾಗ ಮುಂಜಾನೆ 09-00 ಗಂಟೆಯ ಸುಮಾರಿಗೆ ಬಸ್. ನಂ: ಕೆ.ಎ-37 ಎಫ್-357 ನೇದ್ದರಚಾಲ ಕನಾದ ದುರುಗಪ್ಪ ಮಾದರ :ಅನಗಾವಾಡಿಈತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷ್ಯತನ ದಿಂದ ನಡೆಯಿಸಿ ಕೊಂಡು ಬಂದು ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದ ಪಿರ್ಯಾದಿದಾರಳಿಗೆಟಕ್ಕರ   ಕೊಟ್ಟು ಅಪಘಾತ ಪಡಿಸಿದ್ದು ಅಪಘಾತದಲ್ಲಿ ಹಣೆಗೆ ಪೆಟ್ಟು ಬಿದ್ದು ಬಾಹುಬ ಮದಿದು ಎರಡು ಮೊಣಕಾಲಿಗೆ ತೆರಚಿದ ಗಾಯಾವಾಗಿದ್ದು, ಹಾಗೂ ಎದೆಗೆ ಮತ್ತು ಎಡಪಕ್ಕಡಿ ಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಹಾಗೂ ಸದರ ಬಸ್ಕಂಡಕ್ಟರ ಹನುಮಂತಪ್ಪ ಅಂತಾ ಗೊತ್ತಾಯಿತು. ಅಂತಾ ಮುಂತಾಗಿ ಇದ್ದಪಿರ್ಯಾದಿಯ ಸಾರಾಂಶದಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಳ್ಳಲಾಯಿತು.   

Sunday, November 1, 2015

1) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 244/2015 ಕಲಂ. 341, 504, 506, 323, 324, ಸಹಿತ 34 ಐ.ಪಿ.ಸಿ:.
ದಿನಾಂಕ 31-10-2015 ರಂದು ರಾತ್ರಿ 11-30 ಗಂಟೆಗೆ ಮಹ್ಮದ್ ತಂದೆ ಮಾಬುಸಾಬ್ ಮನಿಯಾರ್, ವಯಸ್ಸು 25 ವರ್ಷ ಜಾ: ಮುಸ್ಲಿಂ, ಉ: ವ್ಯಾಪಾರ, ಸಾ: ಉಪ್ಪಾರ ಓಣಿ ಗಂಗಾವತಿ. ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು  ಅದರ ಸಾರಂಶವೇನೆಂದರೆ, ಫಿರ್ಯಾಧಿದಾರನು ಆರೋಪಿ ಲತೀಪ್ ಇವನಿಗೆ ಆಗಾಗ ಸಾವಿರ ಎರಡು ಸಾವಿರದಂತೆ 8 ಸಾವಿರ ರೂಪಾಯಿಗಳನ್ನು ಈಗ್ಗೆ 1 ವರ್ಷದ ಹಿಂದೆ ಕೈಗಡ ಸಾಲವನ್ನು ಕೊಟ್ಟಿದ್ದು ಸದರಿ ಹಣವನ್ನು ಸಾಯಂಕಾಲ ಕೇಳಿದ್ದು ಸದರಿ ಆರೋಪಿತನು ಇಂದು ದಿನಾಂಕ: 31-10-2015 ರಂದು ರಾತ್ರಿ 9-30 ಗಂಟೆ ತಮ್ಮ ಅಣ್ಣಂದಿರಾದ ಶಕೀಲ್ ಮತ್ತು ಚಾಂದು ಇವರೊಂದಿಗೆ ಬಂದು ಫಿರ್ಯಾದಿಯು ಜಂಬಣ್ಣ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಆರೋಪಿ ಶಕೀಲ್ ಇವನು ಫಿರ್ಯಾದಿಗೆ ತಡೆದು ನಿಲ್ಲಿಸಿ ಲೇ ಸೂಳೇ ಮಗನೆ ನಮ್ಮ ತಮ್ಮನಿಗೆ 3 ಸಾವಿರ ಸಾಲವನ್ನು ಕೊಟ್ಟು 8 ಸಾವಿರ ಕೊಟ್ಟೀನಿ ಕೊಡು ಅಂತಾ ನಮ್ಮ ತಮ್ಮನಿಗೆ ಹೋಡಿತೀಯನಲೇ ಸೂಳೇ ಮಗನೆ ಇವತ್ತು ನಿನ್ನ ಜೀವಸಹಿತ ಬಿಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಫಿರ್ಯಾದಿಗೆ ಕೈಯಿಂದ ಮೈ-ಕೈಗೆ ಹೊಟ್ಟೆಗೆ ಹೊಡೆ-ಬಡೆ ಮಾಡಿ ಯಾವುದೋ ಒಂದು ವಸ್ತುವನ್ನು ತೆಗೆದುಕೊಂಡು ಎಡ ತೋಳಿನ ಹತ್ತಿರ ಗೀರಿ ರಕ್ತಗಾಯ ಮಾಡಿರುತ್ತಾರೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ  ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ನಗರ ಪೊಲೀಸ್ ಠಾಣಾ ಗುನ್ನೆ ನಂ. 212/2015  ಕಲಂ 420, 423, 465, 468, 471, 504, 506 ಐ.ಪಿ.ಸಿ:.

ದಿ:10-08-2015 ರಂದು 3-00 ಪಿ.ಎಮ್ ಕ್ಕೆ ಮಾನ್ಯ ಜೆ,ಎಮ್.ಎಫ್.ಸಿ ಘನ ನ್ಯಾಯಾಲಯ ಕೊಪ್ಪಳದಿಂದಾ ಖಾಸಗಿ ಫಿರ್ಯಾದಿ ಸಂ: /2015 .ಎಲ್.ಟಿ ನಂ: 1250/2015. ದಿ: 04-08-2015. ನೇದ್ದನ್ನು ಕೊಪ್ಪಳ ಗ್ರಾಮೀಣ ಠಾಣಯ ಗುನ್ನೆ ನಂ: 198/15 ರಂತೆ ಪ್ರಕರಣ ದಾಖಲಿಸಿಕೊಂಡು ಹದ್ದಿಯ ಆಧಾರದ ಮೇಲೆ ವರ್ಗಾವಣೆಯಾಗಿ ನಮ್ಮಲ್ಲಿಗೆ  ಬಂದಿದ್ದು, ಸದರಿ ದೂರಿನ ಸಾರಾಂಶವೇನೆಂದರೇ, ಫಿರ್ಯಾದಿದಾರರು ಓಜನಹಳ್ಳಿ ಗ್ರಾಮದ ನಿವಾಸಿಯಾಗಿದ್ದು ಆರೋಪಿಯು ಸಹ ಅದೇ ಗ್ರಾಮದ ವ್ಯಕ್ತಿಯಾಗಿದ್ದು ಹೀಗಾಗಿ ಆರೋಪಿತನು ಫಿರ್ಯಾದಿಗೆ ಸರ್ಕಾರದಿಂದಾ ತಿಂಗಳ ಮಾಶಾಸನ ಮಾಡಿಸುವುದಾಗಿ ಸುಳ್ಳು ಹೇಳಿ ದಿ:24-03-2008 ರಂದು ಬೆಳಿಗ್ಗೆ ಕೊಪ್ಪಳಕ್ಕೆ ಫಿರ್ಯಾದಿಗೆ ಕರೆದುಕೊಂಡು ಬಂದು ತಹಶೀಲದಾರ ಕಾರ್ಯಾಲಯದ ಹತ್ತಿರ ಕೂಡ್ರಿಸಿ ನಂತರ ಉಪನೊಂದಣಾಧಿಕಾರಿಗಳ ಕಚೇರಿಗೆ ಹೋಗಿ ಆರೋಪಿತನು ಫಿರ್ಯಾದಿದಾರರ ಹೆಸರಿನಲ್ಲಿದ್ದ ಕವಲೂರ ಸೀಮಾದ ಜಮೀನು ಸರ್ವೇ ನಂ:766/ಆ ವಿಸ್ತೀರ್ಣ 5.15 .ಗುಂ ಜಮೀನನ್ನು ಕಬಳಿಸಬೇಕೆಂಬ ಉದ್ದೇಶದಿಂದಾ ಖೊಟ್ಟಿ ಖರೀದಿ ಪತ್ರವನ್ನು ತಯಾರಿಸಿಕೊಂಡು ಹೋಗಿ ಮಾಶಾಸನದ ದಾಖಲೆಗಳು ತಯಾರಿ ಆಗಿವೆ ಸಹಿ ಮಾಡು ಅಂತಾ ಫಿರ್ಯಾದಿಗೆ ರಜಿಸ್ಟರ್ ಆಫೀಸ್ ಗೆ ಕರೆದುಕೊಂಡು ಹೋಗಿ ಸಹಿ ಮಾಡಿಸಿ ಫೋಟೊ ತೆಗೆಯಿಸಿ ಫಿರ್ಯಾದಿಯ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿನಲ್ಲಿ ನೊಂದಣಿ ಮಾಡಿಸಿಕೊಂಡು ನಂತರ ಖಾತೆ ಬದಲಾವಣೆ ಮಾಡಿಸಿಕೊಂಡು ಫಿರ್ಯಾದಿಗೆ ಮೋಸ ಮಾಡಿ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿರುತ್ತಾನೆ. ಫಿರ್ಯಾದಿದಾರರು ಆರೋಪಿತನಿಗೆ ಕೇಳಲು ಹೋದರೆ ನಿಮ್ಮ ಜಮೀನು ನನ್ನ ಬಳಿ ಇಲ್ಲಾ ನಾನು ಯಾರಿಗೂ ಯಾವ ಕಾನೂನಿಗೂ ಅಂಜುವುದಿಲ್ಲ. ಅಂತಾ ಹೇಳಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಮೇಲಿಂದ   ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.

 
Will Smith Visitors
Since 01/02/2008